ಸಿಡ್ನಿ, ಜೂನ್ 23 : ಆಸ್ಟ್ರೇಲಿಯಾ ಓಪನ್ ಸೂಪರ್ ಸಿರೀಸ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿಡಾಂಬಿ ಶ್ರೀಕಾಂತ್ ಸೆಮಿ ಪೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಇಂಡೋನೇಷಿಯನ್ ಓಪನ್ ಪ್ರಶಸ್ತಿ ವಿಜೇತ ಶ್ರೀಕಾಂತ್ ಅವರು ಸಾಯಿ ಪ್ರಣೀತ್ ಅವರನ್ನು 25-23, 21-17 ಸೆಟ್ ಗಳಿಂದ ಮಣಿಸಿ ಸೆಮೀಸ್ ಗೆ ಎಂಟ್ರಿ ಕೊಟ್ಟರು.
ಭಾರತದ ಕಿಡಾಂಬಿ ಶ್ರೀಕಾಂತ್ ಮುಡಿಗೆ ಇಂಡೋನೇಷಿಯನ್ ಪ್ರಶಸ್ತಿ
ಗುರುವಾರ ಶ್ರೀಕಾಂತ್ ವಿಶ್ವ ಅಗ್ರ ಶ್ರೇಯಾಂಕಿತ ಮಲೇಷ್ಯಾದ ಸಾನ್ ವಾನ್ ವೊ ಅವರನ್ನು 15-21, 21-13, 21-13 ಸೆಟ್ ಗಳಿಂದ ಮಣಿಸಿ ಕ್ವಾರ್ಟರ್ ಪೈನಲ್ ಗೆ ಪ್ರವೇಶಿಸಿದ್ದರು.
ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಬಿ. ಸಾಯಿ ಪ್ರಣೀತ್, ಚೀನಾದ ಯುಕ್ಸಿಯಂಗ್ ವಿರುದ್ಧ 21-15, 18-1, 21-13 ಅಂತರದಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಮಾಡಿದ್ದರು.