ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವೇರಿಯಲ್ಲಿ ಕಳಪೆ ಬಿತ್ತನೆ ಬೀಜ ವಿತರಣೆ: ಕೃಷಿ ಇಲಾಖೆ ಮೌನ

|
Google Oneindia Kannada News

ಹಾವೇರಿ, ಜೂನ್ 3: ಹಾವೇರಿ ಜಿಲ್ಲೆಯಲ್ಲಿ ಕಳಪೆ ಬೀಜದ ಭೂತ ಬಿಟ್ಟುಬಿಡದೇ ಕಾಡುತ್ತಿದ್ದು, ಇಷ್ಟೆಲ್ಲಾ‌ ಆಗುತ್ತಿದ್ದರೂ ಕೃಷಿ ಇಲಾಖೆ‌ ಮಾತ್ರ ಸುಮ್ಮನಾಗಿ ಕುಳಿತಿದೆ.

ಕಳಪೆ ಸೋಯಾಬಿನ್ ಬೀಜ ವಿತರಣೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ವಿಷಯದಲ್ಲಿ ಕೃಷಿ ಇಲಾಖೆ‌ಯು ಜಾಣ ಕುರುಡುತನ ಮೆರೆಯುತ್ತದೆಯೆ ಎಂಬ ಪ್ರಶ್ನೆ ಕಾಡುತ್ತಿದೆ.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷಿ ಸಚಿವ ಬಿ.ಸಿ.ಪಾಟೀಲ್ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷಿ ಸಚಿವ ಬಿ.ಸಿ.ಪಾಟೀಲ್

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಾರನಬೀಡ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಿಂದ‌ ಕಳಪೆ ಬೀಜ ವಿತರಿಸಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದ್ದು, ಸಹಕಾರಿ ಸಂಘದ ಮುಂದೆ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.

Fake Sowing Seed Distribution In Haveri District

ಗುಣಮಟ್ಟದ ಸೋಯಾಬೀನ್ ಬೀಜ ನೀಡುವುದಾಗಿ ಸಹಕಾರಿ ಸಂಘದ ಮ್ಯಾನೇಜರ್ ನಾಗಪ್ಪನು ರೈತರಿಗೆ ಭರವಸೆ ನೀಡಿದ್ದನು. ಹೀಗಾಗಿ ಸಹಕಾರಿ ಸಂಘದ ಬಳಿ ನೂರಾರು ರೈತರು ಜಮಾಯಿಸಿದ್ದರು.

ಗುಣಮಟ್ಟದ ಬೀಜ ವಿತರಿಸುತ್ತೇವೆಂದು ಅಧಿಕಾರಿಗಳು ಸುಳ್ಳು ಹೇಳಿ, ಕಳಪೆ ಬೀಜ ವಿತರಿಸಿದ್ದಾರೆ. ಉತ್ತಮ ಗುಣಮಟ್ಟದ ಬೀಜವನ್ನೇ ವಿತರಿಸುವಂತೆ ರೈತರು ಆಗ್ರಹಿಸಿದ್ದಾರೆ. ತಡರಾತ್ರಿಯವರೆಗೂ ರೈತರಿಂದ ಧರಣಿ ನಡೆದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎಂದಿಲ್ಲ.

English summary
The Fake seed Distribution was reported last night by the Agricultural Co-operative Society of Maranabeeda village of Hanagal taluk in Haveri district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X