ಸಮಾರೋಪಕ್ಕೆ ಡಾ. ಬರಗೂರು ಬರ್ತಾರಾ? ಇಲ್ವಾ!
ಈ ವಿವಾದ ಸೃಷ್ಟಿಯಾಗುವ ಮುನ್ನವೇ ಸರಕಾರ ಸಮ್ಮೇಳನದ ಸಮಾರೋಪ ಸಮಾರಂಭದ ಆತಿಥಿಗಳ ಪಟ್ಟಿಯಲ್ಲಿ ಡಾ. ಬರಗೂರು ಹೆಸರನ್ನು ಸೇರಿಸಿತ್ತು. ಸಮ್ಮೇಳನದ ವಿಶೇಷಾಧಿಕಾರಿ ಡಾ. ಐ.ಎಂ. ವಿಠ್ಠಲಮೂರ್ತಿ ದೂರವಾಣಿ ಮೂಲಕ ಅವರನ್ನು ಅಹ್ವಾನಿಸಿದ್ದರು. ಆದರೆ, ಸ್ವತಃ ಈಗ ಬರಗೂರು ಪತ್ರ ಬರೆದು ಯಾವುದೇ ಕಾರಣಕ್ಕೂ ತಾವು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ಸಮ್ಮೇಳನ
ಉದ್ಘಾಟನೆ
ವಿಷಯದಲ್ಲಿ
ತಾತ್ತ್ವಿಕ
ವಿರೋಧ
ವ್ಯಕ್ತಪಡಿಸಿದ
ನಾನು
ನನ್ನ
ನೈತಿಕತೆ
ಮತ್ತು
ವಿಶ್ವಾಸಾರ್ಹತೆಯ
ದೃಷ್ಟಿಯಿಂದ
ವಿಶ್ವ
ಕನ್ನಡ
ಸಮ್ಮೇಳನದಲ್ಲಿ
ಭಾಗವಹಿಸುತ್ತಿಲ್ಲ.
ಇದು
ನನ್ನ
ತಾತ್ವಿಕ
ವಿರೋಧದ
ನೆಲೆಗೆ
ಅನುಗುಣವಾಗಿದೆ.
ತಾವು
ಅರ್ಥ
ಮಾಡಿಕೊಳ್ಳುವಿರೆಂದು
ನಂಬಿರುವೆ.
ಇದು
ವಿವಾದವೂ
ಆಗುವುದು
ಬೇಡ.
ಇಷ್ಟಾದರೂ
ನಾನು
ಸಮ್ಮೇಳನದ
ವಿರೋಧಿಯಲ್ಲ.
ನನ್ನ
ಬಹಿಷ್ಕಾರವೂ
ಅಲ್ಲ.
ನೈತಿಕ
ನೆಲೆಯ
ಗೈರು
ಹಾಜರಿ
ಅಷ್ಟೆ.
ಸಮ್ಮೇಳನ
ಯಶಸ್ವಿಯಾಗಲಿ'
ಎಂದು
ಅವರು
ಪತ್ರದಲ್ಲಿ
ಹಾರೈಸಿದ್ದಾರೆ.
ಅತ್ತೂ
ಕರೆದೂ
ಆಮಂತ್ರಣ:
ಈ
ಮಧ್ಯೆ
ಇಂದು
(ಮಾರ್ಚ್
13)
ನಡೆಯಲಿರುವ
ಸಮ್ಮಳನದ
ಸಮಾರೋಪದ
ಅಧ್ಯಕ್ಷತೆ
ವಹಿಸಲಿರುವ
ಹಿರಿಯ
ಪತ್ರಕರ್ತ,
ನಾಡೋಜ
ಡಾ.
ಪಾಟೀಲ
ಪುಟ್ಟಪ್ಪ
ಅವರಿಗೆ
ಸರಕಾರದಿಂದ
ಅಧಿಕೃತ
ಕರೆ
ಬಂದಿದೆ.
ಸಮ್ಮೇಳನದ
ಆಯೋಜಕರಾಗಲಿ
ಅಥವಾ
ಸರಕಾರವಾಗಲಿ
ತಮ್ಮನ್ನು
ಸರಿಯಾಗಿ
ಆಹ್ವಾನಿಸಿಲ್ಲ
ಎಂದು
ಹುಬ್ಬಳ್ಳಿಯಲ್ಲಿ
ಪತ್ರಿಕಾಗೋಷ್ಠಿಯಲ್ಲಿ
ನಡೆಸಿ,
ತೀವ್ರ
ಅಸಾಮಾಧಾನ
ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಧಾರವಾಡದ ಜಿಲ್ಲಾಧಿಕಾರಿ ದರ್ಪಣ ಜೈನ್ ಶುಕ್ರವಾರ ಸಂಜೆ ಪಾಪು ಮನೆಗೆ ಭೇಟಿ ನೀಡಿ, ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಸರಕಾರದ ವತಿಯಿಂದ ವಿನಂತಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಮ್ಮೇಳನದ ವಿಶೇಷಾಧಿಕಾರಿ ಡಾ. ಐ.ಎಂ. ವಿಠ್ಠಲಮೂರ್ತಿ ಅವರು ಶನಿವಾರ ಪಾಪು ಜತೆ ದೂರವಾಣಿಯಲ್ಲಿ ಮಾತನಾಡಿ, ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.