ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕ್ಕರೆ ಕಾರ್ಖಾನೆಗಳ ಮಾಲೀಕರು ಬಾಕಿ ಕೊಡೋಕೆ ಒಪ್ತಾರಾ? ಸಭೆ ಇಂದು

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ರಾಜೀನಾಮೆ ನೀಡುವವರೆಗೆ ಬಿ ಎಸ್ ವೈ ಹೋರಾಟ ನಿಲ್ಲುವುದಿಲ್ಲವಂತೆ! | Oneindia Kannada

ಬೆಂಗಳೂರು, ನವೆಂಬರ್ 22: ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಂದು(ನವೆಂಬರ್ 22)ರಂದು ಸಭೆ ನಡೆಸಲಿದ್ದಾರೆ.

ರಾಜ್ಯ ಸರ್ಕಾರದ ಪಾಲಿಗೆ ಅಗ್ನಿ ಪರೀಕ್ಷೆಯಾಗಿರುವ ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಸಂಬಂಧ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಲಿದ್ದು, ಈ ಸಭೆಗೆ ಕಾರ್ಖಾನೆ ಮಾಲೀಕರು ಗೈರಾದರೆ ಅಥವಾ ರೈತರ ಬೇಡಿಕೆಗಳಿಗೆ ಅಲಕ್ಷ್ಯ ತೋರಿದರೆ ರೈತರು ಮತ್ತೆ ಹೋರಾಟ ಮಾಡುವ ಸಾಧ್ಯತೆ ಇದೆ.

Crucial meeting between CM and sugar factory owners today

ಅಂದು ರೈತ ಮುಖಂಡ, ಇಂದು ಗೂಂಡಾ!: ಕುಮಾರಸ್ವಾಮಿ ವಿರುದ್ಧ ರೈತನ ಕೋಪಅಂದು ರೈತ ಮುಖಂಡ, ಇಂದು ಗೂಂಡಾ!: ಕುಮಾರಸ್ವಾಮಿ ವಿರುದ್ಧ ರೈತನ ಕೋಪ

ಗುರುವಾರ ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿರುವ ಕಾರ್ಖಾನೆ ಮಾಲೀಕರೊಂದಿಗಿನ ಸಭೆಯಲ್ಲಿ ಕಾರ್ಖಾನೆ ಮಾಲೀಕರು ಖುದ್ದು ಆಗಮಿಸುವ ಬಗ್ಗೆ ಸ್ಪಷ್ಟತೆ ಇಲ್ಲ, ಹೀಗಾಗಿ ಸಭೆ ಕುತೂಹಲ ಮೂಡಿಸಿದೆ.

ಮಂಗಳವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಡೆಸಿದ ಮ್ಯಾರಥಾನ್ ಸಭೆಯಲ್ಲಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಮಾತ್ರ ಭಾಗವಹಿಸಿದ್ದರು. ಸೂಚನೆ ಇದ್ದರೂ ಮಾಲೀಕರು ಗೈರಾಗುವ ಮೂಲಕ ನಿರ್ಲಕ್ಷ್ಯ ತೋರಿದ್ದರು.

ಹಣ ಪಾವತಿ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗದೆ ಸಭೆ ಅಪೂರ್ಣವಾಗಿತ್ತು. ಕಾರ್ಖಾನೆಗಳ ಪ್ರತಿನಿಧಿಗಳು ಕಳೆದ ಅವಧಿಯಲ್ಲಿ ನ್ಯಾಯೋಚಿತ, ಪ್ರತಿಫಲಯುಕ್ತ ದರದಂತೆ ಖರೀದಿಸಿ ಬಾಕಿ ಉಳಿಸಿಕೊಂಡಿರುವ 36.68 ಕೋಟಿ ರೂ. ಬಾಕಿ ಹಣವನ್ನು 15 ದಿನಗಳ ಒಳಗಾಗಿ ಪಾವತಿಸಲು ಒಪ್ಪಿಕೊಂಡಿದ್ದಾರೆ.

ಆದರೆ ಎಫ್‌ಆರ್‌ಪಿಗಿಂತ ಹೆಚ್ಚು ಮೊತ್ತಕ್ಕೆ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಖರೀದಿ ಮಾಡಿರುವ ಸಂಬಂಧ ಬಾಕಿ ಇರುವ 450 ಕೋಟಿ ರೂ ಬಾಕಿ ಹಣ ಪಾವತಿಸಲು ಸಮ್ಮತಿ ಸೂಚಿಸಿಲ್ಲ.

English summary
Chief minister H.D.Kumaraswamy will be held crucial meeting with sugar factory owners regarding pending bills of sugar cane growers on November 22 at 12.30 pm at CM's resident office Krishna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X