ದೆಹಲಿ ತಂಡಕ್ಕೆ ಫಾಲೋ-ಆನ್
ಇದಕ್ಕೂ ಮುನ್ನ ಹಾಲಿ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿ 'ಎ' ಗುಂಪಿನ ಪಂದ್ಯದಲ್ಲಿ ದೆಹಲಿ ತಂಡಕ್ಕೆ ಫಾಲೋ-ಆನ್ ನೀಡಿತ್ತು.
ಗೌತಮ್ ಗಂಭೀರ್ ಮತ್ತೆ ಸಿಡಿಯಲಿಲ್ಲ
ಮೊದಲ ಇನಿಂಗ್ಸ್ನಲ್ಲಿ ಹೋರಾಟಕಾರಿ ಅರ್ಧಶತಕ ಸಿಡಿಸಿದ್ದ ದಿಲ್ಲಿ ತಂಡದ ನಾಯಕ ಗೌತಮ್ ಗಂಭೀರ್ ಅವರು 15ರನ್ ಮಾತ್ರ ಗಳಿಸಿ ಅರವಿಂದ್ ಶ್ರೀನಾಥ್ ಗೆ ಬಲಿಯಾದರು. ಉನ್ಮುಕ್ತ್ ಚಂದ್ ಕೂಡಾ ಶ್ರೀನಾಥ್ ಗೆ ವಿಕೆಟ್ ಒಪ್ಪಿಸಿದರು. ಅದರೆ, ಧ್ರುವ್ ಮತ್ತು ನಿತಿಶ್ ಅವರು 240ರನ್ ಗಳ ಜೊತೆಯಾಟ ಮೂಲಕ ಕರ್ನಾಟಕಕ್ಕೆ ಗೆಲುವು ತಪ್ಪಿಸಿದರು.
ಸ್ಕೋರ್ ವಿವರ
ಕರ್ನಾಟಕ ಪ್ರಥಮ ಇನ್ನಿಂಗ್ಸ್: 542 ರನ್
ದೆಹಲಿ ಪ್ರಥಮ ಇನ್ನಿಂಗ್ಸ್: 104.1 ಓವರ್ಗಳಲ್ಲಿ 301 ರನ್ಗೆ ಆಲೌಟ್
ದೆಹಲಿ ದ್ವಿತೀಯ ಇನ್ನಿಂಗ್ಸ್ : 92 ಓವರ್ಸ್ 2 ವಿಕೆಟ್ ಗಳಲ್ಲಿ 290ರನ್
ಫಲಿತಾಂಶ: ಪಂದ್ಯ ಡ್ರಾ, ಕರ್ನಾಟಕಕ್ಕೆ 3 ಅಂಕ, ದೆಹಲಿಗೆ 1.
(ರಾಬಿನ್ ಉತ್ತಪ್ಪ 148, ಮಾಯಾಂಕ್ ಅಗರವಾಲ್ 118, ಮನೀಶ್ ಪಾಂಡೆ 81, ವಿನಯ್ ಕುಮಾರ್ 50, ಪ್ರದೀಪ್ ಸಂಗ್ವಾನ್ 102/3, ನವದೀಪ್ 85/3)
(ಗೌತಮ್ ಗಂಭೀರ್ 75, ವೈಭವ್ ರಾವಲ್ 54, ಮನನ್ ಶರ್ಮ 56, ಮಿಥುನ್, ಎ ಶ್ರೀನಾಥ್, ಶರತ್, ಶ್ರೇಯಸ್ ತಲಾ 2 ವಿಕೆಟ್, ಕರುಣ್, ವಿನಯ್ ತಲಾ 1 ವಿಕೆಟ್)
(ಧ್ರುವ್ 107, ನಿತಿಶ್ 132, ಎ ಶ್ರೀನಾಥ್ 2 ವಿಕೆಟ್ )