ನವದೆಹಲಿ, ಏಪ್ರಿಲ್, 07: ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜ ಅವರು ಏಪ್ರಿಲ್ 17 ರಂದು ರಿವಾಬ ಸೋಲಂಕಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಆದರೆ ಜಡೇಜ ತಮ್ಮ ಮದುವೆಗೆ ಮಹೇಂದ್ರ ಸಿಂಗ್ ಧೊನಿ ಮತ್ತು ಸುರೇಶ್ ರೈನಾ ಅವರಿಗೆ ಆಹ್ವಾನ ನೀಡಿಲ್ಲ.
ಆಶ್ಚರ್ಯ ಆಗ್ತಾ ಇದೆಯೇ, ಬೆಂಗಾಲಿ ಚಾನಲ್ ವೊಂದಕ್ಕೆ ಸಂದರ್ಶನ ನೀಡಿರುವ ಜಡೇಜ ಈ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ, ರೈನಾ ಮತ್ತು ಧೋನಿಗೆ ಆಹ್ವಾನ ನೀಡುವ ಪ್ರಮೆಯವೇ ಬರುವುದಿಲ್ಲ. ಅವರು ನನ್ನ ಆಪ್ತ ಸ್ನೇಹಿತರಾಗಿದ್ದು ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲೇಬೇಕು. ವಿಶೇಷವಾದ ಆಮಂತ್ರಣವೊಂದನ್ನು ಕಳಿಸಿ ಕೊಡಲಿದ್ದೇವೆ ಎಂದು ಜಡೇಜ ತಿಳಿಸಿದ್ದಾರೆ.[ರವೀಂದ್ರ ಜಡೇಜ ಮದ್ವೆ ಡೇಟ್ ನಿಗದಿ, ಆಡಿ ಕಾರು ಗಿಫ್ಟ್]
ಮದುವೆಗೆ ಮುನ್ನವೇ ಏಪ್ರಿಲ್ 04 ಸೋಮವಾರದಂದು ಭಾವಿ ಪತ್ನಿಯ ತಂದೆಯಿಂದ ಐಷಾರಾಮಿ ಆಡಿ ಕಾರೊಂದನ್ನು ಉಡುಗೊರೆಯಾಗಿ ಜಡೇಜಾ ಪಡೆದುಕೊಂಡಿದ್ದರು. ಇದರ ಬೆಲೆ ಬರೋಬ್ಬರಿ 97 ಲಕ್ಷ ರು.[ಜಡೇಜ ನಿಶ್ಚಿತಾರ್ಥದ ಚಿತ್ರಗಳು]
ಫೆಬ್ರವರಿ 5 ರಂದೇ ಜಡೇಜ ಹಾಗೂ ರಿವಾಬ ನಡುವೆ ವಿವಾಹ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿತ್ತು. ಟೀಂ ಇಂಡಿಯಾದ ಆಲ್ ರೌಂಡರ್ ಹೊಸ ಇನಿಂಗ್ಸ್ ಆರಂಭ ಮಾಡುತ್ತಿದ್ದು ಶುಭವಾಗಲಿ...