ಮುಂಬೈ, ಏಪ್ರಿಲ್ 01: ಸೋಲಿರಲಿ, ಗೆಲುವಿರಲಿ ಪಂದ್ಯದ ನಂತರ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ನೀಡುವ ಕಾರಣಗಳು ತಪ್ಪದೇ ಕೇಳಬೇಕು. ಇತರೆ ಎಲ್ಲಾ ನಾಯಕರಿಗೂ ಇದು ಪಾಠವಾಗಬೇಕಿದೆ. ಮೈದಾನದ ಒಳಗೂ ಹೊರಗೂ ಧೋನಿ ಮಾಡುವ ತಂತ್ರಗಾರಿಕೆ ಬಗ್ಗೆ ಭಾರಿ ಚರ್ಚೆ ನಡೆಯುತ್ತದೆ.
| ಗ್ಯಾಲರಿ" />ಪಂದ್ಯದ ವರದಿ | ಗ್ಯಾಲರಿ
ಮುಂಬೈನ ವಾಂಖೇಡೆ ಮೈದಾನದಲ್ಲಿ ಮಾರ್ಚ್ 31 ರಂದು ವಿಂಡೀಸ್ ವಿರುದ್ಧ ಪರಾಭವಗೊಂಡ ಬಳಿಕ ಸುದ್ದಿಗೋಷ್ಠಿ ನಡೆಸುತ್ತಿದ್ದ ಧೋನಿಗೆ ಪತ್ರಕರ್ತರೊಬ್ಬರು ಈ ಸೋಲಿನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳುತ್ತೀರಾ? ಎಂದು ಪ್ರಶ್ನೆ ಮಾಡಿದ್ದಕ್ಕೆ ನೀಡಿದ ಉತ್ತರ ಎಲ್ಲರಿಗೂ ತಿಳಿದಿರಬಹುದು.[ಶರ್ಟ್ ಕಳಚಿ ಡ್ಯಾನ್ಸ್ ಮಾಡಿದ ಗೇಲ್, ಬ್ರಾವೋ]
ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾವನ್ನು 7 ವಿಕೆಟ್ ಗಳಿಂದ ಸೋಲಿಸಿದ ವೆಸ್ಟ್ ಇಂಡೀಸ್ ಬಹುಕಾಲದ ನಂತರ ಐಸಿಸಿ ಟೂರ್ನಿಯ ಫೈನಲ್ ತಲುಪಿದೆ. ಈ ನಡುವೆ ಪಂದ್ಯದ ನಂತರ ಧೋನಿ ನೀಡಿದ ಐದು ಪ್ರಮುಖ ಕಾರಣಗಳು ಇಲ್ಲಿವೆ.[ಬಾಂಗ್ಲಾ ಕ್ರಿಕೆಟಿಗ ಭಾರತದ ಸೋಲಿನ ಬಗ್ಗೆ ಹೇಳಿದ್ದೇನು?]