ಲಾಠಿ ಬೀಸಿದ ಪೊಲೀಸರಿಗೆ ಊಟ ಕೊಟ್ಟ ರೈತರು
ನವದೆಹಲಿ, ನವೆಂಬರ್ 30: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ನಾಲ್ಕೈದು ದಿನಗಳಿಂದ ಪೊಲೀಸರು ಜಲಫಿರಂಗಿ, ಅಶ್ರುವಾಯು ಪ್ರಯೋಗ ನಡೆಸಿ ಅವರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ತಮಗೆ ಲಾಠಿ ಏಟಿನ ರುಚಿ ಕೊಟ್ಟ ಪೊಲೀಸರಿಗೆ ಪ್ರತಿಯಾಗಿ ರೈತರು ತಮ್ಮ ಕೈತಿನಿಸಿನ ರುಚಿ ಬಡಿಸುತ್ತಿದ್ದಾರೆ.
ತಮ್ಮನ್ನು ತಡೆಯುವುದಕ್ಕಾಗಿಯೇ ನಿಯೋಜನೆಗೊಂಡಿರುವ ಪೊಲೀಸರಿಗೆ ರೈತರು ದಿನವೂ ಊಟ ನೀಡುತ್ತಿದ್ದಾರೆ. ಸೋಮವಾರ ದೆಹಲಿ-ಹರಿಯಾಣ ಗಡಿಯಾದ ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಭದ್ರತಾ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರಿಗೂ ಗುರುನಾನಕ್ ಜಯಂತಿ ಅಂಗವಾಗಿ ಪ್ರಸಾದ ಹಂಚಿದರು.
ರೈತರ ಪ್ರತಿಭಟನೆ: ತಡರಾತ್ರಿ ಅಮಿತ್ ಶಾ, ತೋಮರ್, ರಾಜನಾಥ್ ಸಿಂಗ್ ಸಭೆ
ರೈತರ ಪ್ರತಿಭಟನೆಯು ಐದನೇ ದಿನಕ್ಕೆ ಕಾಲಿರಿಸಿದ್ದು, ಟಿಕ್ರಿ ಮತ್ತು ಸಿಂಘು ಗಡಿಯಲ್ಲಿ ರೈತರು ತಡೆಯೊಡ್ಡಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಸೋಮವಾರ ಭಾರಿ ಸಂಚಾರ ದಟ್ಟಣೆ ಕಂಡುಬಂತು. ಘಾಜಿಯಾಬಾದ್-ಘಾಜಿಪುರ್ (ದೆಹಲಿ-ಉತ್ತರ ಪ್ರದೇಶ) ಗಡಿಯನ್ನು ಕೂಡ ಬಂದ್ ಮಾಡಿದ್ದಾರೆ.
Delhi: Farmers protesting at Tikri border (Delhi-Haryana border) offer prayers and distribute 'prasad' among each other and security personnel on the occasion of #GuruNanakJayanti pic.twitter.com/2eWZji4z6g
— ANI (@ANI) November 30, 2020
ಈ ಗಡಿಗಳಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ಗಡಿಗಳನ್ನು ಭಾಗಶಃ ಮುಚ್ಚಲಾಗಿದೆ. ಪರಿಸ್ಥಿತಿಯನ್ನು ಶಾಂತಿಯುತವಾಗಿರುವಂತೆ ಮತ್ತು ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಲಾಗಿದೆ. ನಾವು ರೈತರೊಂದಿಗೆ ಸಂಪರ್ಕದಲ್ಲಿದ್ದೇವೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೂಲ ಉದ್ದೇಶ. ನಾವು ಸಾಕಷ್ಟು ಪ್ರಮಾಣದಲ್ಲಿ ಪಡೆಗಳನ್ನು ನಿಯೋಜಿಸಲಾಗಿದೆ.
ಹರಿಯಾಣದ ಜಾತಿ ಸಂಘಟನೆಗಳು ಕೂಡ ರೈತರ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಸೇರಿಕೊಳ್ಳಲು ನಿರ್ಧರಿಸಿದ್ದಾರೆ. ರೋಹ್ಟಕ್ನಲ್ಲಿ 30 ಕಾಪ್ಗಳ ಮುಖ್ಯಸ್ಥರು ಸಭೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
Recommended Video