ನವದೆಹಲಿ, ಸೆ. 08: ಟೀಂ ಇಂಡಿಯಾದ ದಿಗ್ಗಜ ಆಟಗಾರ ಯುವರಾಜ್ ಸಿಂಗ್ ಅವರ ಹೊಚ್ಚ ಹೊಸ ಜವಳಿ ಬ್ರ್ಯಾಂಡ್ ಲೋಕಾರ್ಪಣೆ ಸುದ್ದಿ ಓದಿರುತ್ತೀರಿ. ಈ ಸಂಭ್ರಮ ಸಮಾರಂಭದಲ್ಲಿ ನಾಯಕ ಎಂಎಸ್ ಧೋನಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಯುವರಾಜ್ ನೀಡಿದ ಉತ್ತರ ಇಲ್ಲಿದೆ.
ಕಳೆದ ಭಾನುವಾರದಂದು ಯುವರಾಜ್ ಸಿಂಗ್ ಅವರು ತಮ್ಮದೇ ಆದ ಫ್ಯಾಷನ್ ಬ್ರ್ಯಾಂಡ್ ಗೆ ಚಾಲನೆ ನೀಡಿದರು. ಈ ಸಮಾರಂಭಕ್ಕೆ ಚಿತ್ರರಂಗ, ಕ್ರಿಕೆಟ್ ರಂಗದ ಗಣ್ಯಾತಿಗಣ್ಯರು ಆಗಮಿಸಿದ್ದರು. ಯುವರಾಜ್ ಸಿಂಗ್ ಗೆ ಶುಭಹಾರೈಸಲು ವೆಸ್ಟ್ ಇಂಡೀಸ್ ನಿಂದ ಕ್ರಿಸ್ ಗೇಲ್ ಹಾಗೂ ಡಿಜೆ ಬ್ರಾವೋ ಕೂಡಾ ಬಂದಿದ್ದರು. ಆದರೆ, ಧೋನಿ ಮಾತ್ರ ಕಾಣಿಸಲಿಲ್ಲ. [ಯುವರಾಜ್ ಸಿಂಗ್ ಹೊಸ ಬ್ರ್ಯಾಂಡ್ ಭರ್ಜರಿ ಓಪನಿಂಗ್]
YWC ಫ್ಯಾಷನ್ ಬ್ರ್ಯಾಂಡ್ ಲೋಕಾರ್ಪಣೆಗಾಗಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಅರ್ಜುನ್ ರಾಮ್ ಪಾಲ್, ಫರ್ಹಾನ್ ಅಖ್ತರ್, ಕ್ರಿಸ್ ಗೇಲ್, ಡ್ವಾಯ್ನೆ ಬ್ರಾವೋ ಸೇರಿದಂತೆ ಕ್ರಿಕೆಟ್ ಆಟಗಾರರು ಬಂದಿದ್ದರು.
Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ
ಧೋನಿ ಏಕೆ ಬರಲಿಲ್ಲ?: ಎಂಎಸ್ ಧೋನಿ ಅವರು ತುಂಬಾ ಬ್ಯುಸಿ ಇದ್ದರೆ ಎನಿಸುತ್ತದೆ. ನಾನು ಫೋನ್ ಕಾಲ್ ಮಾಡಿದರೂ ರಿಸೀವ್ ಮಾಡಿಲ್ಲ. ಅವರು ಎಲ್ಲಿದ್ದಾರೆ ಎಂದು ಹುಡುಕಿ ಸಾಕಾಗಿ ಹೋಗಿದೆ. ಅಮೆರಿಕದ ಟಿ20 ಆಟದ ನಂತರ ಯಾರಿಗೂ ಸಿಕ್ಕಿಲ್ಲ. ಅವರ ಶುಭ ಹಾರೈಕೆ ನನ್ನ ಈ ಪ್ರಯತ್ನದೊಂದಿಗೆ ಎಂದು ನಂಬಿದ್ದೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಈ ರೀತಿ ಫೋನ್ ಕಾಲ್ ರಿಸೀವ್ ಮಾಡದೆ ಇರುವುದು ಧೋನಿಗೆ ಹೊಸ ಸಂಗತಿ ಏನಲ್ಲ. ಈ ಹಿಂದೆ ವಿವಿಎಸ್ ಲಕ್ಷ್ಮಣ್ ಕೂಡಾ ಧೋನಿ ಮೇಲೆ ಇದೇ ಆರೋಪ ಹೊರೆಸಿದ್ದರು. ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ತಮ್ಮ ಮಗನಿಗೆ ಅವಕಾಶ ನೀಡದೆ ವೃತ್ತಿ ಬದುಕನ್ನು ಧೋನಿ ಹಾಳುಗೆಡವಿದರು ಎಂದು ಅನೇಕ ಬಾರಿ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.