ತ್ವರಿತ ಅಲರ್ಟ್ ಗಳಿಗಾಗಿ
For Daily Alerts
13 ರೈತರನ್ನು ಬಲಿ ಪಡೆದಿದ್ದ ತಾಮ್ರ ಘಟಕ ಬಂದ್ : ಇಪಿಎಸ್
ಚೆನ್ನೈ, ಮೇ 28: ವೇದಾಂತ ಸಮೂಹ ಸಂಸ್ಥೆಗೆ ಸೇರಿರುವ ಸ್ಟರ್ಲೈಟ್ ತಾಮ್ರ ಘಟಕವನ್ನು ಶಾಶ್ವತವಾಗಿ ಬಂದ್ ಮಾಡುವಂತೆ ತಮಿಳುನಾಡು ಸರ್ಕಾರ ಆದೇಶಿಸಿದೆ. ಮೇ 22ರಂದು ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರ ಮೇಲೆ ಗೋಲಿಬಾರ್ ಮಾಡಲಾಗಿ, 13 ಮಂದಿ ರೈತರು ಮೃತಪಟ್ಟಿದ್ದರು.
ವಾರ್ಷಿಕವಾಗಿ 4,00,000 ಟನ್ ಉತ್ಪಾದನೆ ಹೊಂದಿರುವ ಈ ತಾಮ್ರ ಘಟಕದ ಮೇಲೆ ಪರಿಸರ ಮಾಲಿನ್ಯದ ಆರೋಪ ಕೇಳಿ ಬಂದಿತ್ತು. ರಾಜ್ಯ ಪರಿಸರ ಮಾಲಿನ್ಯ ಘಟಕದಿಂದ ಲೈಸನ್ ನವೀಕರಣವಾಗಿರಲಿಲ್ಲ. ಆದರೆ, ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಲೈಸನ್ ನವೀಕರಣ ಪಡೆದುಕೊಂಡಿದ್ದ ಸಂಸ್ಥೆ ವಿರುದ್ಧ ಸ್ಥಳೀಯರು ತಿರುಗಿಬಿದ್ದಿದ್ದರು.
2013ರಲ್ಲೇ ಅಂದಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಈ ಘಟಕ ಮುಚ್ಚಲು ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Comments
English summary
Tamil Nadu government has taken resolute steps for the permanent closure of Vedanta Group's Sterlite copper plant. In 2013, the copper plant was shut by late Chief Minister J Jayalalithaa.
Story first published: Monday, May 28, 2018, 17:46 [IST]