ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಹತ್ಯೆ ನಿಷೇಧ ಏಕೆ? ಜ್ಞಾನಪೀಠಿಗಳ ಪ್ರಶ್ನೆ

By Mahesh
|
Google Oneindia Kannada News

Girish Karnad
ಬೆಂಗಳೂರು ಜೂ 17 : ಹಿಂದುತ್ವವಾದಿ ಗೂಂಡಾಗಳ ಕಾನೂನುಬಾಹಿರ ಚಟುವಟಿಕೆಗಳಿಗೆ ಗೋಹತ್ಯೆ ನಿಷೇಧ ಕಾಯಿದೆ ರಕ್ಷಣೆ ಒದಗಿಸುತ್ತದೆ. ಕೋಮುವಾದ ಹಿನ್ನಲೆ ಇರಿಸಿಕೊಂಡು ಮತ್ತು ಧರ್ಮದ ಹೆಸರು ಹೇಳಿಕೊಂಡು ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಸರಕಾರ ಹೊರಟಿದೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ನಾಟಕಕಾರ ಗಿರೀಶ್ ಕಾರ್ನಾಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಾನುವಾರು ಹತ್ಯೆ ನಿಷೇಧ ಕಾಯಿದೆ ವಿರೋಧಿ ಜನಾಂದೋಲನ ಸಂಘಟನೆಯು ಆಯೋಜಿಸಿದ್ದ ವಿಚಾರಣ ಸಂಕಿರಣದಲ್ಲಿ ಮಾತನಾಡುತ್ತಿದ್ದ ಕಾರ್ನಾಡ್, ಪ್ರಜಾತಂತ್ರ ವ್ಯಸ್ಥೆಯಲ್ಲಿ ಇಂಥ ಆಹಾರವನ್ನೇ ಸೇವಿಸಬೇಕು ಇಂಥದ್ದನ್ನು ತಿನ್ನಬಾರದೆಂದು ಕಾನೂನು ರೂಪಿಸಲು ಸರಕಾರಕ್ಕೆ ಅಧಿಕಾರವಿಲ್ಲ, ಇದು ರೈತ ವಿರೋಧಿ ಧೋರಣೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗೋಹತ್ಯೆ, ಸಾಗಾಣೆ ಮಾಡಿದರೆ ಅಪರಾಧ. ಮನೆಯಲ್ಲಿ ಗೋಮಾಂಸ ಇರುವುದೂ ಅಪರಾಧ. ಹೀಗೆ ಈ ಕಾಯಿದೆ ಜಾರಿಗೆ ಬಂದರೆ, ಊರು ತುಂಬಾ ಅಪರಾಧಿಗಳು ಸೃಷ್ಟಿ ಯಾಗುತ್ತಾರೆ.

ಒಟ್ಟಿನಲ್ಲಿ ಅಪರಾಧಿಗಳನ್ನು ಸೃಷ್ಟಿ ಮಾಡುವ ಕಾನೂನು ನಮಗೆ ಬೇಕೇ ಎಂದು ಗಿರೀಶ್ ಕಾರ್ನಾಡ್ ಸರಕಾರವನ್ನು ಪ್ರಶ್ನಿಸಿದ್ದಾರೆ. ಗೋಹತ್ಯೆ ಕಾಯಿದೆ ವಿರೋಧಿಸಿ ಶಿವಾಜಿನಗರದ ಮೈದಾನದಲ್ಲಿ ಜೂ.28 ರಂದು ಜನಾಂದೋಲನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಮತ್ತು ಸಾಹಿತಿ ಡಾ. ಯು ಆರ್ ಅನಂತಮೂರ್ತಿ ಈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆಂದು ಸಂಘಟನೆಯ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X