ಫಲ ತುಂಬಿದ ದಾಳಿಂಬೆ ಮರಗಳನ್ನು ಜೆಸಿಬಿಯಿಂದ ನೆಲಸಮಗೊಳಿಸಿದ ಬಳ್ಳಾರಿ ರೈತ ಮಹಿಳೆ
ಬಳ್ಳಾರಿ, ಏಪ್ರಿಲ್ 14: ಕೊರೊನಾ ಮಹಾಮಾರಿಗೆ ವಿಶ್ವವೇ ನಲುಗುತ್ತಿದೆ. ಜನಜೀವನವಂತೂ ಅಸ್ತವ್ಯಸ್ತವಾಗಿದೆ. ಬೆಳೆ ಕೊಯ್ಲಿಗೆ ಬಂದಿದ್ದರೂ, ಅವುಗಳನ್ನು ಮಾರಲಾಗದೇ ರೈತರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ.
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ರೈತ ಮಹಿಳೆಯೊಬ್ಬರದ್ದೂ ಇದೇ ಕಥೆಯಾಗಿದೆ. ತಾವು ಬೆಳೆದಿದ್ದ ದಾಳಿಂಬೆಯನ್ನು ಮಾರುಕಟ್ಟೆಗೆ ತಂದು ಮಾರಲು ಸಾಧ್ಯವಾಗದೇ ಅವುಗಳನ್ನು ನಾಶಪಡಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಕೊಟ್ಟಿರುವ ಭರವಸೆ ಏನು?
ತಮ್ಮ ಜಮೀನಿನಲ್ಲಿ ಬೆಳೆದ ದಾಳಿಂಬೆ ಬೆಳೆಯನ್ನು ಜೆಸಿಬಿ ಮೂಲಕ ಅವರು ನಾಶ ಮಾಡಿದ್ದಾರೆ. ಸುಮಾರು ಆರು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆಯನ್ನು ಬೆಳೆದಿದದರು. ಇಳುವರಿಯೂ ಚೆನ್ನಾಗಿ ಬಂದಿತ್ತು. ಆದರೆ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಆಗದ ಕಾರಣ ಬೆಳೆಯನ್ನು ಸಂಪೂರ್ಣವಾಗಿ ಜೆಸಿಬಿ ಇಂದ ನಾಶ ಮಾಡಿದ್ದಾರೆ.
ಹೂವಿನ ಹಡಗಲಿ ತಾಲೂಕಿನ ಬಹುತೇಕ ರೈತರು ಕೃಷಿ ಇಲಾಖೆಯಿಂದ ಸೌಲಭ್ಯ ಸರಿಯಾಗಿ ಸಿಗದ ಕಾರಣ ತಮ್ಮ ತಮ್ಮ ತೋಟದಲ್ಲಿ ಬೆಳೆದ ಬೆಳೆಯನ್ನು ನಾಶ ಮಾಡುತ್ತಿರುವ ಸಂಗತಿ ಮುಂದುವರೆಯುತ್ತಿದೆ.