ಬೆಂಗಳೂರು, ಏಪ್ರಿಲ್ 16 : ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಡೇಡಿಯಂ ದ್ವಾರದ ಬಳಿ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಇಂದು ಏಪ್ರಿಲ್ 16ರಂದು ರಾತ್ರಿ 8 ಗಂಟೆಗೆ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪುಣೆ ಸೂಪರ್ ಜೈಂಟ್ಸ್ ಪಂದ್ಯ ವೀಕ್ಷಣೆಗೆಂದು ಟಿಕೆಟ್ ಖರೀದಿಸಲು ಸರದಿ ಸಾಲಿನಲ್ಲಿ ನಿಂತಿದ್ದ ಜನರು ಗಾಬರಿಗೊಂಡಿದ್ದಾರೆ.[ಕೊಹ್ಲಿ vs ಸ್ಮಿತ್ ಪಡೆಗಳ ಹಣಾಹಣಿ, ಗೆದ್ದವರಿಗೆ ಉಳಿಗಾಲ]
ಕೂಡಲೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಪರಿಶೀಲಿಸಿದ್ದಾರೆ. ಬಳಿಕ ಪ್ರತಿಕ್ರಯಿಸಿರುವ ಪೊಲೀಸರು, ಈ ಬ್ಯಾಗ್ ನಲ್ಲಿ ಆತಂಕ ಪಡುವಂತ ವಸ್ತುಗಳು ಇಲ್ಲ. ಇದರಲ್ಲಿ ಹರಿದ ಬಟ್ಟೆಗಳು ಸೇರಿದಂತೆ ಇತರೆ ಕೆಲಸಕ್ಕೆ ಬಾರದ ವಸ್ತುಗಳು ಇವೆ ಎಂದು ಹೇಳಿದ್ದಾರೆ.
ಬಿಕ್ಷುಕನೊಬ್ಬ ರಾತ್ರಿ ಇಲ್ಲಿ ಮಲಗಿ ತನ್ನ ಬ್ಯಾಗನ್ನು ಇಲ್ಲೇ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.