ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಂದ್: ನಾವೆಲ್ಲಾ ಕೃಷಿ ಮೇಲೇಯೇ ಬದುಕುತ್ತಿರುವುದು; ಸುನಂದ ಜಯರಾಂ

|
Google Oneindia Kannada News

ನವದೆಹಲಿಯಲ್ಲಿ ರೈತ ಚಳವಳಿ ಬುಧವಾರಕ್ಕೆ 300 ದಿನ ಪೂರೈಸಿದೆ. ಕಳೆದ ವರ್ಷ ನವೆಂಬರ್ ಮಾಸದಲ್ಲಿ ರೈತರು ದಿಲ್ಲಿ ಚಲೋ ಜಾಥಾ ಹಮ್ಮಿಕೊಂಡಿದ್ದರು. ದಿಲ್ಲಿ ಗಡಿಗಳಲ್ಲಿ ರೈತರನ್ನು ತಡೆಹಿಡಿಯಲಾಯಿತು. ಪ್ರಭುತ್ವ ರಸ್ತೆಗಳಲ್ಲಿ ಕಂದಕ ತೋಡಿತು. ಅಶ್ರುವಾಯು ಸಿಡಿಸಿತು. ವಾಟರ್ ಜೆಟ್‌ಗಳನ್ನು ಹಾರಿಸಿತು. ರೈತರು ಧೃತಿಗೆಡಲಿಲ್ಲ. ದಿಲ್ಲಿ ಗಡಿಗಳಲ್ಲೇ ಮೊಕ್ಕಾಂ ಹೂಡಿದರು. ಅಂದಿನಿಂದ ಇಂದಿನವರೆಗೆ ಶಾಂತಿಯುತ ಚಳವಳಿಯಲ್ಲಿ ತೊಡಗಿದ್ದಾರೆ.

ಇದೀಗ ದಿಲ್ಲಿ ರೈತ ಚಳವಳಿಯ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ 27 ರಂದು ಭಾರತ್ ಬಂದ್‌ಗೆ ರೈತರು ಕರೆ ಕೊಟ್ಟಿದ್ದಾರೆ. ರೈತರ ಪರವಾಗಿ ವಿವಿಧ ಸಾಮಾಜಿಕ ಸಂಘಟನೆಗಳು ಸೇರಲಿವೆ ಎಂಬ ಆಶಾಭಾವನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ವ್ಯಕ್ತಪಡಿಸಿದೆ. ಸೆ.27ರಂದು ರೈತರು ಕರೆ ನೀಡಿರುವ ಭಾರತ್ ಬಂದ್ ತಯಾರಿ ಬಗ್ಗೆ ಒನ್ಇಂಡಿಯಾ ಕನ್ನಡ ರೈತ ಮುಖಂಡರನ್ನು ಮಾತನಾಡಿಸಿದಾಗ...

ಅನ್ನ ತಿನ್ನುವವರೆಲ್ಲಾ ಮಾಡಬೇಕಾದ ಚಳವಳಿ ಇದು; ನಂದಿನಿ ಜಯರಾಂಅನ್ನ ತಿನ್ನುವವರೆಲ್ಲಾ ಮಾಡಬೇಕಾದ ಚಳವಳಿ ಇದು; ನಂದಿನಿ ಜಯರಾಂ

ಇನ್ನು ಈ ಭಾರತ್ ಬಂದ್‌ಗೆ ಸಂಬಂಧಿಸಿದಂತೆ ರೈತ ಮುಖಂಡೆ ಸುನಂದ ಜಯರಾಂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ್ ಬಂದ್ ಯಶಸ್ವಿ ಮಾಡುವಂತೆ ಮನವಿ ಮಾಡಿದ್ದಾರೆ.

Karnataka Farmer Leader Sunanda Jayaram Opinion About Bharat Bandh On September 27

ಸುನಂದ ಜಯರಾಂ, ರೈತ ಮುಖಂಡರು
"ಭಾರತ್ ಬಂದ್‌ಗೆ ಕರೆ ಏನು ನೀಡಿದ್ದೀವಿ, ನಾವೆಲ್ಲರೂ ಒಟ್ಟಾಗಿ ಕರ್ನಾಟಕದಾದ್ಯಂತ ಚಳವಳಿಯಲ್ಲಿ ತೊಡಗಿದ್ದೇವೆ. ಸರ್ಕಾರ ಈಗ ಮೂರು ಕೃಷಿ ಕಾಯಿದೆಗಳನ್ನು ಏನು ತಂದಿದೆ, ಅದರ ವಿರುದ್ಧ ರಾಷ್ಟ್ರವ್ಯಾಪಿ ಜನಾಂದೋಲನ ನಡೀತಿದೆ. ಇಡೀ ದೇಶ ಕೃಷಿ ಆಧಾರಿತ ದೇಶ. ರೈತರು, ಕೃಷಿ ಕೂಲಿಗಳು, ನಾಗರಿಕ ಬಂಧುಗಳು ಕೃಷಿ ಮೇಲೇಯೇ ಬದುಕುತ್ತಿರುವುದು. ಅದೇ ರೀತಿ ಉದ್ದಿಮೆಗಳು ಕೂಡಾ, ಕೈಗಾರಿಕೆಗಳೂ ಕೂಡಾ. ಇಂಥದೊಂದು ಬೃಹತ್ ಕ್ಷೇತ್ರವನ್ನು ಹದಗೆಡಿಸುವ ಕಾಯಿದೆಗಳನ್ನು ತಂದಿರುವುದನ್ನು ನಾವೆಲ್ಲಾ ವಿರೋಧ ಮಾಡಲೇಬೇಕು. ಬಂದ್ ರೂಪದಲ್ಲಿಯೂ ಕೂಡಾ."

"ಈ ಕರಾಳ ಕಾಯಿದೆಗಳನ್ನು ನಾವೆಲ್ಲಾ ವಿರೋಧ ಮಾಡದೆ ಹೋದರೆ ಮುಂದಿನ ಜನಾಂಗಕ್ಕೆ ನಾವು ದ್ರೋಹ ಮಾಡಿದಂಗಾಗುತ್ತದೆ. ಪಕ್ಷಗಳ ಭೇದ ಮರೆತು ಎಲ್ಲಾ ಜನಪರ ಸಂಘಟನೆಗಳು, ವಿಚಾರವಂತರು, ನಾಗರೀಕರು ಇದನ್ನು ವಿರೋಧಿಸಬೇಕು. ಭಾರತ್ ಬಂದ್ ಯಶಸ್ವಿಗೊಳಿಸಬೇಕು."

"ಕರ್ನಾಟಕ ಬಂದ್ ಯಾವ ಕಾರಣಕ್ಕಾಗಿ ಮಾಡ್ತಿದ್ದೀವಿ ಅನ್ನೋದನ್ನು ಜನ ಸಾಮಾನ್ಯರಿಗೆ ತಿಳಿಸಿದ್ದೀವಿ. ಸರ್ಕಾರ ಈಗಲಾದರೂ ಮೂರು ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು ಎಂದು ನಿಮ್ಮ ಮಾಧ್ಯಮದ ಮೂಲಕ ಒತ್ತಾಯ ಮಾಡುತ್ತೇನೆ."

"ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಒಟ್ಟಾರೆ 112 ಸಂಘಟನೆಗಳು ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ರೈತ ಮುಖಂಡರು ಹೇಳಿದ್ದಾರೆ. ಕರ್ನಾಟಕದಲ್ಲಿ ಇದನ್ನು ಯಶಸ್ವಿ ಮಾಡಲು ಬೇಕಾದ ತಯಾರಿ ನಡೆಸಿದ್ದೇವೆ, ಬೆಂಗಳೂರು ಸೇರಿದಂತೆ ಜಿಲ್ಲಾವಾರು ತಾಲ್ಲೂಕುವಾರು ಬಂದ್‌ಗೆ ಬೇಕಾದ ಎಲ್ಲಾ ತಯಾರಿ ನಡೆದಿದೆ. ಇದಕ್ಕೊಂದು ತಂಡ ಮಾಡಿದ್ದೇವೆ. ಎಲ್ಲರೂ ಸೇರಿ ಭಾರತ್ ಬಂದ್ ಯಶಸ್ವಿ ಮಾಡ್ತೀವಿ," ಎಂದು ಹೇಳಿದ್ದಾರೆ.

"ಭಾರತ್ ಬಂದ್ ಪ್ರಕ್ರಿಯೆ ಬಹಳ ಜೋರಾಗಿ ನಡೆದಿದೆ. ಇಡೀ ರಾಜ್ಯ ಪ್ರವಾಸ ಕೈಗೊಂಡಿದ್ದೇವೆ. ಎಲ್ಲಾ ಕಡೆ ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ಬಂದ್ ಮಾಡಲಿಕ್ಕೆ ತಯಾರಿ ನಡೀತಿದೆ. ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ತೆಗೆದುಕೊಂಡಿದ್ದೇವೆ. ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕರು, ಮಹಿಳೆಯರು, ದಲಿತ ಸಂಘಟನೆಗಳು ಹೀಗೆ ಎಲ್ಲಾ ಸಂಘಟನೆಗಳೂ ಭಾರತ್ ಬಂದ್ ಮಾಡಲು ಸ್ವಯಂಪ್ರೇರಣೆಯಿಂದ ಮುಂದೆ ಬಂದಿವೆ."

"ರೈತರ ಸಮಸ್ಯೆಗಳ ಜೊತೆ ಇನ್ನೂ ಅನೇಕ ವಿಷಯಗಳಿವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಸೇರಿದಂತೆ ಪ್ರಜಾಪ್ರಭುತ್ವ ಹರಣ ಆಗುತ್ತಿರುವ ಬಗ್ಗೆ ದೇಶವ್ಯಾಪಿ ಆತಂಕವಿದೆ. ಹೀಗೆ ಎಲ್ಲಾ ವಿಷಯಗಳನ್ನೊಳಗೊಂಡಂತೆ ಸಂಯುಕ್ತ ಕಿಸಾನ್ ಮೋರ್ಚಾ ಈ ಬಂದ್‌ಗೆ ಕರೆ ನೀಡಿರುವುದು. ನಾವು ಭೇಟಿ ಮಾಡುತ್ತಿರುವ ಎಲ್ಲರಿಗೂ ಸ್ವಯಂಪ್ರೇರಿತವಾಗಿ ಬಂದ್ ಮಾಡಲು ಕೋರುತ್ತಿದ್ದೇವೆ. ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಇದೆ. ಭಾರತ್ ಬಂದ್ ಯಶಸ್ವಿಯಾಗುತ್ತದೆ," ಎಂದು ರೈತ ಮುಖಂಡರು ತಿಳಿಸಿದ್ದಾರೆ.

English summary
Oneindia Kannada has spoken to Karnataka farmer leader Sunanda Jayaram about the Bharat Bandh on September 27 preparation against Union Govt Farm Laws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X