ರೆಸಾರ್ಟ್ ಪರ ಸಚಿನ್ ಬ್ಯಾಟಿಂಗ್ ಏಕೆ?
ಸಚಿನ್ ಅವರ ನೆಚ್ಚಿನ ವಿಶ್ರಾಂತಿಗಳಲ್ಲಿ ಇದು ಒಂದೆನಿಸಿದೆ. ಅವರ ಬಿಸಿನೆಸ್ ಪಾಲುದಾರ ಸಂಜಯ್ ನಾರಂಗ್ ಅವರು ಈ ರೆಸಾರ್ಟ್ ನ ಸಹ ಮಾಲೀಕರಾಗಿದ್ದಾರೆ. ಹೀಗಾಗಿ ಸಚಿನ್ ಅವರು ಈ ರೆಸಾರ್ಟ್ ಬಗ್ಗೆ ಬಂದಿರುವ ದೂರು, ಆರೋಪಗಳನ್ನು ಪರಿಹರಿಸುವಂತೆ ರಕ್ಷಣಾ ಸಚಿವರನ್ನು ಕೇಳಿಕೊಂಡಿದ್ದಾರೆ. ವಿವಿಐಪಿ ಸಂಸ್ಕೃತಿ ಪೋಷಿಸಲು ಮುಂದಾಗಿರುವ ಸಚಿನ್ ಗೆ ಇಂಥದ್ದೆಲ್ಲ ಬೇಕಾ ಎಂದು ಟ್ವಿಟ್ಟರ್ ನಲ್ಲಿ ಸಾರ್ವಜನಿಕರು ಛೀಮಾರಿ ಹಾಕಿದ್ದಾರೆ.
|
ಕ್ರಿಕೆಟ್ ದೇವರು ಕೂಡಾ ಲಾಬಿ ಮಾಡುತ್ತಾರೆ
ಕ್ರಿಕೆಟ್ ದೇವರು ಕೂಡಾ ಲಾಬಿ ಮಾಡುತ್ತಾರೆ, ಗೆಳೆಯನಿಗೋಸ್ಕರ ರಕ್ಷಣಾ ಇಲಾಖೆಯನ್ನೇ ರಾಜಿ ಮಾಡಿಕೊಳ್ಳುವಂತೆ ಕೇಳಿದ್ದಾರಂತೆ.
|
ದೊಡ್ಡ ದೇವರು ಕೇಳಿದರೆ ಸರ್ಕಾರ ತಲೆಬಾಗುತ್ತದೆ
ದೊಡ್ಡ ದೇವರು ಕೇಳಿದರೆ ಸರ್ಕಾರ ತಲೆಬಾಗುತ್ತದೆ, ಸಣ್ಣ ಪುಟ್ಟ ದೇವರಿಗೆ ತಲೆಬಾಗಿ ಅಭ್ಯಾಸವಾಗಿದೆ.
|
ಸ್ವಜನ ಪಕ್ಷಪಾತ, ಸ್ವಾರ್ಥ ಎಂದರೆ ಇದೆ
ಸ್ವಜನ ಪಕ್ಷಪಾತ, ಸ್ವಾರ್ಥ ಎಂದರೆ ಇದೆ ಇರಬೇಕು, ಇಂಥದ್ದರಲ್ಲಿ ಯಾಕೆ ಸಚಿನ್ ಸಿಲುಕಿದ್ದಾರೋ...
|
ಭಾರತ ರತ್ನಕ್ಕೆ ಬೆಲೆ ಇಲ್ಲದ್ದಂತಾಗಿದೆ
ಸಚಿನ್ ಮಾಡಿದ ಕಾರ್ಯದಿಂದ ಭಾರತ ರತ್ನಕ್ಕೆ ಬೆಲೆ ಇಲ್ಲದ್ದಂತಾಗಿದೆ
|
ದೇವರ ಆಟ ಬಲ್ಲವರು ಯಾರು
ದೇವರ ಆಟ ಬಲ್ಲವರು ಯಾರು ಎಂದು ಹಿರಿಯರು ಹೇಳಿದ್ದು ಇದಕ್ಕೆ ಇರಬೇಕು.
|
ರಾಜ್ಯಸಭೆಗೆ ಹಾಜರಾಗದ ಭಾರತರತ್ನ
ರಾಜ್ಯಸಭೆಗೆ ಹಾಜರಾಗದ ಸಚಿನ್ ಗೆ ಭಾರತರತ್ನ, ನೇತಾಜಿ ಬೋಸ್ ಗೆ ಏನು ಇಲ್ಲ.