ಗೋಪಿಚಂದ್ ಹೆಸರಿನ ಅಕಾಡೆಮಿ
ಹೈದ್ರಾಬಾದ್ ನ ಗಚಿಬೌಲಿಯಲ್ಲಿರುವ ತಮ್ಮದೇ ಹೆಸರಿನ ಅಕಾಡೆಮಿ ಮೂಲಕ ಬ್ಯಾಡ್ಮಿಂಟನ್ ನಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿರುವ ಗೋಪಿ ಅದಕ್ಕಾಗಿ ತಮ್ಮ ಸರ್ವಸ್ವವನ್ನೇ ಮುಡಿಪಾಗಿಟ್ಟಿದ್ದಾರೆ. ಅವರಿಗೆ ಬ್ಯಾಡ್ಮಿಂಟನ್ ವೊಂದೇ ಬದುಕು.
ತಮ್ಮ ಶಿಷ್ಯರನ್ನು ಅಣಿಗೊಳಿಸಿದ್ದರು
ಪ್ರತಿದಿನ ಮುಂಜಾನೆ ನಾಲ್ಕು ಗಂಟೆಗೆ ಅಕಾಡೆಮಿಗೆ ಬರುವ ಗೋಪಿಚಂದ್ ಅವರು ಸಿಂಧು, ಕಿಂಡಬಿರೊಂದಿಗೆ ಅಭ್ಯಾಸ ನಡೆಸುತ್ತಾರೆ. ಒಂದು ಗಂಟೆ ಆಟ ಒಲಿಂಪಿಕ್ ನಲ್ಲಿ ಪದಕ ಜಯಿಸಲೇಬೇಕೆಂಬ ಏಕಮಾತ್ರ ಧ್ಯೇಯದೊಂದಿಗೆ ಒಂದು ವರ್ಷದ ಹಿಂದೆಯೇ ತಮ್ಮ ಶಿಷ್ಯರನ್ನು ಅಣಿಗೊಳಿಸಿದ್ದರು.
ವಿಶೇಷ ಫಿಸಿಕಲ್ ಫಿಟ್ನೆಸ್ ಟ್ರೇನರ್
ಅದರ ಭಾಗವಾಗಿ ವೇಯ್ಟ್ ಟ್ರೇನರ್ ಮತ್ತು ಫಿಸಿಕಲ್ ಫಿಟ್ನೆಸ್ ಟ್ರೇನರ್ ಗಳನ್ನು ನೇಮಿಸಿ ಅವರಿಗೆ ವಿಶೇಷ ಹೊಣೆಗಾರಿಕೆ ನೀಡಲಾಯಿತು. ಅಂಗಳದಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ದಣಿವರಿಯದೇ ಆಡುವಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಅದು ಈಗ ಫಲಕೊಟ್ಟಿದೆ.
ಅಕಾಡೆಮಿ ನಿರ್ಮಾಣಕ್ಕೆ 13 ಕೋಟಿ ರೂಪಾಯಿ
ಪ್ರತಿಯೊಂದು ಸಾಧನೆಯ ಹಿಂದೆ ನೋವು, ಅವಮಾನ ಸೋಲಿನ ಕಥೆ ಇರುತ್ತೆ. ಗೋಪಿಚಂದ್ 2001ರಲ್ಲಿ ಆಲ್ ಇಂಡಿಯಾ ಬ್ಯಾಡ್ಮಿಂಟನ್ ಟ್ರೋಫಿ ಜಯಿಸಿದ ಬಳಿಕ ಅಕಾಡೆಮಿ ಸ್ಥಾಪನೆಗೆ ಆಂಧ್ರ ಸರ್ಕಾರ 5 ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ ಅಕಾಡೆಮಿ ನಿರ್ಮಾಣಕ್ಕೆ 13 ಕೋಟಿ ರೂಪಾಯಿ ಬೇಕಿತ್ತು.
ಮನೆಯನ್ನು ಅಡವಿಟ್ಟಿದ್ದ ಗೋಪಿಚಂದ್
ಹಣಕಾಸು ನೆರವು ಸಿಗದೇ ತಮ್ಮ ಮನೆಯನ್ನು 3 ಕೋಟಿ ರೂಪಾಯಿಗೆ ಅಡವಿಡಬೇಕಾಗಿತ್ತು. ಈ ವೇಳೆ ಉದ್ಯಮಿಯೊಬ್ಬರು 5 ಕೋಟಿ ನೀಡಿದರು. ಹೀಗೆ ತಲೆಯೆತ್ತಿದ್ದ ಅಕಾಡೆಮಿ ಈ ದಿನ ಅತೀ ದೊಡ್ಡ ಕ್ರೀಡಾಕೂಟದಲ್ಲಿ ಭಾರತದ ಹೆಸರು ಅಚ್ಚಳಿಯದಂತೆ ಮಾಡಿದೆ. ನೀವು ನೋಡುತ್ತಿರುವುದು ಸೆಪ್ಟೆಂಬರ್ 2014ರ ಚಿತ್ರ
ದೇಶದ ಏಕೈಕ ಬ್ಯಾಡ್ಮಿಂಟನ್ ಅಕಾಡೆಮಿ
ದೇಶದ ಏಕೈಕ ಬ್ಯಾಡ್ಮಿಂಟನ್ ಅಕಾಡೆಮಿ ಎನ್ನುವ ಹೆಗ್ಗಳಿಗೆ ಪಾತ್ರವಾಗಿರುವ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ 150ಕ್ಕೂ ಹೆಚ್ಚು ಆಟಗಾರರಿಗೆ ವೃತಿಪರ ತರಬೇತಿ ನೀಡುತ್ತಿದೆ. ಈ ಆಕಾಡೆಮೆಯಲ್ಲಿ ತರಬೇತಿ ಪಡೆದ ಸೈನಾ, ಸಿಂಧು, ಶ್ರೀಕಾಂತ್ ಇಂದು ವಿಶ್ವವೇ ಇವರನ್ನು ಗುರುತಿಸುತ್ತಿರುವುದೇ ಗೋಪಿಚಂದ್ ಅಕಾಡೆಮಿಯ ಹೆಗ್ಗಳಿಕೆ.