ನವದೆಹಲಿ, ಮಾರ್ಚ್ 17: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತವರ ಜಾರ್ಖಂಡ್ ತಂಡ ತಂಗಿದ್ದ ದೆಹಲಿಯ ಹೊಟೇಲ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಕಾಲ ಆತಂಕ ಸೃಷ್ಟಿಯಾಯಿತು.
ಆಟಗಾರೆಲ್ಲರನ್ನೂ ರಕ್ಷಿಸಲಾಗಿದ್ದು, ಯಾರಿಗೂ ಯಾವುದೇ ಅಪಾಯವಾಗಿಲ್ಲ. ಆದರೆ ಆಟಗಾರರ ಕಿಟ್ ಗಳೆಲ್ಲವೂ ಬೆಂಕಿಯಿಂದ ಸುಟ್ಟು ಹೋಗಿವೆ.
ಘಟನೆಯ ಕಾರಣದಿಂದಾಗಿ ಇಂದು ಬಂಗಾಳ ಮತ್ತು ಜಾರ್ಖಾಂಡ್ ನಡುವೆ ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯವನ್ನು ಮಾರ್ಚ್ 18, ಶನಿವಾರಕ್ಕೆ ಮುಂದೂಡಲಾಗಿದೆ ಎಂದು ಎಂದು ಬಿಸಿಸಿ ಐ ತಿಳಿಸಿದೆ.