"ಆತ್ಮನಿರ್ಭರ ಯೋಜನೆಯಡಿ 39,300 ಕೋಟಿ ರೂಪಾಯಿ ಸಾಲ ವಿತರಣೆ ಗುರಿ"
ಚಿಕ್ಕಬಳ್ಳಾಪುರ, ನವೆಂಬರ್ 17: ಸಹಕಾರ ಕ್ಷೇತ್ರದಲ್ಲಿ ಕರ್ನಾಟಕವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ಪೂರಕ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಿದ್ದೇವೆ. ಅನೇಕ ಯೋಜನೆಗಳ ಮೂಲಕ ಹೆಜ್ಜೆಯನ್ನಿಟ್ಟಿದ್ದೇವೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020ರ ನಾಲ್ಕನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಸಾರ್ವಜನಿಕರಿಗೆ ಆರ್ಥಿಕ ಬಲ ತುಂಬುವ ಕಾರ್ಯಕ್ಕೆ ಸಹಕಾರ ಇಲಾಖೆ ಮೂಲಕ ಕರ್ನಾಟಕದಲ್ಲಿಯೇ ಮೊದಲು ಚಾಲನೆ ನೀಡಿರುವುದಾಗಿ ಕೇಂದ್ರ ಮಂತ್ರಿಗಳಾದ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದು, ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಮುಂದೆ ಓದಿ...
ಸಹಕಾರ ಸಪ್ತಾಹಕ್ಕೆ ಚಾಲನೆ: ಸಹಕಾರ ರತ್ನ ಪ್ರಶಸ್ತಿ ಪ್ರದಾನ
5092 ಕೋಟಿ ರೂಪಾಯಿ ಸಾಲ ಮನ್ನಾ
ಹಿಂದಿನ
ಸರ್ಕಾರ
ಸಾಲ
ಮನ್ನಾ
ಘೋಷಣೆ
ಮಾಡಿತು.
ಆದರೆ,
ಬಹುತೇಕ
ರೈತ
ಫಲಾನುಭವಿಗಳಿಗೆ
ಪ್ರಯೋಜನ
ಲಭಿಸಿರಲಿಲ್ಲ.
2.30
ಲಕ್ಷ
ರೈತರಿಗೆ
ಸಾಲ
ಮನ್ನಾ
ಬಾಕಿ
ಇತ್ತು.
ಹೀಗಾಗಿ
ಒಟ್ಟಾರೆ
ಬಾಕಿ
ಇದ್ದ
5092
ಕೋಟಿ
ರೂಪಾಯಿಯ
ಸಾಲ
ಮನ್ನಾವನ್ನು
ನಮ್ಮ
ಸರ್ಕಾರ
ಮಾಡಿದೆ.
ಚಿಕ್ಕಾಬಳ್ಳಾಪುರ
ಹಾಗೂ
ಕೋಲಾರದಲ್ಲಿ
40
ಮಂದಿಗೆ
ಮಾತ್ರ
ಸಾಲಮನ್ನಾ
ಬಾಕಿ
ಇದ್ದು,
ಅದನ್ನು
ಸಹ
ಶೀಘ್ರದಲ್ಲಿಯೇ
ಪರಿಹರಿಸಲಾಗುವುದು
ಎಂದು
ತಿಳಿಸಿದರು.
ಲಕ್ಷಾಂತರ
ಮಂದಿಗೆ
ಸಹಕಾರ
ಕ್ಷೇತ್ರದಿಂದ
ಉದ್ಯೋಗ
ಸಿಗುತ್ತಿದೆ.
ಬೀದರ್
ನಲ್ಲಿ
ಸಹಕಾರ
ಕ್ಷೇತ್ರದ
ವತಿಯಿಂದ
ಆಸ್ಪತ್ರೆ
ಕಟ್ಟಿಸಿದ್ದು,
ಲಕ್ಷಾಂತರ
ಮಂದಿಗೆ
ಉಪಯೋಗವಾಗುತ್ತಿದೆ.
ಬೆಳಗಾವಿಯಲ್ಲಿ
ಎಲೆಕ್ಟ್ರಾನಿಕ್
ಉತ್ಪನ್ನಗಳ
ಘಟಕವನ್ನು
ಪ್ರಾರಂಭಿಸಲಾಗಿದೆ.
ಇದೇ
ರೀತಿ
ರಾಜ್ಯದ
ವಿವಿಧೆಡೆ
ಸಹಕಾರಿಗಳಿಂದ
ಹೆಚ್ಚಿನ
ಉತ್ತಮ
ಕೆಲಸವಾಗುತ್ತಿದೆ
ಎಂದು
ತಿಳಿಸಿದರು.
39,300 ಕೋಟಿ ರೂಪಾಯಿ ಸಾಲ ವಿತರಣೆ ಗುರಿ
ಆತ್ಮನಿರ್ಭರ ಯೋಜನೆಯಡಿ ರಾಜ್ಯ ಸರ್ಕಾರ ಹಾಗೂ ಸಹಕಾರ ಇಲಾಖೆ ನೇತೃತ್ವದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಇದರ ಮೂಲಕ 39,300 ಕೋಟಿ ರೂಪಾಯಿ ಸಾಲ ವಿತರಣೆ ಗುರಿಯನ್ನು ಹಾಕಿಕೊಳ್ಳಲಾಗಿದೆ. ಆರ್ಥಿಕ ಸ್ಪಂದನವನ್ನು 4 ವಿಭಾಗಗಳಾಗಿ ವಿಂಗಡಿಸಿ ಚಾಲನೆ ನೀಡಿದ್ದೇವೆ. ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳ ಮೂಲಕ ಈಗಾಗಲೇ ಸಾಲ ವಿತರಣೆ ಮಾಡಲು ಚಾಲನೆ ನೀಡಲಾಗಿದೆ. ಎಲ್ಲ ಕಡೆಗಳಲ್ಲೂ ಉತ್ತಮ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.
ಮೈಸೂರಿನ ಸಂಪೂರ್ಣ ಅಭಿವೃದ್ಧಿಗೆ ನಾನು ಬದ್ಧ; ಸೋಮಶೇಖರ್
15 ಲಕ್ಷ ರೈತರಿಗೆ 10 ಸಾವಿರ ಕೋಟಿ ರೂ. ಸಾಲ ವಿತರಣೆ
ಕೋವಿಡ್
ಸಂದರ್ಭ
ಎದುರಾದ
ಹಿನ್ನೆಲೆಯಲ್ಲಿ
ರೈತರಿಗೆ
ಪ್ರಸಕ್ತ
ಸಾಲಿನಲ್ಲಿ
ಸಾಲ
ನೀಡುವುದು
ಬಹಳ
ಕಷ್ಟ
ಎಂದೇ
ಅಂದಾಜಿಸಲಾಗಿತ್ತು.
ಕಳೆದ
ವರ್ಷ
ನೀಡಲಾಗಿದ್ದ
13500
ಕೋಟಿಯಷ್ಟು
ಸಾಲವನ್ನೂ
ನೀಡಲು
ಕಷ್ಟವಾಗಬಹುದು
ಎಂಬ
ಆತಂಕದ
ನಡುವೆ
24
ಲಕ್ಷ
ರೈತರಿಗೆ
15,300
ಕೋಟಿ
ರೂಪಾಯಿ
ಸಾಲ
ವಿತರಣೆ
ಗುರಿ
ಹಾಕಿಕೊಂಡೆವು.
ಅದರನ್ವಯ
ಈವರೆಗೆ
ಅಂದರೆ
ನವೆಂಬರ್
16ರವರೆಗೆ
15,22,076
ರೈತರಿಗೆ
9945.82
ಕೋಟಿ
ರೂಪಾಯಿ
ಸಾಲವನ್ನು
ನೀಡಿದ್ದೇವೆ
ಎಂದು
ತಿಳಿಸಿದರು.
ಕೋವಿಡ್
19ರ
ಸಂಕಷ್ಟದ
ಕಾಲದಲ್ಲಿ
ಲಾಭದಲ್ಲಿರುವ
ಸಹಕಾರ
ಸಂಸ್ಥೆಗಳಿಂದ
ದೇಣಿಗೆ
ಸಂಗ್ರಹಿಸಿ
53
ಕೋಟಿ
ರೂಪಾಯಿಯನ್ನು
ಮುಖ್ಯಮಂತ್ರಿಗಳ
ಪರಿಹಾರ
ನಿಧಿಗೆ
ಕೊಟ್ಟಿದ್ದೇವೆ.
ಕೊರೊನಾ
ವಾರಿಯರ್
ಗಳಾದ
42600
ಆಶಾ
ಕಾರ್ಯಕರ್ತೆಯರಿಗೂ
ತಲಾ
3000
ರೂಪಾಯಿಯಂತೆ
ಒಟ್ಟು
12.75
ಕೋಟಿ
ರೂಪಾಯಿಯನ್ನು
ವಿತರಣೆ
ಮಾಡಿದ್ದೇವೆ.
ಇದು
ನೂರಕ್ಕೆ
ನೂರರಷ್ಟು
ಯಶಸ್ವಿಯಾಗಿದ್ದಕ್ಕೆ
ಸಂತಸವಿದೆ
ಎಂದರು.
ಸಹಕಾರ ಇಲಾಖೆ ಶ್ಲಾಘಿಸಿದ ಸಚಿವ ಸುಧಾಕರ್, ಸಂಸದ ಬಚ್ಚೇಗೌಡ
ಇದೇ ಸಂದರ್ಭ ಮಾತನಾಡಿದ ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಕಳೆದ 8 ವರ್ಷಗಳಿಂದ ಎಸ್.ಟಿ.ಸೋಮಶೇಖರ್ ಅವರನ್ನು ನೋಡುತ್ತಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ಅವರಿಗೆ ಇರುವ ಅನುಭವ ಭಾರಿ ದೊಡ್ಡದು. ಈಗ ಅವರು ಅದೇ ಕ್ಷೇತ್ರದ ಸಚಿವರಾದ ಮೇಲೆ ಆ ಅನುಭವದ ಫಲ ಕಾಣುತ್ತಿದ್ದೇವೆ. ಕೋವಿಡ್ ದುಸ್ಥಿತಿ ವೇಳೆ ಆರ್ಥಿಕ ಪರಿಸ್ಥಿತಿ ಅಷ್ಟಾಗಿ ಉತ್ತಮವಾಗಿರಲಿಲ್ಲ. ಹೀಗಾಗಿ ಕಳೆದ ಬಾರಿ ರೈತರಿಗೆ 13500 ಕೋಟಿ ರೂಪಾಯಿ ಸಾಲ ನೀಡಲಾಗಿತ್ತು. ಆದರೆ, ಈ ಬಾರಿ ಅಷ್ಟು ಪ್ರಮಾಣದ ಸಾಲ ನೀಡಿಕೆ ಕಷ್ಟ ಎಂಬ ಪರಿಸ್ಥಿತಿ ಉಂಟಾಗಿತ್ತು. ಹೀಗಿದ್ದರೂ ಸಹಕಾರ ಸಚಿವ ಸೋಮಶೇಖರ್ ಅವರು 15300 ಕೋಟಿ ರೂಪಾಯಿ ಸಾಲ ನೀಡಿಕೆ ಗುರಿಯನ್ನು ಹಾಕಿಕೊಂಡು ಸಾಲ ನೀಡುವಲ್ಲಿ ಶ್ರಮವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಂಸದರಾದ ಬಚ್ಚೇಗೌಡ ಮಾತನಾಡಿ, ಸಹಕಾರ ಸಚಿವರು ಸಹಕಾರ ರಂಗದಲ್ಲಿ ಪ್ರತಿ ಜಿಲ್ಲೆಗಳಿಗೂ ಪ್ರಾತಿನಿಧ್ಯ ಕೊಡುತ್ತಿದ್ದಾರೆ. ಖುದ್ದು ಅವರು ಭೇಟಿ ಮಾಡಿ ಸಹಕಾರ ಕ್ಷೇತ್ರದ ಪ್ರಗತಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದಕ್ಕಾಗಿ ನಾನು ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.