ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈತರ ಕೈಗೆ ಕೋಳ, ನಾಯಕ್ ಕಿಡಿಕಿಡಿ
ನಗರದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ನೆರೆ ಸಂತ್ರಸ್ಥರ ಬದುಕು ಬವಣೆಗಳನ್ನು ಸೆರೆ ಹಿಡಿದಿರುವ ಛಾಯಾಗ್ರಾಹಕ ಈಶ ಅವರ ಛಾಯಾಚಿತ್ರಗಳ ಪ್ರದರ್ಶನವನ್ನು ವೀಕ್ಷಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಇದೊಂದು ಅತ್ಯಂತ ಕೆಟ್ಟ, ಹೀನ ಕೆಲಸ. ಇದಕ್ಕೆ ಕಾರಣರಾದವರನ್ನು ಕೇವಲ ಸೇವೆಯಿಂದ ಅಮಾನತು ಮಾಡಿದರೆ ಸಾಲದು. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರತೆಗೆ ನಿಯೋಜಿಸಲಾಗಿರುವ ಪೊಲೀಸರಿಗೇ ಜೀವ ಬೆದರಿಕೆ ಇರುವಂತಹ ಅಪರಾಧಿಗಳಿಗೆ ಮಾತ್ರ ಕೈಕೋಳ ತೊಡಿಸಲು ಕಾನೂನಿನಲ್ಲಿ ಅವಕಾಶವಿದೆ. ಅನ್ಯಾಯದ ವಿರುದ್ಧ ಸ್ವಯಂ ಬಂಧನಕ್ಕೊಳಗಾಗಿ ಉಪವಾಸ ಮಾಡಿ ಅಸ್ವಸ್ಥರಾದ ರೈತರನ್ನು ಆಸ್ಪತ್ರೆಗೆ ಕರೆದೊಯ್ಯಲು ಬೇಡಿ ತೊಡಿಸಿದ್ದು ಅಮಾನವೀಯ. ಸರಕಾರದ ಈ ಧೋರಣೆ ಅಮಾನುಷವಾದುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
Comments
ಧಾರವಾಡ ಪ್ರತಿಭಟನೆ protest farmer flood victims ಸಂತ್ರಸ್ಥರು ಎಸ್ ಆರ್ ನಾಯಕ್ ಮಾನವ ಹಕ್ಕು ಆಯೋಗ sr nayak dharwad
Story first published: Friday, January 8, 2010, 10:30 [IST]