ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ಕೃಷಿ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪರಿಗಣಿಸಬೇಡಿ!

|
Google Oneindia Kannada News

ಬೆಂಗಳೂರು, ಜೂನ್ 26: ರೈತರಿಗೆ ಕೃಷಿ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪರಿಗಣಿಸಬೇಡಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ. ಐ) ಹಾಗೂ ಸರ್ಕಾರವನ್ನು ರೈತರು ಹಾಗೂ ಕೃಷಿ ಮಾರುಕಟ್ಟೆ ತಜ್ಞರು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯ ಸಕ್ಕರೆ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಈ ಬಗ್ಗೆ ವಿವರ ನೀಡಿ, ಸಾವಿರಾರು ರೈತರು ಅನೇಕ ಬಾರಿ ಕೋರಿಕೆ ಸಲ್ಲಿಸಿದ್ದರೂ ಸಾಲಮನ್ನಾವಾಗಲಿ, ಸಾಲ ನೀಡುವ ಪ್ರಕ್ರಿಯೆಯನ್ನಾಗಲಿ ಸರ್ಕಾರ ಬದಲಾಯಿಸಿಲ್ಲ. ಈ ಬಗ್ಗೆ ತಕ್ಷಣವೇ ಕ್ರಮ ಜರುಗಿಸದಿದ್ದರೆ ಜೂನ್ 28 ರಂದು ಬೆಂಗಳೂರಿನ ಆರ್ ಬಿ ಐ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.

ರೈತರನ್ನು ಕಡೆಗಣಿಸುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಉತ್ತರಿಸಬೇಕುರೈತರನ್ನು ಕಡೆಗಣಿಸುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಉತ್ತರಿಸಬೇಕು

''ಅನೇಕ ಬ್ಯಾಂಕುಗಳು ಸಿಬಿಲ್ ಸ್ಕೋರ್ ಆಧಾರದ ಮೇಲೆ ಸಾಲ ನೀಡುವ ಪದ್ಧತಿಯನ್ನು ಅನುಸರಿಸುತ್ತಿದ್ದು, ಬೆಳೆ ನಷ್ಟದಿಂದ, ಸುಸ್ತಿದಾರ ಎನಿಸಿಕೊಂಡ ರೈತರು ಸಾಲ ಪಡೆಯುವುದೇ ಕಷ್ಟವಾಗಿದೆ. ಬೆಂಬಲ ಬೆಲೆ ಇಲ್ಲದೆ, ನಿರೀಕ್ಷಿತ ಇಳುವರಿ ಇಲ್ಲದೆ ಕಂಗಾಲಾದ ರೈತರು ಬದುಕಲು ಆಸರೆಯಾಗಿರುವ ಸಣ್ಣ ಪ್ರಮಾಣದ ಸಾಲ ಪಡೆಯಲು ಹೆಣಗಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ,'' ಎಂದು ಹೇಳಿದರು.

ಹೊಸ ಸಾಲಕ್ಕಾಗಿ ಹಿಂದಿನ ಸಾಲ ತೀರಿಸಬೇಕು

ಹೊಸ ಸಾಲಕ್ಕಾಗಿ ಹಿಂದಿನ ಸಾಲ ತೀರಿಸಬೇಕು

ಹೊಸ ಸಾಲಕ್ಕಾಗಿ ಹಿಂದಿನ ಸಾಲಗಳನ್ನು ತೆರವುಗೊಳಿಸಬೇಕೆಂದು ಅನೇಕ ಬ್ಯಾಂಕುಗಳು ಒತ್ತಾಯಿಸುತ್ತಿವೆ. ಆರ್ಥಿಕ ನಷ್ಟದಿಂದ ತತ್ತರಿಸಿರುವ ಎಲ್ಲಾ ರೈತರು ಮತ್ತೆ ಸಾಲ ಪಡೆಯಲು ಮತ್ತು ಮತ್ತೆ ಸಾಲ ಪಡೆಯುವ ನಿರೀಕ್ಷೆಯಲ್ಲಿ ಬಡ್ಡಿಯನ್ನು ಪಾವತಿಸಲು ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ರೈತರಿಗೆ ಇದೇ ರೀತಿಯ ಬೆಂಬಲವನ್ನು ತೋರಿಸಿಲ್ಲ

ರೈತರಿಗೆ ಇದೇ ರೀತಿಯ ಬೆಂಬಲವನ್ನು ತೋರಿಸಿಲ್ಲ

ಬ್ಯಾಂಕ್‌ಗಳು ಮನೆ ನಿರ್ಮಾಣಕ್ಕೆ ಶೇ.90ರಷ್ಟು ನಿವೇಶನದ ಮೌಲ್ಯವನ್ನು ನೀಡಬಹುದಾದಾಗ ಅದೇ ಅಳತೆಗೋಲನ್ನು ಅಳವಡಿಸಿ ಶೇ.80ರಷ್ಟು ಜಮೀನಿನ ಮೌಲ್ಯವನ್ನು ಸಾಲಕ್ಕೆ ನೀಡಬೇಕು. ಭತ್ತದ ಬೆಳೆಗೆ 30,000 ರೂ., ಕಬ್ಬಿಗೆ 50,000 ರೂ.ಗಳನ್ನು ನೀಡಿ ರೈತರಿಗೆ ವಂಚನೆ ಮಾಡಲಾಗಿದ್ದು, ಈ ಅವಧಿಯಲ್ಲಿ ಆಗಿರುವ ನಷ್ಟದಿಂದ ಪಾರಾಗಲು ಸರ್ಕಾರ ಈಗಿರುವ ಸಾಲದಲ್ಲಿ ಶೇ.30ಕ್ಕೂ ಹೆಚ್ಚು ಸಾಲ ನೀಡಿದೆ. ಕೋವಿಡ್ 19 ಸಾಂಕ್ರಾಮಿಕ, ಲಾಕ್‌ಡೌನ್ ಸಮಯದಲ್ಲಿ ಹೆಚ್ಚು ಹಾನಿಗೊಳಗಾದ ರೈತರಿಗೆ ಇದೇ ರೀತಿಯ ಬೆಂಬಲವನ್ನು ತೋರಿಸಿಲ್ಲ.

ರೈತರಿಗೆ ಬ್ಯಾಂಕ್‌ಗಳು ಕಿರುಕುಳ ನೀಡುತ್ತಿದೆ

ರೈತರಿಗೆ ಬ್ಯಾಂಕ್‌ಗಳು ಕಿರುಕುಳ ನೀಡುತ್ತಿದೆ

ನೋಟಿಸ್ ನೀಡುವ ಮೂಲಕ ರೈತರಿಗೆ ಬ್ಯಾಂಕ್‌ಗಳು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ ಶಾಂತಕುಮಾರ್, ಬ್ಯಾಂಕ್‌ಗಳು ನೋಟಿಸ್ ಕಳುಹಿಸುವುದನ್ನು ನಿಲ್ಲಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದರು. ಸರ್ಕಾರವು ಬ್ಯಾಂಕರ್‌ಗಳೊಂದಿಗೆ ಸಭೆ ನಡೆಸುವಾಗ ತಮ್ಮ ಸಂಸ್ಥೆಗಳ ರೈತರನ್ನು ಆಹ್ವಾನಿಸಿಲ್ಲ ಅಥವಾ ಅವರೊಂದಿಗೆ ಸಂವಾದ ನಡೆಸಿಲ್ಲ. ಸಾಲ ಮಂಜೂರು ಮಾಡುವ ನೆಪದಲ್ಲಿ ಒಟಿಪಿ ಸಂಗ್ರಹಿಸಿ ರೈತರಿಗೆ ವಂಚಿಸುತ್ತಿರುವ ಆರೋಪಿಗಳನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು.

ಮಹಿಳೆಯರ ಸಾಲ ಮನ್ನಾ ಮಾಡಿರಿ

ಮಹಿಳೆಯರ ಸಾಲ ಮನ್ನಾ ಮಾಡಿರಿ

ರೈತ ಹಾಗೂ ಕೂಲಿಕಾರರ ಮತ್ತು ಮಹಿಳೆಯರ ಸಾಲ ಮನ್ನಾ ಮಾಡಿರಿ: ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ಗ್ರಾಮೀಣ ಪ್ರದೇಶ ಸರಕಾರಗಳ ಪರಿಣಾಮಕಾರಿ ಮಧ್ಯ ಪ್ರವೇಶದ ಕೊರತೆಯಿಂದ, ಕೋವಿಡ್ ಹಾಗೂ ಅತೀವೃಷ್ಟಿ ಹಾಗೂ ಪ್ರವಾಹಗಳಿಂದ ತೀವ್ರ ರೀತಿಯ ಬಾಧೆಗೊಳಗಾಗಿದ್ದು ಗ್ರಾಮೀಣ ಸಾಲದ ಮಾರಕ ದಾಳಿಗೆ ತುತ್ತಾಗಿದೆ. ಆದ್ದರಿಂದ ತಕ್ಷಣ ರೈತರು, ಕೂಲಿಕಾರರು, ಕಾರ್ಮಿಕರು, ಕಸುಬುದಾರರು ಹಾಗೂ ಸ್ತ್ರೀ ಶಕ್ತಿ ಮತ್ತು ಸ್ವ ಶಕ್ತಿ ಸ್ವ ಸ ಹಾಯ ಗುಂಪುಗಳ ಸಾಂಸ್ಥಿಕ ಹಾಗೂ ಖಾಸಗಿ ಸಾಲಗಳನ್ನು ಮನ್ನಾ ಮಾಡಬೇಕು.

ಸಂದರ್ಶನ; ನಮ್ಮ ಕಾಲಾವಧಿ ಮುಗಿಯುವ ಮುನ್ನ ಸಾಮೂಹಿಕ ನಾಯಕತ್ವ ಬರಲಿ: ಕುರುಬೂರು ಶಾಂತಕುಮಾರ್ಸಂದರ್ಶನ; ನಮ್ಮ ಕಾಲಾವಧಿ ಮುಗಿಯುವ ಮುನ್ನ ಸಾಮೂಹಿಕ ನಾಯಕತ್ವ ಬರಲಿ: ಕುರುಬೂರು ಶಾಂತಕುಮಾರ್

English summary
Farmers and Experts have urged the RBI and the government to change lending policy and not demand CIBIL score for availing agriculture loan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X