ಮುಂಬೈ, ಮೇ 09: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗಿಂತ ಅವರ ಗೆಳೆಯ ವಿನೋದ್ ಕಾಂಬ್ಳಿ ಹೆಚ್ಚು ಪ್ರತಿಭಾವಂತ ಎಂದು ಮಾಜಿ ಕ್ರಿಕೆಟರ್ ಕಪಿಲ್ ದೇವ್ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, 'ಸಚಿನ್ ಹಾಗೂ ವಿನೋದ್ ಒಂದೇ ಕಾಲ ಘಟ್ಟದಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು. ಆದರೆ, ಸಚಿನ್ ಅವರಿಗೆ ಸಿಕ್ಕ ಅವಕಾಶ, ಪ್ರೋತ್ಸಾಹ, ವಿನೋದ್ ಕಾಂಬ್ಳಿಗೆ ಸಿಕ್ಕಿರಲಿಲ್ಲ. [ಸಚಿನ್ ಬಗ್ಗೆ ಮಾತಾಡಿದ ಕಾಂಬ್ಳಿಗೆ ಟ್ವೀಟ್ ಟಾಂಗ್!]
ನಮ್ಮಲ್ಲಿ ಅನೇಕ ಪ್ರತಿಭೆಗಳ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಸಿಗುವುದಿಲ್ಲ, ಇದಕ್ಕೆ ಅವರ ಸುತ್ತಮುತ್ತಲಿನ ವಾತಾವರಣ, ಕುಟುಂಬದ ಬೆಂಬಲ, ಸ್ನೇಹಿತರು, ಕೋಚ್ ಎಲ್ಲರೂ ಕಾರಣರಾಗುತ್ತಾರೆ. ಸಚಿನ್ ಹಾಗೂ ಕಾಂಬ್ಳಿ ಅವರ ವೃತ್ತಿ ಬದುಕನ್ನು ಗಮನಿಸಿದರೆ ಪರಸ್ಪರ ವಿರುದ್ಧವಾಗಿದ್ದು, ಸಚಿನ್ ಅವರಿಗೆ ಸೂಕ್ತ ಅವಕಾಶ ಸಿಕ್ಕಿದ್ದರಿಂದ ಅವರು ಸುಧೀರ್ಘವಾಗಿ 21 ವರ್ಷಗಳ ಕಾಲ ಕ್ರಿಕೆಟ್ ಜೀವನ ನಡೆಸಿದರು ಎಂದು ಮಾಜಿ ನಾಯಕ ಕಪಿಲ್ ಹೇಳಿದ್ದಾರೆ. [ಕ್ರಿಕೆಟ್ ದೇವರ ಮೆಚ್ಚುಗೆ ಪಡೆಯುವಲ್ಲಿ ಸೋತ ಕಪಿಲ್]
ಸಚಿನ್ ಅವರ ಪ್ರತಿಭೆ ಬಗ್ಗೆ ಎದುರಾಳಿಗೆ ತಂಡಕ್ಕೆ ಗೌರವವಿತ್ತೇ ಹೊರತೂ ಯಾರಿಗೂ ಭೀತಿ ಹುಟ್ಟುತ್ತಿರಲಿಲ್ಲ. ನಾನು ಸಚಿನ್ ಗೆ ಸೆಹ್ವಾಗ್ ಹಾಗೂ ರಿಚರ್ಡ್ಸ್ ರೀತಿ ಬ್ಯಾಟ್ ಮಾಡಲು ಹೇಳುತ್ತಿದ್ದೆ ಎಂದಿದ್ದಾರೆ.