ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಾರ್ರೀ ಬೆಳಗಾವಿ, ರೈಟ್ ರೈಟ್ ! ಕನ್ನಡಿಗರಿಗೆ ವಿಶೇಷ ಪ್ರಯಾಣ
ವಿಶೇಷ ರೈಲು ಮಾರ್ಚ್ 10ರಂದು ರಾತ್ರಿ 8 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಟು ಮಾರ್ಚ್ 11ರಂದು ಬೆಳಗ್ಗೆ 8 ಗಂಟೆಗೆ ಬೆಳಗಾವಿ ತಲುಪಲಿದೆ. ಮಾರ್ಚ್ 13ರಂದು ರಾತ್ರಿ 9.30ಕ್ಕೆ ಬೆಳಗಾವಿ ಬಿಡಲಿರುವ ರೈಲು 14ರ ಬೆಳಗ್ಗೆ ಬೆಂಗಳೂರು ಸೇರಲಿದೆ. ಎರಡನೇ ಶ್ರೇಣಿಯ, ಮೂರನೇ ಶ್ರೇಣಿಯ ಬೋಗಿಗಳು ಮತ್ತು ಸಾಮಾನ್ಯ ದರ್ಜೆ ಬೋಗಿಗಳು ಸೇರಿದಂತೆ 18 ಬೋಗಿಗಳನ್ನು ಈ ವಿಶೇಷ ರೈಲು ಒಳಗೊಂಡಿರುತ್ತದೆ.
ಶೇ. 30 ರಿಯಾಯಿತಿ: ವಿಶೇಷ ಹವಾನಿಯಂತ್ರಿತ ರೈಲಿನಲ್ಲಿ ಪ್ರಯಾಣಿಸುವ ವಿಶ್ವ ಕನ್ನಡ ಸಮ್ಮೇಳನದ ನೋಂದಾಯಿತ ಪ್ರತಿನಿಧಿಗಳಿಗೆ ರಾಜ್ಯ ಸರಕಾರ ರೈಲಿನ ಎಲ್ಲ ದರ್ಜೆಯ ಪ್ರಯಾಣ ದರದಲ್ಲಿ ಶೇ. 30ರಷ್ಟು ರಿಯಾಯಿತಿ ಪ್ರಕಟಿಸಿದೆ. ಟಿಕೆಟ್ ಗಳನ್ನು ಬೆಂಗಳೂರಿನ ಕಾರ್ಪೊರೇಶನ್ ವೃತ್ತದಲ್ಲಿರುವ ಬಾದಾಮಿ ಹೌಸ್ ನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕಚೇರಿಯಲ್ಲಿ ಕಾಯ್ದಿರಿಸಬಹುದು. ದೂರವಾಣಿ: 080- 4334 4334/ 4346 4346.
Comments
ಬೆಳಗಾವಿ ಕನ್ನಡ ಸಮ್ಮೇಳನ belgaum kannada convention vishwa kannada sammelana ಕರ್ನಾಟಕ ಪ್ರವಾಸೋದ್ಯಮ ಪ್ರವಾಸ kstdc travel
English summary
The Karnataka Government has arranged Special Transportation Facilities to Belgaum on the occation of Kannada Convention to be held on March 11. Transporation includes Air, Rail and Bus Facilities said OSD I.M. Vittala Murthy in Banglore On March 7th.
Story first published: Tuesday, March 8, 2011, 14:35 [IST]