ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8ನೇ ಸುತ್ತಿನ ಮಾತುಕತೆಯಲ್ಲಾದರೂ ರೈತರ ಸಮಸ್ಯೆ ಬಗೆಹರಿಯುವ ವಿಶ್ವಾಸ

|
Google Oneindia Kannada News

ನವದೆಹಲಿ,ಜನವರಿ 08: ಇದೀಗ ಕೇಂದ್ರ ಸರ್ಕಾರದ ಜತೆ ರೈತರ ಎಂಟನೇ ಸುತ್ತಿನ ಮಾತುಕತೆ ನಡೆಯುತ್ತಿದ್ದು, ರೈತರ ಸಮಸ್ಯೆ ಬಗೆಹರಿಯುವ ವಿಶ್ವಾಸವನ್ನು ಕೇಂದ್ರ ಸಚಿವರು ನೀಡಿದ್ದಾರೆ.

ಇತ್ತೀಚೆಗಷ್ಟೇ ಪಂಜಾಬ್ ರಾಜ್ಯದ ಖ್ಯಾತ ಧಾರ್ಮಿಕ ಮುಖಂಡರಾದ ನಾನಕ್ಸರ್ ಗುರುದ್ವಾರ ಮುಖ್ಯಸ್ಥ ಬಾಬಾ ಲಖಾ ಅವರು ಕೃಷಿ ಸಚಿವ ತೋಮರ್ ಅವರನ್ನು ಭೇಟಿಯಾಗಿ ಕೇಂದ್ರ ಮತ್ತು ಪ್ರತಿಭಟನಾ ನಿರತ ರೈತರ ನಡುವೆ ಮಧ್ಯಸ್ಥಿಕೆ ವಹಿಸಲು ಇಚ್ಛೆ ವ್ಯಕ್ತಪಡಿಸಿದ್ದರು.

"ಇದು ಸ್ವಾಭಿಮಾನದ ರ‍್ಯಾಲಿ"; ಬೃಹತ್ ಹೋರಾಟಕ್ಕೆ ರೈತರ ತಾಲೀಮು

ಸಚಿವ ಕೈಲಾಶ್ ಚೌಧರಿ ಅವರು, ಇಂದಿನ ಸಭೆಯಲ್ಲಿ ನಿರ್ಣಯ ಹೊರಬರುವ ವಿಶ್ವಾಸವಿದೆ. ರೈತರ ಮುಷ್ಕರ ಅಂತ್ಯ ಮಾಡುವ ಸಂಬಂಧ ಈ ಸಭೆ ನಡೆಸಲಿದ್ದೇವೆ. ಮೊದಲ ಸಭೆಯಲ್ಲಿ ನಡೆದ ಎಲ್ಲ ಅಂಶಗಳ ಕುರಿತೂ ಇಲ್ಲಿ ಚರ್ಚೆ ನಡೆಸುತ್ತೇವೆ. ಮೊದಲಸಭೆಯಲ್ಲಿ ರೈತರು ಕೃಷಿ ಕಾನೂನುಗಳ ಹಿಂಪಡೆಯುವಿಕೆ ಕುರಿತು ಆಗ್ರಹಿಸಿರಲಿಲ್ಲ.

Just Before Talks, Govt Says Hopeful Of Resolving Farmers Issues

ಆದರೆ ಆ ಬಳಿಕ ಕೆಲ ರಾಜಕೀಯ ಏಜೆಂಟರ ಮಧ್ಯ ಪ್ರವೇಶದಿಂದಾಗಿ ರೈತರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ. ಮುಂದೆ ಕೀಟನಾಶಕ (ನಿರ್ವಹಣೆ) ಮಸೂದೆ ಮತ್ತು ಬೀಜ ಮಸೂದೆಗಳೂ ಕೂಡ ಬರಲಿದೆ.

ಆಗಲೂ ರೈತರನ್ನು ದಾರಿ ತಪ್ಪಿಸುವ ಕಾರ್ಯವಾಗಬಹುದು. ಹೀಗಾಗಿ ಈ ಬಗ್ಗೆ ಸರ್ಕಾರ ಎಚ್ಚರಿಕೆಯಿಂದಿದೆ ಎಂದು ಹೇಳಿದರು.

ಪಂಜಾಬ್ ಧಾರ್ಮಿಕ ಮುಖಂಡರ ಜೊತೆಗಿನ ಸಭೆ ಕುರಿತು ಮಾತನಾಡಿದ ಸಚಿವರು, ನಾವು ಎಲ್ಲರನ್ನು ಸ್ವಾಗತಿಸುತ್ತೇವೆ. ನಮಗೆ ನಿರ್ಣಯಬೇಕು. ಅವರು ಆ ದಿಕ್ಕಿನಲ್ಲಿ ಮಾತನಾಡಲು ಸಿದ್ಧರಾಗಿದ್ದರೆ, ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

English summary
Hours before the eighth round of formal talks between the Centre and the farmers’ groups agitating against three recent farm laws, Union Minister of State for Agriculture Kailash Choudhury hoped that a resolution will come out of Friday’s meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X