ಬೇರೆಡೆ ಪಂದ್ಯ ಆಡಿಸುವ ಸಂಸ್ಕೃತಿ
ತಟಸ್ಥ ಸ್ಥಳಗಳ ನಿಯಮ ಎಂದರೆ, ಯಾವುದೇ ರಣಜಿ ಪಂದ್ಯದಲ್ಲಿ ಆಡುವ ಎರಡು ತಂಡಗಳು ಪ್ರತಿನಿಧಿಸುವ ರಾಜ್ಯಗಳನ್ನು ಬಿಟ್ಟು ಆ ಪಂದ್ಯವನ್ನು ಬೇರೆ ಕಡೆ ಆಡಿಸುವುದು.
ತವರಿನ ಅಭಿಮಾನಿಗಳಿಗೆ ನಿರಾಸೆ
ಉದಾಹರಣೆಗೆ, ರಣಜಿ ಪಂದ್ಯವೊಂದರಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಮುಖಾಮುಖಿಯಾಗುವುದಿದ್ದರೆ, ಆ ಪಂದ್ಯವು ಈ ಹಿಂದೆ ನಡೆಯುತ್ತಿದ್ದಂತೆ ಕರ್ನಾಟಕದಲ್ಲಾಗಲೀ ತಮಿಳುನಾಡಿನಲ್ಲಾಗಲೀ ನಡೆಯುತ್ತಿರಲಿಲ್ಲ. ಅದಕ್ಕೆ ಬದಲಾಗಿ, ಬೇರೊಂದು ರಾಜ್ಯದಲ್ಲಿ ನಡೆಯುತ್ತಿತ್ತು. ಹಾಗಾಗಿ, ಕಳೆದ ವರ್ಷ ಕರ್ನಾಟಕ ತಂಡದ ಪಂದ್ಯಗಳನ್ನು ಆ ತಂಡದ ತವರು ಕ್ರೀಡಾಂಗಣವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಳಿತು ನೋಡುವ ಅವಕಾಶದಿಂದ ರಾಜ್ಯದ ಕ್ರಿಕೆಟ್ ಅಭಿಮಾನಿಗಳು ವಂಚಿತರಾಗಿದ್ದರು.
ನಿಯಮ ಜಾರಿ ಹಿಂದಿತ್ತು ಸಕಾರಣ
ತಮ್ಮ ರಾಜ್ಯಗಳಲ್ಲಿರುವ ಪಿಚ್ ಗಳಲ್ಲೇ ರಣಜಿ ಪಂದ್ಯಗಳು ನಡೆದರೆ ಆಯಾ ಪಂದ್ಯದ ಆತಿಥ್ಯ ವಹಿಸುವ ರಾಜ್ಯ ಕ್ರಿಕೆಟ್ ಮಂಡಳಿಗಳಲ್ಲಿನ ಕೆಲವರು ಪಿಚ್ ಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತವೆ ಎಂಬ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ತಟಸ್ಥ ಪಿಚ್ ನಿಯಮವನ್ನು 2016-17ನೇ ಕ್ರಿಕೆಟ್ ವರ್ಷದಲ್ಲಿ ಜಾರಿಗೆ ತಂದಿತ್ತು.
ಅಭಿಮಾನಿಗಳಿಗೆ ಕ್ರಿಕೆಟ್ ಮನರಂಜನೆ
ತಟಸ್ಥ ನಿಯಮಗಳ ಬಗ್ಗೆ ಸಭೆಯಲ್ಲಿ ವ್ಯಕ್ತವಾದ ಅಸಮಾಧಾನವನ್ನು ಹಾಲಿ ಬಿಸಿಸಿಐ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿದರೆ, ಈ ಬಾರಿಯ ರಣಜಿ ಪಂದ್ಯಾವಳಿಯ ವೇಳೆ ಆಯಾ ರಾಜ್ಯಗಳ ಪಂದ್ಯಗಳನ್ನು ಆಯಾ ರಾಜ್ಯಗಳ ಅಭಿಮಾನಿಗಳು ಸಾಕ್ಷಾತ್ ಕಣ್ತುಂಬಿಕೊಳ್ಳಬಹುದು.
ಆಟಗಾರರ ಸಂಭಾವನೆ ಹೆಚ್ಚುತ್ತಾ?
ಸಭೆಯಲ್ಲಿ ಮತ್ತಷ್ಟು ವಿಚಾರಗಳು ಚರ್ಚೆಯಾದವು. ಇತ್ತೀಚೆಗೆ, ಆಟಗಾರರ ಸಂಭಾವನೆ ಹೆಚ್ಚಿಸುವಂತೆ ಹಾಲಿ ಭಾರತೀಯ ತಂಡದ ಕೋಚ್ ಅನಿಲ್ ಕುಂಬ್ಳೆ ಹಾಗೂ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಒತ್ತಾಯವನ್ನು ಸಭೆಯ ಗಮನಕ್ಕೆ ತಂದ ಕೆಲವು ತಂಡಗಳ ನಾಯಕರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.