ಅಬ್ಬಾ! ಅಕ್ಷಯ ತೃತೀಯಕ್ಕೆ ಇಷ್ಟೆಲ್ಲ ಇತಿಹಾಸ ಇದೆಯಾ?
Recommended Video
ಏಪ್ರಿಲ್ ಹದಿನೆಂಟನೇ ತಾರೀಕು (ಬುಧವಾರ) ಅಕ್ಷಯ ತೃತೀಯ. ಈ ಅತ್ಯಂತ ಶುಭ ದಿನದ ಬಗ್ಗೆ ಇತಿಹಾಸದಲ್ಲಿ ದಾಖಲಾಗಿರುವ ಅಂಶಗಳೇನು ಎಂಬುದರ ಬಗ್ಗೆ ತಿಳಿಸಿಕೊಡುವ ಲೇಖನವಿದು. ಜತೆಗೆ ಇನ್ನೂ ಒಂದಷ್ಟು ಆಸಕ್ತಿಕರ ಮಾಹಿತಿಗಳನ್ನು ನಿಮ್ಮ ಗಮನಕ್ಕೆ ತರುತ್ತೇವೆ.
* ತ್ರೇತಾ ಯುಗದ ಆರಂಭ ಆಗಿದ್ದು ಇದೇ ಅಕ್ಷಯ ತೃತೀಯದಂದೇ.
* ನರ-ನಾರಾಯಣರು, ಪರಶುರಾಮ ಹಾಗೂ ಹಯಗ್ರೀವರ ಜಯಂತಿ ಇದೇ ದಿನದಂದು.
* ಈ ಭೂಮಿಗೆ ಗಂಗೆಯ ಆಗಮನವಾದದ್ದು ಅಕ್ಷಯ ತೃತೀಯದಂದು.
* ಪಾಂಡವರಿಗೆ ಅಕ್ಷಯ ಪಾತ್ರೆ ದೊರೆತ ದಿನ ಇದು.
* ವೇದವ್ಯಾಸರು ಮಹಾಭಾರತವನ್ನು ಬರೆದದ್ದು ಅಕ್ಷಯ ತೃತೀಯದಂದು.
* ಕಾಶಿಯಲ್ಲಿ ದೇವಿ ಅನ್ನಪೂರ್ಣೆಯು ಆ ಪರಮೇಶ್ವರನಿಗೆ ಕಾಣಿಸಿಕೊಂಡ ದಿನವಿದು.
* ಕುಬೇರನಿಗೆ ಸಂಪತ್ತಿನ ಒಡೆಯನಾಗಿ ಹಾಗೂ ಪಾರುಪತ್ತೇದಾರನಾಗಿ ನೇಮಿಸಿದ ದಿನ ಇದು ಎಂಬ ನಂಬಿಕೆ ಕೂಡ ಇದೆ.
ಏಪ್ರಿಲ್ 18ಕ್ಕೆ ಅಕ್ಷಯ ತೃತೀಯ, ದಿನದ ಮಹತ್ವ ಏನು, ಮಾಡಬೇಕಾದ್ದೇನು?
ಈ ದಿನ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಪೂಜಿಸಬೇಕು. ಒಳ್ಳೆ ಬೆಳೆ ಆಗಲಿ ಎಂದು ಭೂ ದೇವಿಯನ್ನು ಪೂಜೆ ಮಾಡುವ ರೂಢಿ ಕೂಡ ಇದೆ. ಆ ಮೂಲಕ ಧಾನ್ಯ ಲಕ್ಷ್ಮಿಯನ್ನು ಪೂಜಿಸಿ, ಅಭಿವೃದ್ಧಿಗಾಗಿ ಪ್ರಾರ್ಥಿಸಲಾಗುತ್ತಿದೆ. ಹಣ್ಣಿನ ಗಿಡ ನೆಡುವುದಕ್ಕೆ, ಆಯುರ್ವೇದಿಕ ಮೂಲಿಕೆಗಳ ಸಸಿಗಳನ್ನು ನೆಡುವುದಕ್ಕೆ ಅಕ್ಷಯ ತೃತೀಯ ಪ್ರಶಸ್ತವಾದ ದಿನ ಎಂಬ ನಂಬಿಕೆ ಇದೆ.
ಹಾಗೆ ಸಸಿಗಳನ್ನು ನೆಡುವುದರಿಂದ ಹಣ್ಣುಗಳಿಗಾಗಲೀ ಆಯುರ್ವೇದ ಸಸ್ಯಗಳಾಗಲೀ ಕೊರತೆ ಬೀಳುವುದಿಲ್ಲ ಎಂಬುದು ನಂಬಿಕೆ.