ಕೋಲ್ಕತಾ, ನ.25: ಇಲ್ಲಿನ ಜಾಧವ್ಪುರ ಯುನಿವರ್ಸಿಟಿ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿರುವ 19 ವರ್ಷ ವಯೋಮಿತಿಯೊಳಗಿನ ತಂಡಗಳ ತ್ರಿಕೋನ ಸರಣಿಯಲ್ಲಿ ಭಾರತ ಫೈನಲ್ ತಲುಪಿದೆ. ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವೇ ನನ್ನ ಉತ್ತಮ ಪ್ರದರ್ಶನಕ್ಕೆ ಕಾರಣ ಎಂದು ಪಂದ್ಯಶ್ರೇಷ್ಠ ಸುಂದರ್ ಅವರು ಹೇಳಿದ್ದಾರೆ.
ಟೀಂ ಇಂಡಿಯಾ ಆಟಗಾರ ಸುಂದರ್ ವಾಷಿಂಗ್ಟನ್ ಅವರ ಆಲ್ರೌಂಡ್ ಆಟದ ನೆರವಿನಿಂದ ಆತಿಥೇಯ ಭಾರತ ತಂಡ ತ್ರಿಕೋನ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 4 ವಿಕೆಟ್ಗಳಿಂದ ಮಣಿಸಿದೆ.
ಸತತ ಮೂರು ಗೆಲುವು ಸಾಧಿಸಿರುವ ಭಾರತ ತ್ರಿಕೋನ ಸರಣಿಯಲ್ಲಿ ಫೈನಲ್ಗೆ ತಲುಪಿದೆ. ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮೆಹದಿ ಹಸನ್ ಮಿರಾಝ್ (87) ಅರ್ಧಶತಕದ ನೆರವಿನಿಂದ 50 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 222 ರನ್ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ: 50 ಓವರ್ಗಳಲ್ಲಿ 222/7
(ಮೆಹದಿ ಹಸನ್ ಮಿರಾಝ್ 87,ಸೈಫ್ ಹಸನ್ 33, ಮುಹಮ್ಮದ್ ಸೈಫುದ್ದೀನ್ 30, ವಾಷಿಂಗ್ಟನ್ ಸುಂದರ್ 2-25)
ಭಾರತ: 48.4 ಓವರ್ಗಳಲ್ಲಿ 223/6
(ಆರ್. ಪಂತ್ 51, ವಾಷಿಂಗ್ಟನ್ ಸುಂದರ್ 50, ಖರೆ 41, ಮೆಹದಿ ಹಸನ್ 2-50)
(ಒನ್ ಇಂಡಿಯಾ ಸುದ್ದಿ)