ಹವಾಮಾನ ಬದಲಾವಣೆ, ಅಪೌಷ್ಟಿಕತೆ ಎದುರಿಸಲು 35 ಬೆಳೆಗಳ ವಿಶೇಷ ತಳಿ ಬಿಡುಗಡೆಗೊಳಿಸಿದ ಮೋದಿ
ನವದೆಹಲಿ, ಸೆಪ್ಟೆಂಬರ್ 28: ದೇಶದಲ್ಲಿ ಹವಾಮಾನ ಬದಲಾವಣೆ ಹಾಗೂ ಅಪೌಷ್ಟಿಕತೆಯ ಸವಾಲನ್ನು ಎದುರಿಸಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಭಿವೃದ್ಧಿಪಡಿಸಿದ 35 ಬೆಳೆಗಳ ತಳಿಗಳನ್ನು ಪ್ರಧಾನಿ ಮೋದಿ ಮಂಗಳವಾರ ಬಿಡುಗಡೆ ಮಾಡಿದರು.
ಐಸಿಎಆರ್ನ ಎಲ್ಲಾ ಸಂಸ್ಥೆಗಳು, ರಾಜ್ಯ, ಕೇಂದ್ರ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಆಯೋಜಿಸಲಾದ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಹೊಸ ಬೆಳೆಗಳ ತಳಿಗಳನ್ನು ಮೋದಿ ಬಿಡುಗಡೆ ಮಾಡಿದರು.
ಆಯುಷ್ಮಾನ್ ಭಾರತ್ ಡಿಜಿಟಲ್-ಕ್ರಾಂತಿಕಾರಿ ಬದಲಾವಣೆ: ಮೋದಿ
2021ರಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವ ಹಾಗೂ ಹೆಚ್ಚಿನ ಪೌಷ್ಟಿಕಾಂಶದ ವಿಶೇಷ ಅಂಶಗಳನ್ನು ಹೊಂದಿರುವ 35 ಬೆಳೆಗಳ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅದನ್ನು ಇಂದು ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಲಡಾಖ್ನಲ್ಲಿ ನಿರ್ಮಾಣವಾಗಿರುವ ಏಷ್ಯಾದ ಅತಿ ಉದ್ದದ ಸುರಂಗಮಾರ್ಗ ಇಂದು ಉದ್ಘಾಟನೆ
ಬರ ಸಹಿಷ್ಣು ಸಾಮರ್ಥ್ಯದ ವಿಧದ ಕಡಲೆ, ಸೋಯಾಬೀನ್, ರೋಗನಿರೋಧಕ ಅಂಶಗಳನ್ನು ಹೊಂದಿರುವ ಅಕ್ಕಿ, ಗೋಧಿ, ಬಲವರ್ಧಿತ ಗೋಧಿ, ರಾಗಿ, ಜೋಳ, ಕಡಲೆ, ಹುರುಳಿ ಹಾಗೂ ಇತರೆ ತಳಿಗಳನ್ನು ಪರಿಚಯಿಸಲಾಗಿದೆ. ಮುಂದೆ ಓದಿ...
ರೈತರೊಂದಿಗೆ ಮೋದಿ ಸಂವಾದ
ಕೃಷಿ ವಿಶ್ವವಿದ್ಯಾಲಯಗಳಿಗೆ 'ಹಸಿರು ಕ್ಯಾಂಪಸ್' ಪ್ರಶಸ್ತಿಯನ್ನು ಮೋದಿ ಪ್ರದಾನ ಮಾಡಿದರು. ರಾಯ್ಪುರದ ರಾಷ್ಟ್ರೀಯ ಜೈವಿಕ ಒತ್ತಡ ನಿರ್ವಹಣಾ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಮುಚ್ಚಯವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದರು. ನೂತನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಿರುವ ರೈತರೊಂದಿಗೆ ಸಂವಾದ ನಡೆಸಿದರು. ನವೀನ ಕೃಷಿ ಪದ್ಧತಿ, ಅದರ ಸವಾಲುಗಳು, ಪ್ರಯೋಜನಗಳು, ಸಣ್ಣ ಹಿಡುವಳಿ ಹೊಂದಿರುವ ರೈತರ ಅಗತ್ಯಗಳ ಕುರಿತು ಚರ್ಚೆ ನಡೆಸಿದರು. ಬೆಳೆಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡುತ್ತಿರುವ ಮೋದಿ ರೈತರನ್ನು ಶ್ಲಾಘಿಸಿದರು.
ಕೃಷಿಯಲ್ಲಿ ಆದ್ಯತೆಯಾಗಿ ವಿಜ್ಞಾನ, ತಂತ್ರಜ್ಞಾನದ ಬಳಕೆ
ಮಾರುಕಟ್ಟೆ ಪ್ರವೇಶ, ಉತ್ತಮ ಗುಣಮಟ್ಟದ ಬೀಜಗಳು, ಮಣ್ಣಿನ ಆರೋಗ್ಯ ಕಾರ್ಡ್ಗಳು ಮುಂತಾದ ಅನೇಕ ಕ್ರಮಗಳೊಂದಿಗೆ ರೈತರು ಉತ್ತಮ ಬೆಲೆ ಪಡೆಯಲು ಸರ್ಕಾರ ಪ್ರಯತ್ನಗಳನ್ನು ಮುಂದುವರೆಸುತ್ತಿದೆ. ಕಳೆದ 6-7 ವರ್ಷಗಳಲ್ಲಿ ಕೃಷಿಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಆದ್ಯತೆಯಲ್ಲಿ ಬಳಸಲಾಗುತ್ತಿದೆ. ಪೌಷ್ಟಿಕ ತಳಿಗಳ ಮೇಲೆ ನಮ್ಮ ಗಮನವಿದೆ. ಹೊಸ ಪರಿಸ್ಥಿತಿಗಳಿಗೆ, ಅದರಲ್ಲೂ ವಿಶೇಷವಾಗಿ, ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳುವ ಬೆಳೆಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ ಎಂದು ವಿವರಿಸಿದರು.
ಮಿಡತೆ ದಾಳಿ ನೆನಪಿಸಿಕೊಂಡ ಮೋದಿ
ಕಳೆದ
ವರ್ಷ
ಕೊರೊನಾ
ಸಾಂಕ್ರಾಮಿಕ
ರೋಗದ
ನಡುವೆ
ವಿವಿಧ
ರಾಜ್ಯಗಳಲ್ಲಿ
ನಡೆದ
ಬೃಹತ್
ಮಿಡತೆ
ದಾಳಿಯ
ಕುರಿತು
ಪ್ರಸ್ತಾಪಿಸಿದ
ಮೋದಿ,'
ಭಾರತವು
ಸಾಕಷ್ಟು
ಪ್ರಯತ್ನಗಳ
ಮೂಲಕ
ಈ
ದಾಳಿಯನ್ನು
ನಿಭಾಯಿಸಲಾಯಿತು.
ರೈತರಿಗೆ
ಹೆಚ್ಚಿನ
ಹಾನಿಯಾಗದಂತೆ
ತಡೆಯಲಾಯಿತು'
ಎಂದು
ನೆನಪಿಸಿಕೊಂಡರು.
ರೈತರ
ಅನುಕೂಲಕ್ಕೆ,
ಭೂಮಿ
ರಕ್ಷಣೆಗೆ
11
ಕೋಟಿ
ಮಣ್ಣಿನ
ಆರೋಗ್ಯ
ಕಾರ್ಡ್ಗಳನ್ನು
ನೀಡಲಾಗಿದೆ.
ರೈತರಿಗೆ
ನೀರಿನ
ಭದ್ರತೆ
ಒದಗಿಸಲು
ಬಾಕಿ
ಇರುವ
ಸುಮಾರು
100
ನೀರಾವರಿ
ಯೋಜನೆಗಳನ್ನು
ಪೂರ್ಣಗೊಳಿಸುವ
ಅಭಿಯಾನ,
ರೋಗಗಳಿಂದ
ಬೆಳೆಗಳನ್ನು
ರಕ್ಷಿಸಲು
ರೈತರಿಗೆ
ಹೊಸ
ರೀತಿಯ
ಬೀಜಗಳನ್ನು
ಒದಗಿಸುವ
ಯೋಜನೆಗಳ
ಕುರಿತು
ವಿವರಣೆ
ನೀಡಿದರು.
ಕನಿಷ್ಠ
ಬೆಂಬಲ
ಬೆಲೆ
ಹೆಚ್ಚಿಸುವುದರ
ಜೊತೆಗೆ,
ಖರೀದಿ
ಪ್ರಕ್ರಿಯೆಯನ್ನು
ಸುಧಾರಿಸಲಾಗಿದೆ,
ಇದರಿಂದ
ಹೆಚ್ಚು
ರೈತರು
ಪ್ರಯೋಜನ
ಪಡೆಯಬಹುದು
ಎಂದರು.
ಮೌಲ್ಯವರ್ಧನೆಗೆ ಆದ್ಯತೆ ನೀಡಲಾಗುತ್ತಿದೆ; ಮೋದಿ
ಹವಾಮಾನ
ಬದಲಾವಣೆಯಿಂದಾಗಿ
ಹೊಸ
ರೀತಿಯ
ಕೀಟಗಳು,
ಹೊಸ
ರೋಗಗಳು,
ಸಾಂಕ್ರಾಮಿಕ
ರೋಗಗಳು
ಹೊರಹೊಮ್ಮುತ್ತಿವೆ,
ಇದರಿಂದಾಗಿ
ಮಾನವರು
ಮತ್ತು
ಜಾನುವಾರುಗಳ
ಆರೋಗ್ಯಕ್ಕೆ
ದೊಡ್ಡ
ಅಪಾಯವಿದೆ
ಮತ್ತು
ಬೆಳೆಗಳ
ಮೇಲೂ
ಪರಿಣಾಮ
ಬೀರುತ್ತಿವೆ
ಎಂದರು.
ಬೆಳೆ
ಆಧಾರಿತ
ಆದಾಯ
ವ್ಯವಸ್ಥೆಯಿಂದ
ರೈತನನ್ನು
ಹೊರತಂದು
ಮೌಲ್ಯವರ್ಧನೆ
ಮತ್ತು
ಇತರ
ಕೃಷಿ
ಆಯ್ಕೆಗಳಿಗೆ
ಪ್ರೋತ್ಸಾಹಿಸಲು
ಪ್ರಯತ್ನಿಸಲಾಗುತ್ತಿದೆ.
ವಿಜ್ಞಾನ
ಮತ್ತು
ಸಂಶೋಧನೆಯ
ಪರಿಹಾರಗಳೊಂದಿಗೆ
ಸಿರಿಧಾನ್ಯಗಳು
ಮತ್ತು
ಇತರ
ಧಾನ್ಯಗಳನ್ನು
ಮತ್ತಷ್ಟು
ಅಭಿವೃದ್ಧಿಪಡಿಸುವ
ಅಗತ್ಯವಿದೆ.
ವಿಶ್ವಸಂಸ್ಥೆ
ಮುಂದಿನ
ವರ್ಷವನ್ನು
ಸಿರಿಧಾನ್ಯ
ವರ್ಷವೆಂದು
ಘೋಷಿಸುವುದರಿಂದ
ದೊರಕುವ
ಅವಕಾಶಗಳನ್ನು
ಬಳಸಿಕೊಳ್ಳಲು
ಜನರು
ಸಿದ್ಧರಾಗಿರಬೇಕು
ಎಂದು
ಹೇಳಿದರು.
ನಮ್ಮ
ಪ್ರಾಚೀನ
ಕೃಷಿ
ಸಂಪ್ರದಾಯಗಳ
ಜೊತೆಗೆ
ಭವಿಷ್ಯದತ್ತ
ಹೆಜ್ಜೆಯಿಡುವುದೂ
ಅಷ್ಟೇ
ಮುಖ್ಯ.
ಆಧುನಿಕ
ತಂತ್ರಜ್ಞಾನ
ಮತ್ತು
ಹೊಸ
ಕೃಷಿ
ಸಾಧನಗಳು
ಭವಿಷ್ಯದ
ಕೃಷಿಯ
ತಿರುಳಾಗಿದೆ
ಎಂದರು.