ಬೆಂಗಳೂರು, ಆಗಸ್ಟ್ 4: ಮುಂಬರುವ ರಣಜಿ ಪಂದ್ಯಾವಳಿಯಲ್ಲಿ ಕರ್ನಾಟಕದ ಆಟಗಾರ ರಾಬಿನ್ ಉತ್ತಪ್ಪ ಅವರು, ಸೌರಾಷ್ಟ್ರ ತಂಡದಲ್ಲಿ ಆಡಲಿದ್ದಾರೆ.
ಉತ್ತಪ್ಪ- ಕರ್ನಾಟಕ ಬಿಟ್ಟು ಕೇರಳ ಪರ ಬ್ಯಾಟಿಂಗ್ ಏಕೆ?
ಕರ್ನಾಟಕ ತಂಡದಲ್ಲಿ ಸುಮಾರು 15 ವರ್ಷಗಳ ಕಾಲ ಆಡಿದ್ದ ರಾಬಿನ್, ಕೆಲವು ತಿಂಗಳುಗಳ ಹಿಂದೆ ರಾಜ್ಯ ತಂಡವನ್ನು ತೊರೆದಿದ್ದರು. ಆ ಸಂದರ್ಭದಲ್ಲಿ, ಅವರು ಕೇರಳ ತಂಡವನ್ನು ಸೇರ್ಪಡೆಗೊಳ್ಳುತ್ತಾರೆಂಬ ಸುದ್ದಿಗಳೂ ಹರಿದಾಡಿದ್ದವು. ಆದರೀಗ, ಅವರು ಸೌರಾಷ್ಟ್ರ ತಂಡದಲ್ಲಿ ಆಡುವುದು ಪಕ್ಕಾ ಆಗಿದೆ.
ಈ ಹಿಂದೆ, ಕೇರಳ ತಂಡವನ್ನು ಸೇರುವ ಹಿನ್ನೆಲೆಯಲ್ಲಿ, ಕೇರಳ ರಾಜ್ಯ ಕ್ರಿಕೆಟ್ ಸಂಸ್ಥೆಯ ಜತೆ ಮಾತುಕತೆ ನಡೆಸಲಾಗಿತ್ತಾದರೂ, ಯಾವುದೇ ಒಪ್ಪಂದ ಏರ್ಪಟ್ಟಿರಲಿಲ್ಲ ಎಂದು ಹೇಳಲಾಗಿದೆ.
2015-16ರ ಕ್ರಿಕೆಟ್ ಋತುವಿನಲ್ಲಿ ರಾಬಿನ್ ಉತ್ತಪ್ಪ ಕರ್ನಾಟಕ ತಂಡದಲ್ಲಿ ಹೆಚ್ಚು ಆಡಲಿಲ್ಲ. ಏಳು ಪಂದ್ಯಗಳಿಂದ ಅವರು, 328 ರನ್ ಮಾತ್ರ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಅದೇ ರಣಜಿ ಋತುವಿನಲ್ಲಿ ಮೊಹಾಲಿಯಲ್ಲಿ ನಡೆದಿದ್ದ ಮಹಾರಾಷ್ಟ್ರ ವಿರುದ್ಧದ ಪಂದ್ಯದಿಂದ ರಾಬಿನ್ ಅವರನ್ನು ಹೊರಗಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಕರ್ನಾಟಕ ತಂಡವನ್ನು ಹೊರಗಿಡಲಾಯಿತು.