ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಾಲಮನ್ನಾ ಮಾಡಿ ಅಂದ್ರೆ ಮಂಚಕ್ಕೆ ಕರೀತಾರೆ', ರೈತ ಮಹಿಳೆ ಕಣ್ಣೀರು

|
Google Oneindia Kannada News

ದೊಡ್ಡಬಳ್ಳಾಪುರ, ಡಿಸೆಂಬರ್ 08: 'ಸಾಲಮನ್ನಾ ಮಾಡಿ ಅಂದರೆ ಮಂಚಕ್ಕೆ ಕರೀತಾರೆ' ಹೀಗೆಂದು ಹೇಳುತ್ತಾ ರೈತ ಮಹಿಳೆ ಅಳುತ್ತಾ ಮಾಧ್ಯಮಗಳ ಎದುರಿಗೆ ಕಣ್ಣೀರು ಹಾಕಿದರು. ಅದೂ ಸಿಎಂ ಕಾರ್ಯಕ್ರಮದಲ್ಲಿಯೇ ಈ ಘಟನೆ ನಡೆಯಿತು.

ಇಂದು ಸಿಎಂ ಕುಮಾರಸ್ವಾಮಿ ಅವರು ದೊಡ್ಡಬಳ್ಳಾಪುರದಲ್ಲಿ ಸಾಲಮನ್ನಾದ ಋಣಮುಕ್ತ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಕೈಯಲ್ಲಿ ಮನವಿ ಪತ್ರವೊಂದನ್ನು ಹಿಡಿದ ಮಹಿಳೆಯೊಬ್ಬರು ವೇದಿಕೆ ಬರಲು ಯತ್ನಿಸಿದರು ಆದರೆ ಪೊಲೀಸರು ಅವಕಾಶ ನೀಡಲಿಲ್ಲ.

Farmer woman accused that government officer misbehave with her

ಆ ನಂತರ ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಮಾತನಾಡಬೇಕಾದರೆ ಕುರ್ಚಿಯ ಮೇಲೆ ನಿಂತ ಮಹಿಳೆ, 'ನನಗೆ ಅನ್ಯಾಯವಾಗಿದೆ, ಸರ್ಕಾರಿ ಅಧಿಕಾರಿಗಳು ಸಾಲಮನ್ನಾ ಮಾಡಬೇಕೆಂದರೆ ಮಂಚಕ್ಕೆ ಬರಬೇಕು, ಎಂದು ಕರೆದಿದ್ದಾರೆ' ಎಂದು ಆರೋಪಿಸಿದರು.

ಬ್ಯಾಂಕ್‌ನಿಂದ ನೋಟಿಸ್, ಏನು ಮಾಡಬೇಕು ಎಂದು ಸಿಎಂಗೆ ರೈತನ ಪತ್ರಬ್ಯಾಂಕ್‌ನಿಂದ ನೋಟಿಸ್, ಏನು ಮಾಡಬೇಕು ಎಂದು ಸಿಎಂಗೆ ರೈತನ ಪತ್ರ

ಆ ನಂತರ ಸಿಎಂ ಮಾತನಾಡುವಾಗಲೂ ಸಹ ಅದೇ ಮಹಿಳೆ ಸಿಎಂ ಅವರನ್ನು ಮಾತನಾಡಿಸಲು ವೇದಿಕೆ ಬಳಿ ಹೋಗಲು ಯತ್ನಿಸಿದರು ಆದರೆ ಪೊಲೀಸರು ಆಕೆಯನ್ನು ಕಾರ್ಯಕ್ರಮದ ವೇದಿಕೆಯಿಂದ ದೂರ ಕರೆದುಕೊಂಡು ಬಿಟ್ಟರು. ಸಿಎಂ ಸಹ ಆ ಮಹಿಳೆಯನ್ನು ಗಮನಿಸಲಿಲ್ಲ.

ಅಂಡಮಾನ್: ಆ ಅಪಾಯಕಾರಿ ದ್ವೀಪಕ್ಕೆ ಹೋಗಿಯೂ ಬದುಕಿ ಬಂದಿದ್ದ ಏಕೈಕ ಮಹಿಳೆಅಂಡಮಾನ್: ಆ ಅಪಾಯಕಾರಿ ದ್ವೀಪಕ್ಕೆ ಹೋಗಿಯೂ ಬದುಕಿ ಬಂದಿದ್ದ ಏಕೈಕ ಮಹಿಳೆ

ಆದರೆ ಮಾಧ್ಯಮಗಳ ಜೊತೆ ಮಾತನಾಡಿದ ಮಹಿಳೆ ಸಾಲಮನ್ನಾ ಬಗ್ಗೆ ಮಾಹಿತಿ ಪಡೆಯಲು ಸರ್ಕಾರಿ ಕಚೇರಿಗೆ ಹೋಆಗ ಸಾಲಮನ್ನಾ ಮಾಡಬೇಕೆಂದರೆ ಹಣ ಕೊಡಬೇಕು ಇಲ್ಲವಾದರೆ ಮಂಚಕ್ಕೆ ಬರಬೇಕು ಎಂದು ಕೆಲವು ಅಧಿಕಾರಿಗಳು ಕೇಳಿದರು, ಎಂದು ಹೇಳಿ ಕಣ್ಣೀರು ಸುರಿಸಿದ್ದಾರೆ.

ತಮ್ಮದೇ ಪಕ್ಷದ ಚಿಹ್ನೆಯನ್ನು ಮರೆತರಾ ಕುಮಾರಸ್ವಾಮಿ?ತಮ್ಮದೇ ಪಕ್ಷದ ಚಿಹ್ನೆಯನ್ನು ಮರೆತರಾ ಕುಮಾರಸ್ವಾಮಿ?

English summary
Farmer woman in Doddaballapura accused that a government officer asked her to co operate in bed if she wants her loans should waive off. She try to meet CM Kumaraswamy today but it did not happen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X