ಮುಂಬೈ, ಜೂನ್ 21: ಭಾರತೀಯ ಕ್ರಿಕೆಟ್ ತಂಡವು, ಶೀಘ್ರದಲ್ಲೇ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಷ್ಟರೊಳಗೆ ತಂಡಕ್ಕೆ ಹೊಸ ತರಬೇತುದಾರರನ್ನು ನೇಮಿಸುವುದಾಗಿ ಭಾರತೀಯ ಕ್ರಿಕೆಟ್ ಮಂಡಳಿ ಹೇಳಿದೆ.
ಮುಂಬೈನಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿಸಿಐನ ಹಿರಿಯ ಅಧಿಕಾರಿ ರಾಜೀವ್ ಶುಕ್ಲಾ ಅವರು ಈ ವಿಚಾರ ತಿಳಿಸಿದರು.
ಕುಂಬ್ಳೆ- ಕೊಹ್ಲಿ ನಡುವೆ ಮಾತು ನಿಂತೋಗಿ ಆರು ತಿಂಗಳಾಗಿತ್ತು!!
ಹಾಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ತೆರಳಿರುವ ಭಾರತ ತಂಡ, ಆ ಪ್ರವಾಸ ಮುಗಿದ ನಂತರ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿಯವರೆಗೂ ತಂಡದೊಂದಿಗಿರುವ ಸಹಾಯಕ ಕೋಚ್ ಗಳು ತಂಡದ ತರಬೇತು ಶಿಬಿರಗಳ ಜವಾಬ್ದಾರಿಯನ್ನು ಹೊರಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ವೆಸ್ಟ್ ಇಂಡೀಸ್ ತಲುಪಿದ ಟೀಂ ಇಂಡಿಯಾ, ಜೂ.23ರಂದು ಮೊದಲ ಪಂದ್ಯ
ಈವರೆಗೂ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರು, ಮಂಗಳವಾರ ದಿಢೀರನೇ ಕೋಚ್ ಹುದ್ದೆಗೆ ರಾಜಿನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಹಾಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ, ಮುಖ್ಯ ತರಬೇತುದಾರರ ಅನುಪಸ್ಥಿತಿಯಲ್ಲೇ ಪ್ರವಾಸ ಮುಗಿಸಿಕೊಂಡು ಸ್ವದೇಶಕ್ಕೆ ಮರಳಲಿದೆ.
ಕುಂಬ್ಳೆ ರಾಜಿನಾಮೆ: 'ಟೀಂ ಇಂಡಿಯಾ' ಚಳಿ ಬಿಡಿಸಿದ ಗವಾಸ್ಕರ್