ಧೋನಿ-ಶ್ರೀನಿವಾಸನ್ ಭೇಟಿ
ಈ ನಡುವೆ ಎಂಎಸ್ ಧೋನಿ ಮತ್ತು ಸುಪ್ರೀಂ ಕೋರ್ಟ್ ನಿಂದ ಛಿಮಾರಿಗೆ ಗುರಿಯಾಗಿರುವ ಎನ್ ಶ್ರೀನಿವಾಸನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಈ ಭೇಟಿ ಬಗ್ಗೆ ವಲಯದಲ್ಲಿ ಟೀಕೆಗಳು ಕೇಳಿ ಬಂದಿವೆ.
ಚೆನ್ನೈ ತಂಡದ ಪ್ರಮುಖರು
ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಎಂಎಸ್ ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜಾ, ಮೆಕಲಮ್, ಸ್ಮಿತ್ ಈ ಬಾರಿ ಬೇರೆ ಬೇರೆ ತಂಡದ ಪಾಲಾಗಲಿದ್ದಾರೆ. ಆರಂಭದಿಂದಲೂ ಚೆನ್ನೈ ನ್ನು ಮುನ್ನಡೆಸಿಕೊಂಡು ಬಂದಿದ್ದ ಧೋನಿಗೆ ಈ ಬಾರಿ ಹೊಸ ತಂಡ ಸೇರುವುದು ಅನಿವಾರ್ಯ.
ರಾಜಸ್ಥಾನದಲ್ಲಿ ಯಾರ್ಯಾರು?
ಶೇನ್ ವಾಟ್ಸನ್, ಅಜಿಂಕ್ಯ ರಹಾನೆ, ಸ್ಟುವರ್ಟ್ ಬಿನ್ನಿ , ರಜತ್ ಭಾಟಿಯಾ ಸಹ ಹೊಸ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಡತಿ ಶಿಲ್ಪಾ ಶೇಟ್ಟಿಯ ಗ್ಲಾಮರ್ ಸಹ ಈ ಬಾರಿಯ ಐಪಿಎಲ್ ನಲ್ಲಿ ಕಾಣಸಿಗುವುದು ಅನುಮಾನ.
ಯಾಕೆ ಹೀಗಾಯ್ತು?
ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಆರನೇ ಆವೃತ್ತಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾ. ಲೋಧಾ ನೇತೃತ್ವದ ಸಮಿತಿ ತನ್ನ ಅಂತಿಮ ತೀರ್ಪು ನೀಡಿ ಎರಡು ತಂಡಗಳಿಗೆ ಕಳೆದ ಜುಲೈ ತಿಂಗಳಲ್ಲಿ ಐಪಿಎಲ್ ನಿಂದ ನಿಷೇಧ ಹೇರಿತ್ತು.