ಬೆಂಗಳೂರು, ಜ.6: ಐಸಿಸಿ ವಿಶ್ವಕಪ್ 2015ರಲ್ಲಿ ಆಡುವ 15 ಜನ ಆಟಗಾರರ ಹೆಸರನ್ನು ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಮಂಗಳವಾರ ಮಧ್ಯಾಹ್ನ ಪ್ರಕಟಿಸಿದೆ.
ಮುಂಬೈನಲ್ಲಿ ಸಭೆ ಸೇರಿದ್ದ ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ವಿಶ್ವಕಪ್ ಗೆಲ್ಲಿಸಿಕೊಡಬಲ್ಲ 15 ಜನ ಕ್ರಿಕೆಟರ್ ಗಳನ್ನು ಹೆಸರಿಸಿದೆ. ನಿರೀಕ್ಷೆಯಂತೆ ಯುವರಾಜ್ ಸಿಂಗ್ ಅವರ ಬಗ್ಗೆ ಆಯ್ಕೆ ಸಮಿತಿ ಚರ್ಚೆ ನಡೆಸಿದರೂ ಆಯ್ಕೆಯಾಗಲು ಸಾಧ್ಯವಾಗಿಲ್ಲ. [ಸರ್ವಶ್ರೇಷ್ಠ ವಿಶ್ವಕಪ್ ತಂಡ ಆಯ್ಕೆ ಮಾಡಿ]
ವಿಡಿಯೋ ಕಾನ್ಫರೆನ್ಸ್ ಮೂಲಕ ಆಸ್ಟ್ರೇಲಿಯಾದಿಂದಲೇ ಧೋನಿ ಹಾಗೂ ಕೋಚ್ ಡಂಕನ್ ಫ್ಲೆಚ್ಚರ್ ಅವರ ಸಲಹೆಯನ್ನು ಪಡೆದುಕೊಂಡಿದ್ದು ವಿಶೇಷ.
ಹಾಲಿ ವಿಶ್ವ ಕಪ್ ವಿಜೇತ ತಂಡವಾದ ಟೀಂ ಇಂಡಿಯಾ ತನ್ನ ವಿಶ್ವಕಪ್ 2015 ಟೂರ್ನಿಯನ್ನು ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ವಿರುದ್ಧ ಅಡಿಲೇಡ್ ನಲ್ಲಿ ಫೆ.15ರಂದು ಎದುರಿಸಲಿದೆ. ಫೆ.14ರಿಂದ ಮಾರ್ಚ್ 29ರ ತನಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. [ಅಭ್ಯಾಸ ಪಂದ್ಯ: ಭಾರತಕ್ಕೆ ಆಸ್ಟ್ರೇಲಿಯಾ ಮೊದಲ ಎದುರಾಳಿ]
ವಿಶ್ವಕಪ್ ತಂಡಕ್ಕೆ ಆಯ್ಕೆಯಾದ 15 ಜನ ಸದಸ್ಯರು:
ಆರಂಭಿಕ ಆಟಗಾರರು
1. ಅಜಿಂಕ್ಯ ರಹಾನೆ (ಮುಂಬೈ/ ರಾಜಸ್ಥಾನ ರಾಯಲ್ಸ್)
2. ಶಿಖರ್ ಧವನ್ (ದೆಹಲಿ/ ಸನ್ ರೈಸರ್ಸ್ ಹೈದರಾಬಾದ್)
ಮಧ್ಯಮ ಕ್ರಮಾಂಕ
3. ವಿರಾಟ್ ಕೊಹ್ಲಿ, (ದೆಹಲಿ/ರಾಯಲ್ ಚಾಲೆಂಜರ್ಸ್ ಬೆಂಗಳೂರು), ಉಪ ನಾಯಕ
4. ಸುರೇಶ್ ರೈನಾ (ಉತ್ತರಪ್ರದೇಶ/ಸಿಎಸ್ ಕೆ)
5. ರೋಹಿತ್ ಶರ್ಮ (ಮುಂಬೈ/ ಮುಂಬೈ ಇಂಡಿಯನ್ಸ್)
6. ಎಂಎಸ್ ಧೋನಿ (ವಿಕೆಟ್ ಕೀಪರ್, ಜಾರ್ಖಂಡ್/ಚೆನ್ನೈ ಸೂಪರ್ ಕಿಂಗ್ಸ್) ನಾಯಕ
7. ಅಂಬಟಿ ರಾಯುಡು (ವಿಕೆಟ್ ಕೀಪರ್), (ಬರೋಡಾ/ಮುಂಬೈ ಇಂಡಿಯನ್ಸ್)
ಸ್ಪಿನ್ನರ್
8. ಆರ್ ಅಶ್ವಿನ್ (ತಮಿಳುನಾಡು/ ಚೆನ್ನೈ ಸೂಪರ್ ಕಿಂಗ್ಸ್)
9. ಅಕ್ಷರ್ ಪಟೇಲ್ (ಗುಜರಾತ್/ ಕಿಂಗ್ಸ್ XI ಪಂಜಾಬ್)
ಆಲ್ ರೌಂಡರ್
10. ರವೀಂದ್ರ ಜಡೇಜ (ಸೌರಾಷ್ಟ್ರ/ ಸಿಎಸ್ ಕೆ)
11. ಸ್ಟುವರ್ಟ್ ಬಿನ್ನಿ ಸ್ಟುವರ್ಟ್ ಬಿನ್ನಿ (ಕರ್ನಾಟಕ/ ರಾಜಸ್ಥಾನ ರಾಯಲ್ಸ್)
ವೇಗಿಗಳು
12. ಭುವನೇಶ್ವರ್ ಕುಮಾರ್ (ಉತ್ತರಪ್ರದೇಶ/ಸೈನ್ ರೈಸರ್ಸ್ ಹೈದರಾಬಾದ್)
13. ಮಹಮ್ಮದ್ ಶಮಿ (ಬೆಂಗಾಳ/ ಡೆಲ್ಲಿ ಡೇರ್ ಡೆವಿಲ್ಸ್)
14. ಉಮೇಶ್ ಯಾದವ್ (ವಿದರ್ಭ/ ಕೋಲ್ಕತ್ತಾ ನೈಟ್ ರೈಡರ್ಸ್)
15. ಇಶಾಂತ್ ಶರ್ಮ (ದೆಹಲಿ/ ಸನ್ ರೈಸರ್ಸ್ ಹೈದರಾಬಾದ್)
2011 ವಿಶ್ವಕಪ್ ಗೆದ್ದ ತಂಡದಲ್ಲಿದ್ದು ಈ ಬಾರಿ ಆಯ್ಕೆಯಾಗದ ಆಟಗಾರರು:
ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಮುನಾಫ್ ಪಟೇಲ್, ಪಿಯೂಷ್ ಚಾವ್ಲಾ, ಯುಸೂಫ್ ಪಠಾಣ್, ಅಶೀಶ್ ನೆಹ್ರಾ, ಸಚಿನ್ ತೆಂಡೂಲ್ಕರ್(ನಿವೃತ್ತ), ಎಸ್ ಶ್ರೀಶಾಂತ್(ನಿಷೇಧಿತ)
2011 ವಿಶ್ವಕಪ್ ಗೆದ್ದ ತಂಡದ 15 ಆಟಗಾರರು:
ಎಂಎಸ್ ಧೋನಿ(ನಾಯಕ), ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಗೌತಮ್ ಗಂಭೀರ್, ಯುಸೂಫ್ ಪಠಾಣ್, ಗೌತಮ್ ಗಂಭೀರ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಎಸ್ ಶ್ರೀಶಾಂತ್, ಅಶೀಶ್ ನೆಹ್ರಾ, ಆರ್ ಅಶ್ವಿನ್, ಮುನಾಫ್ ಪಟೇಲ್, ಪಿಯೂಷ್ ಚಾವ್ಲಾ
ಒನ್ ಇಂಡಿಯಾ ಸುದ್ದಿ