ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರೀ ಮಳೆ; ಈರುಳ್ಳಿ ಬೆಳೆ ಸಂರಕ್ಷಣೆಗೆ ರೈತರಿಗೆ ಸಲಹೆಗಳು

|
Google Oneindia Kannada News

ಬಳ್ಳಾರಿ, ಸೆಪ್ಟೆಂಬರ್ 18; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ.

ಈರುಳ್ಳಿ ಬೆಳೆಯಲ್ಲಿ ಹವಮಾನ ವೈಪರಿತ್ಯ ಹಾಗೂ ಸತತ ಮಳೆಯಿಂದಾಗಿ ಶಿಲೀಂಧ್ರ್ರದ ಬೆಳವಣಿಗೆಯಿಂದ ಕೊಳೆ ರೋಗಭಾಧೆಯು ಕಾಣಿಸಿಕೊಂಡಿದೆ. ಬಳ್ಳಾರಿ ತಾಲೂಕಿನ ವಿವಿಧ ಭಾಗಗಳಲ್ಲಿ ಈ ರೋಗ ಕಂಡು ಬರುತ್ತಿದ್ದು ಈರುಳ್ಳಿ ಬೆಳೆಯುವ ರೈತರು ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಲಾಗಿದೆ.

ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ; ರೈತರಿಗೆ ಉಚಿತವಾಗಿ ಔಷಧಿ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ; ರೈತರಿಗೆ ಉಚಿತವಾಗಿ ಔಷಧಿ

ಹೂವಿನಹಡಗಲಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಈರುಳ್ಳಿ ಬೆಳೆಯುವ ರೈತರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ತಜ್ಞರು ನೀಡಿರುವ ಸಲಹೆಗಳನ್ನು ರೈತರು ಪಾಲಿಸಿಕೊಂಡು ಬೆಳೆ ಸಂರಕ್ಷಣೆ ಮಾಡಿಕೊಳ್ಳಬಹುದಾಗಿದೆ.

ಮಳೆ ತಂದ ಸಂಕಷ್ಟ: ಈರುಳ್ಳಿ ಬೆಳೆಗಾರರಿಗೆ ಭಾರಿ ಹೊಡೆತ ಮಳೆ ತಂದ ಸಂಕಷ್ಟ: ಈರುಳ್ಳಿ ಬೆಳೆಗಾರರಿಗೆ ಭಾರಿ ಹೊಡೆತ

Weather Change Suggestions To Protect Onion Crop

ಮುಂಜಾಗ್ರತೆ ಕ್ರಮಗಳು: ಪರ್ಯಾಯ ಬೆಳೆ ಪದ್ಧತಿಯನ್ನು ಅನುಸರಿಸಬೇಕು (ಪದೇ ಪದೇ ಈರುಳ್ಳಿ ಬೆಳೆಯನ್ನು ಒಂದೇ ಹೊಲದಲ್ಲಿ ಹಲವು ಬಾರಿ ಬೆಳೆಯುತ್ತಿದ್ದರೆ ಕೊಳೆ ರೋಗ ಭಾಧೆಯು ಹೆಚ್ಚಾಗಿ ಬರುತ್ತದೆ).

ಭಾರೀ ಮಳೆ ಈರುಳ್ಳಿ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು ಭಾರೀ ಮಳೆ ಈರುಳ್ಳಿ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು

ಹೊಲದಲ್ಲಿ ನೀರು ನಿಲ್ಲದಂತೆ ಹಾಗೂ ಹೆಚ್ಚಿನ ತೇವಾಂಶವಿರದಂತೆ ಎಚ್ಚರವಹಿಸಬೇಕು. ಹೆಚ್ಚು ನೀರು ನಿಂತರೆ ಈರುಳ್ಳಿ ಗಡ್ಡೆಗಳು ಕೊಳೆ ರೋಗ ಭಾಧೆಗೆ ಬೇಗನೆ ಹಾಳಾಗುತ್ತವೆ. ಕಳೆ ಬರದಂತೆ ನಿಯಂತ್ರಿಸಬೇಕು ಎಂದು ಸಲಹೆ ನೀಡಲಾಗಿದೆ.

ಟ್ರೈಕೋಡರ್ಮಾ 2 ಕಿ. ಗ್ರಾಂ. ಪ್ರತಿ 100 ಕಿ. ಗ್ರಾಂ. ಕೊಟ್ಟಿಗೆ ಗೊಬ್ಬರಕ್ಕೆ ಚೆನ್ನಾಗಿ ಬೆರಸಿ ಹೊಲದಲ್ಲಿ ಎಲ್ಲಾ ಕಡೆಯು ಸಮಪ್ರಮಾಣದಲ್ಲಿ ಹಾಕಬೇಕು ಇದರಿಂದ ಶೀಲಿಂಧ್ರ್ರ ಬೆಳವಣಿಗೆಯನ್ನು ತಡೆಯುತ್ತದೆ.

Weather Change Suggestions To Protect Onion Crop

Vespa (Propiconazole 13.9% + Difenconazole 13.9% EC) 1ಮೀಲಿ/ ಲೀಟರ್ ನೀರಿಗೆ, Taqat (Captan 70% + Hexaconazole 5% WP) 2ಗ್ರಾಂ/1 ಲೀಟರ್ ನೀರಿಗೆ,Amistar Top (Azoxystrobin 20% + Difenoconazole 12.5% SC) 1ಮೀಲಿ/1 ಲೀಟರ್ ನೀರಿಗೆ,(Tricyclazole 18% + Mancozeb 62% WP) 2ಗ್ರಾಂ/1 ಲೀಟರ್ ನೀರಿಗೆ,
Custodia (Azoxystrobin 11% + Tebuconazole 18.3% w/w SC) 1ಮೀಲಿ/1 ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು.

ಈ ಮೇಲಿನ ಔಷಧಿಗಳಲ್ಲಿ ಒಂದನ್ನು ಬಳಸಿದ ನಂತರ ಮತ್ತೊಮ್ಮೆ ಪುನಾರವರ್ತಿಸದೇ 8 ದಿನಗಳ ಅವಧಿಯಲ್ಲಿ 2 ಬಾರಿ ಸಿಂಪರಣೆಯನ್ನು ಕೈಗೊಂಡು ಈರುಳ್ಳಿ ಬಳೆಯಲ್ಲಿ ಕೊಳೆ ರೋಗ ನಿಯಂತ್ರಿಸಬಹುದು ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.

English summary
Heavy rain in Karnataka due to weather change. Onion crop witnessed for diseases. Here are the suggestion to protect crop
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X