ಸೇಡು ತೀರಿಸಿಕೊಂಡ ಭಾರತ
ಸುಮಾರು 19 ಪಂದ್ಯಗಳ ನಂತರ ಪುಣೆಯಲ್ಲಿ ಟೀಂ ಇಂಡಿಯಾಕ್ಕೆ ಆಸ್ಟ್ರೇಲಿಯಾ ತಂಡ ಭಾರಿ ಸೋಲುಣಿಸಿ, ಗರ್ವಭಂಗ ಮಾಡಿತ್ತು. ಹಾಗಾಗಿ ಬೆಂಗಳೂರಿನ ಪಂದ್ಯ ಮಹತ್ವ ಪಡೆದಿತ್ತು. ಈ ಪಂದ್ಯವನ್ನು 75ರನ್ ಗಳಿಂದ ಗೆದ್ದು ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮನಾಗಿಸಿದೆ.
ಬೆಂಗಳೂರಲ್ಲಿ ಜಯ ವಿಶೇಷ
ಆಸ್ಟ್ರೇಲಿಯಾದ ವಿರುದ್ಧ ಭಾರತದ ಗೆಲುವು ಯಾವತ್ತಿದ್ದರೂ ವಿಶೇಷ. ಅದರಲ್ಲೂ ಬೆಂಗಳೂರಿನ ಪಿಚ್ ನಲ್ಲಿ ಗೆಲುವು ಸಾಧಿಸುವುದು ಇನ್ನೂ ವಿಶೇಷ.
ಬೆಂಗಳೂರಲ್ಲಿ ಆರ್ ಸಿಬಿ ನಾಯಕ
ಪುಣೆಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಗೆಲುವು ಸಾಧಿಸಿದರೆ, ಬೆಂಗಳೂರಿನ ಪಿಚ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಗೆಲುವು ಸಾಧಿಸಿದ್ದಾರೆ.
ಸೇಡು ತೀರಿಸಿಕೊಳ್ಳದೆ ಬಿಡಲ್ಲ
ಭಾರತದಲ್ಲಿ ನಾವು ಸುಮ್ಮನೆ ಸೋಲಲ್ಲ. ಸೋತರೆ ಸೇಡು ತೀರಿಸಿಕೊಳ್ಳದೆ ಬಿಡಲ್ಲ.