ಚೆನ್ನೈ, ಜುಲೈ 20 : ಯೂನಿವರ್ಸಲ್ ಸ್ಟಾರ್ ನಟ ಕಮಲ್ ಹಾಸನ್ ಪ್ರೊ ಕಬಡ್ಡಿ ಲೀಗ್ ಐದನೇ ಆವೃತ್ತಿಯಲ್ಲಿ ಸಚಿನ್ ತೆಂಡೂಲ್ಕರ್ ಸಹಮಾಲೀಕತ್ವದ ತಮಿಳ್ ತಲೈವಾಸ್ ತಂಡದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಪ್ರೋ ಕಬಡ್ಡಿ ಲೀಗ್ 5 ಸಂಪೂರ್ಣ ವೇಳಾಪಟ್ಟಿ
ತಲೈವಾಸ್ ತಂಡದ ಜೆರ್ಸಿಯನ್ನು ಬುಧವಾರ ಅನಾವರಣಗೊಳಿಸಿದ ಬಳಿಕ ಕಮಲ್ ಹಾಸನ್ ಮಾತನಾಡಿದರು. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ತಮಿಳು ಸಿನಿಮಾ ನಟರಾದ ಚಿರಂಜೀವಿ, ಅಲ್ಲು ಅರ್ಜುನ್, ರಾಮ್ ಚರಣ್ ತೇಜಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ 'ಕ್ರೀಡಾ ತಂಡದ ಭಾಗವಾಗಲು ನನಗೆ ಅತೀವ ಸಂತೋಷವಾಗಿದೆ' ಎಂದು ಕಮಲ್ ಹಾಸನ್ ಸಂತಸ ವ್ಯಕ್ತಪಡಿಸಿದರು.