ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಸೋಲಿಗೆ ಧೋನಿ ಕೊಟ್ಟ 5 ಕಾರಣಗಳು

By Mahesh

ಮುಂಬೈ, ಏಪ್ರಿಲ್ 01: ಸೋಲಿರಲಿ, ಗೆಲುವಿರಲಿ ಪಂದ್ಯದ ನಂತರ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ನೀಡುವ ಕಾರಣಗಳು ತಪ್ಪದೇ ಕೇಳಬೇಕು. ಇತರೆ ಎಲ್ಲಾ ನಾಯಕರಿಗೂ ಇದು ಪಾಠವಾಗಬೇಕಿದೆ. ಮೈದಾನದ ಒಳಗೂ ಹೊರಗೂ ಧೋನಿ ಮಾಡುವ ತಂತ್ರಗಾರಿಕೆ ಬಗ್ಗೆ ಭಾರಿ ಚರ್ಚೆ ನಡೆಯುತ್ತದೆ.

ಪಂದ್ಯದ ವರದಿ</a> | <a class=ಗ್ಯಾಲರಿ" title="ಪಂದ್ಯದ ವರದಿ | ಗ್ಯಾಲರಿ" />ಪಂದ್ಯದ ವರದಿ | ಗ್ಯಾಲರಿ

ಮುಂಬೈನ ವಾಂಖೇಡೆ ಮೈದಾನದಲ್ಲಿ ಮಾರ್ಚ್ 31 ರಂದು ವಿಂಡೀಸ್ ವಿರುದ್ಧ ಪರಾಭವಗೊಂಡ ಬಳಿಕ ಸುದ್ದಿಗೋಷ್ಠಿ ನಡೆಸುತ್ತಿದ್ದ ಧೋನಿಗೆ ಪತ್ರಕರ್ತರೊಬ್ಬರು ಈ ಸೋಲಿನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳುತ್ತೀರಾ? ಎಂದು ಪ್ರಶ್ನೆ ಮಾಡಿದ್ದಕ್ಕೆ ನೀಡಿದ ಉತ್ತರ ಎಲ್ಲರಿಗೂ ತಿಳಿದಿರಬಹುದು.[ಶರ್ಟ್ ಕಳಚಿ ಡ್ಯಾನ್ಸ್ ಮಾಡಿದ ಗೇಲ್, ಬ್ರಾವೋ]

MS Dhoni gives 5 reasons

ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾವನ್ನು 7 ವಿಕೆಟ್ ಗಳಿಂದ ಸೋಲಿಸಿದ ವೆಸ್ಟ್ ಇಂಡೀಸ್ ಬಹುಕಾಲದ ನಂತರ ಐಸಿಸಿ ಟೂರ್ನಿಯ ಫೈನಲ್ ತಲುಪಿದೆ. ಈ ನಡುವೆ ಪಂದ್ಯದ ನಂತರ ಧೋನಿ ನೀಡಿದ ಐದು ಪ್ರಮುಖ ಕಾರಣಗಳು ಇಲ್ಲಿವೆ.[ಬಾಂಗ್ಲಾ ಕ್ರಿಕೆಟಿಗ ಭಾರತದ ಸೋಲಿನ ಬಗ್ಗೆ ಹೇಳಿದ್ದೇನು?]


ಧೋನಿ ನೀಡಿದ ಐದು ಪ್ರಮುಖ ಕಾರಣಗಳು ಇಲ್ಲಿವೆ:

* ಟಾಸ್ ಸೋತಿದ್ದು ಪ್ರಮುಖ ಕಾರಣ. ಟಾಸ್ ಸೋತು ಮೊದಲು ಬ್ಯಾಟಿಂಗ್ ಆಡಬೇಕಾಯಿತು.

* ಪಂದ್ಯ ಅರ್ಧಗಂಟೆ ಮುಂಚಿತವಾಗಿ ಆರಂಭಗೊಂಡಿತು(7 PM IST), ಎಲ್ಲಾ ಲೀಗ್ ಪಂದ್ಯಗಳು 7.30 PM ಗೆ ಶುರುವಾಗುತ್ತಿತ್ತು.

* ಮೈದಾನದ ಆರ್ದ್ರತೆ, ತೇವಾಂಶದಿಂದ ಸ್ಪಿನ್ನರ್ ಗಳಿಗೆ ಬಾಲ್ ಸರಿಯಾಗಿ ಹಿಡಿಯಲು ಆಗುತ್ತಿರಲಿಲ್ಲ.

* 2 ನೋಬಾಲ್ ಎಸೆತ (ಸಿಮನ್ಸ್ ಗೆ ಎರಡು ಬಾರಿ 18 ಹಾಗೂ 50 ರನ್ ಆಗಿದ್ದಾಗ) ಜೀವದಾನ) ರವಿಚಂದ್ರನ್ ಅಶ್ವಿನ್ ಹಾಗೂ ಹಾರ್ದಿಕ್ ಪಾಂಡ್ಯ ನೋ ಬಾಲ್ ಮಾಡಿದರು.[ಅಭಿಮಾನಿಗೆ 'ನಾಯಿ' ಎಂದ ಹರ್ಭಜನ್ ಸಿಂಗ್]

* ಇನ್ನೂ 30 ರನ್ ಹೆಚ್ಚಿಗೆ ಬಾರಿಸಿದ್ದರೆ ಸರಿ ಹೋಗುತ್ತಿತ್ತು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X