ಕೃಷಿ ಕ್ಷೇತ್ರಕ್ಕೆ 'ರೈತ ನಾಯಕ' ಯಡಿಯೂರಪ್ಪ ನೀಡಿದ ಕೊಡುಗೆ ಇಷ್ಟು!
ಬೆಂಗಳೂರು, ಮಾರ್ಚ್ 05: ಪ್ರಸಕ್ತ ಸಾಲಿನ ಆಯ ವ್ಯಯ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ್ದಾರೆ. ಹಣಕಾಸು ಸಚಿವರು ಕೂಡ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು 2020ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ.
Recommended Video
ಕರ್ನಾಟಕ ರಾಜ್ಯದ ಈ ಬಾರಿಯ ಬಜೆಟ್ ಗಾತ್ರ 2 ಲಕ್ಷದ 37 ಸಾವಿರ ಕೋಟಿ ರೂಪಾಯಿ ಆಗಿದೆ. ಹಸಿರು ಶಾಲು ಹೊದ್ದು ಬಜೆಟ್ ಮಂಡಿಸಿರುವ ಬಿ.ಎಸ್.ಯಡಿಯೂರಪ್ಪ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ.
Karnataka Budget 2020 Live Updates: ನಾಳೆ ಬೆಳಗ್ಗೆ 10.30ಕ್ಕೆ ಬಜೆಟ್ ಅಧಿವೇಶನ ಮುಂದೂಡಿಕೆ
''ರೈತರ ಪರವಾದ ಬಜೆಟ್ ಮಂಡಿಸಲಿದ್ದೇನೆ'' ಎಂದು ಹೇಳಿದ್ದ 'ರೈತರ ನಾಯಕ' ಬಿ.ಎಸ್.ಯಡಿಯೂರಪ್ಪ ತಮ್ಮ ಬಜೆಟ್ ನಲ್ಲಿ ಕೃಷಿಕರಿಗೆ ನೀಡಿರುವ ಕೊಡುಗೆಗಳು ಇಂತಿವೆ:
ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ
* ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆಗೆ ಉತ್ತೇಜನ ನೀಡಲು ಹಾಗೂ ಕೃಷಿ ಮತ್ತು ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ಅನುಷ್ಠಾನ.
* 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ' ಫಲಾನುಭವಿಗಳಿಗೆ ರಾಜ್ಯ ಸರ್ಕಾರ 4000 ರೂಪಾಯಿ ಹೆಚ್ಚುವರಿ ನೆರವು ನೀಡುವ ಯೋಜನೆಯನ್ನು ಮುಂದುವರೆಸಲು 2600 ಕೋಟಿ ರೂಪಾಯಿ ಅನುದಾನ.
* ಎಲ್ಲಾ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ.
* ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂಪಾಯಿ ಅನುದಾನ.
ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಪ್ರಾರಂಭ
*
ಪ್ರಧಾನಮಂತ್ರಿ
ಫಸಲ್
ಬಿಮಾ
ಯೋಜನೆಯ
ರಾಜ್ಯದ
ವಿಮಾ
ಕಂತಿನ
ಪಾಲು
ಬಿಡುಗಡೆಗೆ
900
ಕೋಟಿ
ರೂಪಾಯಿ.
*
ರೈತ
ಸಿರಿ
ಯೋಜನೆಯಡಿ
ಟೆಫ್,
ಚಿಯಾ
ಮತ್ತು
ಕ್ವಿನೋವಾ
ಸಿರಿಧಾನ್ಯಗಳ
ಸೇರ್ಪಡೆ.
*
ಮಣ್ಣು,
ನೀರು
ಪರೀಕ್ಷೆ
ಮತ್ತು
ರೈತರಿಗೆ
ತಾಂತ್ರಿಕ
ನೆರವು
ನೀಡಲು
'ಸಂಚಾರಿ
ಕೃಷಿ
ಹೆಲ್ತ್
ಕ್ಲಿನಿಕ್'
ಪ್ರಾರಂಭ.
*
ರೈತರಿಗೆ
ಪ್ರದೇಶವಾರು
ಸೂಕ್ತ
ಬೆಳೆಯನ್ನು
ಬೆಳೆಯಲು,
ಅಗತ್ಯ
ಬೀಜಗಳು,
ರಸಗೊಬ್ಬರಗಳು,
ಸಣ್ಣ
ಪೌಷ್ಟಿಕಾಂಶಗಳ
ಬಳಕೆಗೆ
ಮಾರ್ಗದರ್ಶನ
ನೀಡಲು
ಹೊಸ
ನೀತಿ
ರಚನೆ.
ಕುಡುಕರಿಗೆ ಆಘಾತ, ನಿರೀಕ್ಷೆಯಂತೆ ಬೆಲೆ ಏರಿಕೆ ಮಾಡಿದ ಯಡಿಯೂರಪ್ಪ
ರೈತರ ಸಾಮರ್ಥ್ಯ ಅಭಿವೃದ್ಧಿ
*
ರೈತರ
ಸಾಮರ್ಥ್ಯ
ಅಭಿವೃದ್ಧಿ
ಮತ್ತು
ಅರಿವು
ಮೂಡಿಸುವ
ಕಾರ್ಯಕ್ರಮಗಳಿಗಾಗಿ
40
ಪ್ರಾತ್ಯಕ್ಷಿಕೆ
ಕ್ಷೇತ್ರಗಳ
ಅಭಿವೃದ್ಧಿ.
*
ಕೃಷಿ
ಮಹಾಮಂಡಲಗಳು,
ರಫ್ತುದಾರರು,
ಆಹಾರ
ಸಂಸ್ಕರಣಾ
ಸಂಸ್ಥೆಗಳು
ಮತ್ತು
ಆಹಾರ
ಸಂಸ್ಕರಣಾ
ಉದ್ದಿಮೆದಾರರಿಗೆ
ಆಹಾರ
ಮತ್ತು
ಕೃಷಿ
ಉತ್ಪನ್ನಗಳ
ಮೌಲ್ಯವರ್ಧನೆ,
ಸಂಸ್ಕರಣೆ,
ದಾಸ್ತಾನು
ಮತ್ತು
ಪ್ಯಾಕೇಜಿಂಗ್ಗಳ
ಬಗ್ಗೆ
ಹೊಸ
ತಂತ್ರಜ್ಞಾನಗಳನ್ನು
ಪರಿಚಯಿಸಲು
ಕ್ರಮ.
*
ವಿಶ್ವಬ್ಯಾಂಕ್
ಪ್ರಾಯೋಜಿತ
ಸುಜಲಾ-III
ಯೋಜನೆಯನ್ನು
ಜಾರಿಗೊಳಿಸಿರುವ
12
ಮಳೆ
ಆಶ್ರಿತ
ಜಿಲ್ಲೆಗಳ
2500
ಗ್ರಾಮಗಳ
ಒಂದು
ಲಕ್ಷಕ್ಕೂ
ಹೆಚ್ಚು
ರೈತರಿಗೆ
ಭೂ
ಸಂಪನ್ಮೂಲಯಾದಿಯ
ತರಬೇತಿ
ನೀಡಿ,
ಕಾರ್ಡ್
ವಿತರಿಸಲು
10
ಕೋಟಿ
ರೂಪಾಯಿ
ಅನುದಾನ.
*
ವಿಶ್ವಬ್ಯಾಂಕ್
ಅನುದಾನಿತ
ಹೊಸ
ಬಹು-ರಾಜ್ಯ
ಜಲಾನಯನ
ಅಭಿವೃದ್ಧಿ
ಯೋಜನೆಯಲ್ಲಿ
(REWARD)
ಮುಂದಿನ
ಆರು
ವರ್ಷದ
ಅವಧಿಗೆ
ಕರ್ನಾಟಕ
ರಾಜ್ಯ
ಭಾಗಿ.
ಕರ್ನಾಟಕ ಬಜೆಟ್ 2020; ಬೆಂಗಳೂರಿಗೆ ಯಡಿಯೂರಪ್ಪ ಕೊಟ್ಟಿದ್ದೇನು?
ರೈತರಿಗೆ ನೆರವು
*
ಅಂತರ್ಜಲ
ಸ್ಥಿತಿ
ಗಂಭೀರವಾಗಿರುವ
76
ತಾಲ್ಲೂಕುಗಳಲ್ಲಿ
ಮುಂದಿನ
ಮೂರು
ವರ್ಷದಲ್ಲಿ
ನಾಲ್ಕು
ಲಕ್ಷ
ಹೆಕ್ಟೇರ್
ನಲ್ಲಿ
810
ಅತಿ
ಸಣ್ಣ
ಜಲಾನಯನಗಳಲ್ಲಿ
ಜಲಾಮೃತ
ಯೋಜನೆ
ಅನುಷ್ಠಾನ.
*
ಸಾಗರದ
ಇರುವಕ್ಕಿ
ಗ್ರಾಮದಲ್ಲಿ
ಶಿವಮೊಗ್ಗದ
ಕೃಷಿ
ಮತ್ತು
ತೋಟಗಾರಿಕಾ
ವಿಜ್ಞಾನಗಳ
ವಿಶ್ವವಿದ್ಯಾನಿಲಯದ
ಬಾಕಿ
ಕಾಮಗಾರಿ
ಪೂರ್ಣಗೊಳಿಸಿ,
ತರಗತಿ
ಪ್ರಾರಂಭಿಸಲು
ಕ್ರಮ.
*
ತೋಟಗಾರಿಕೆ
ಉತ್ಪನ್ನಗಳ
ಸಮರ್ಪಕ
ಕೊಯ್ಲೋತ್ತರ
ನಿರ್ವಹಣೆಗೆ
ವಿವಿಧ
ಜಿಲ್ಲೆಗಳ
10
ಕೃಷಿ
ಉತ್ಪನ್ನ
ಮಾರುಕಟ್ಟೆಗಳಲ್ಲಿ
75
ಕೋಟಿ
ರೂಪಾಯಿ
ವೆಚ್ಚದಲ್ಲಿ
ಪಿಪಿಪಿ
ಮಾದರಿಯಲ್ಲಿ
5000
ಮೆಟ್ರಿಕ್
ಟನ್
ಸಾಮರ್ಥ್ಯದ
ಶೀತಲ
ಗೃಹಗಳ
ನಿರ್ಮಾಣ.
*
ಹೊಸದಾಗಿ
ತೋಟಗಾರಿಕೆ
ಕೃಷಿ
ಪದ್ಧತಿಗೆ
ವರ್ಗಾವಣೆಗೊಳ್ಳುವ
ಸಣ್ಣ
ಮತ್ತು
ಅತಿ
ಸಣ್ಣ
ರೈತರಿಗೆ
ಪ್ರತಿ
ಹೆಕ್ಟೇರಿಗೆ
5000
ರೂಪಾಯಿ
ಗಳಂತೆ
ಗರಿಷ್ಠ
10,000
ರೂಪಾಯಿ
ನೆರವು.
*
ಹಾಪ್ಕಾಮ್ಸ್
ಸಂಸ್ಥೆಯನ್ನು
ಬಲಪಡಿಸಲು
ಕ್ರಮ.
*
ಕೊಳೆತು
ಹೋಗಬಹುದಾದ
ಹೂವು,
ಹಣ್ಣು
ತರಕಾರಿಗಳನ್ನು
ಬೆಂಗಳೂರಿನಿಂದ
ದೆಹಲಿ,
ಮುಂಬೈ
ಹಾಗೂ
ತಿರುವನಂತಪುರಕ್ಕೆ
ಸಾಗಿಸಲು
ಕೇಂದ್ರ
ಸರ್ಕಾರದ
ಕೃಷಿ
ರೈಲ್
ಯೋಜನೆಯ
ಸೌಲಭ್ಯದ
ಬಳಕೆ.
ಸಮಗ್ರ ವರಾಹ ಅಭಿವೃದ್ಧಿ ಯೋಜನೆ
*
ರಾಮನಗರ
ಜಿಲ್ಲೆಯ
ಕಣ್ವ
ಫಾರ್ಮ್
ನಲ್ಲಿ
ಸಾರ್ವಜನಿಕ-ಖಾಸಗಿ
ಸಹಭಾಗಿತ್ವದಲ್ಲಿ
ರೇಷ್ಮೆ
ಹುಳು
ಸಂಸ್ಕರಣಾ
ಘಟಕ
ಸ್ಥಾಪನೆಗೆ
ಕ್ರಮ.
*
ರಾಜ್ಯದಲ್ಲಿ
ಪಶು
ಸಂಗೋಪನಾ
ಆರ್ಥಿಕ
ಚಟುವಟಿಕೆಗಳ
ವಿಸ್ತರಣೆಗೆ
ಸಮೀಕ್ಷೆ
ನಡೆಸಿ,
ಸಮಗ್ರ
ನೀತಿ
ರಚನೆ.
*
ವಿದೇಶಿ
ತಳಿಯ
ಹಂದಿಗಳನ್ನು
ಆಮದು
ಮಾಡಿಕೊಳ್ಳುವ
'ಸಮಗ್ರ
ವರಾಹ
ಅಭಿವೃದ್ಧಿ'
ಯೋಜನೆಗೆ
ಐದು
ಕೋಟಿ
ರೂಪಾಯಿ
ಅನುದಾನ.
*
ಸಾರ್ವಜನಿಕ
ಖಾಸಗಿ
ಸಹಭಾಗಿತ್ವದಲ್ಲಿ
ಕುಕ್ಕುಟ
ತ್ಯಾಜ್ಯ
ಸಂಸ್ಕರಣೆ
ಮತ್ತು
ಮೌಲ್ಯವರ್ಧನ
ಕೇಂದ್ರ
ಸ್ಥಾಪನೆ.
*
ಲಿಂಗ
ನಿರ್ಧಾರಿತ
ವೀರ್ಯನಳಿಕೆಗಳಿಂದ
ಕೃತಕ
ಗರ್ಭಧಾರಣೆ
ಮೂಲಕ
ಹೆಣ್ಣು
ಕರುಗಳ
ಜನನ
ಹೆಚ್ಚಿಸಲು
ಎರಡು
ಕೋಟಿ
ರೂ.
ಅನುದಾನ.
ರೈತರ ಸಾಲಕ್ಕೆ ಬಡ್ಡಿ ವಿನಾಯಿತಿ
*
ಪ್ರಾಥಮಿಕ
ಸಹಕಾರ
ಕೃಷಿ
ಮತ್ತು
ಗ್ರಾಮೀಣಾಭಿವೃದ್ಧಿ
ಬ್ಯಾಂಕ್
(DCC),
ಜಿಲ್ಲಾ
ಕೇಂದ್ರ
ಸಹಕಾರಿ
ಬ್ಯಾಂಕ್
(PCARD)
ಹಾಗೂ
ಪ್ರಾಥಮಿಕ
ಕೃಷಿ
ಪತ್ತಿನ
ಸಹಕಾರ
ಸಂಘ
(PACS)
ಗಳಿಂದ
ನೀಡಿರುವ
ಮಧ್ಯಮಾವಧಿ
ಹಾಗೂ
ದೀರ್ಘಾವಧಿ
ಕೃಷಿ
ಸುಸ್ತಿ
ಸಾಲಗಳ
ಮೇಲಿನ
ಬಡ್ಡಿ
ಮನ್ನಾ.
466
ಕೋಟಿ
ರೂಪಾಯಿ
ನೆರವು.
92
ಸಾವಿರ
ರೈತರಿಗೆ
ಪ್ರಯೋಜನ.
*
ಅಡಿಕೆ
ಬೆಳೆಗಾರರ
ಪ್ರಾಥಮಿಕ/ಮಾರುಕಟ್ಟೆ
ಸಹಕಾರ
ಸಂಘಗಳಲ್ಲಿ
ಪ್ರತಿ
ರೈತ
ಕುಟುಂಬಕ್ಕೆ
ನೀಡುವ
ದೀರ್ಘಾವಧಿ
ಕೃಷಿ
ಸಾಲದ
ಪೈಕಿ
ಗರಿಷ್ಠ
ಎರಡು
ಲಕ್ಷ
ರೂಪಾಯಿವರೆಗಿನ
ಸಾಲಕ್ಕೆ
ಶೇ.5
ರಷ್ಟು
ಬಡ್ಡಿ
ವಿನಾಯಿತಿ.
ಎಂಟು ಕೋಟಿ ರೂಪಾಯಿ ನೆರವು
*
ಕೃಷಿ
ಮೌಲ್ಯ
ಸರಪಳಿಯ
ಅಭಿವೃದ್ಧಿಗಾಗಿ
100
FPO
ರಚನೆ,
FPO
ಗಳ
ಮೂಲಕ
ಮೌಲ್ಯ
ಸರಪಳಿ
ಅಭಿವೃದ್ಧಿಗೆ
ಎಂಟು
ಕೋಟಿ
ರೂಪಾಯಿ
ನೆರವು.
*
ಕೃಷಿ
ಉತ್ಪನ್ನಗಳ
ಬೆಂಬಲ
ಬೆಲೆ
ಖರೀದಿಗಾಗಿ
ಸ್ಥಾಪಿಸಲಾಗಿರುವ
ಕನಿಷ್ಠ
ಬೆಂಬಲ
ಬೆಲೆ
ಆವರ್ತ
ನಿಧಿಯ
ಮೊತ್ತ
ಅಗತ್ಯಕ್ಕೆ
ಅನುಗುಣವಾಗಿ
2000
ಕೋಟಿ
ರೂಪಾಯಿವರೆಗೆ
ಹೆಚ್ಚಳ.
*
ಕೃಷಿ
ಮತ್ತು
ಪೂರಕ
ಚಟುವಟಿಕೆಗಳ
ವಲಯಕ್ಕೆ
ಒಟ್ಟಾರೆ
32,259
ಕೋಟಿ
ರೂಪಾಯಿ
ಅನುದಾನ.