ನವದೆಹಲಿ, ಫೆಬ್ರವರಿ 20 : ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಬಾಂಗ್ಲಾದೇಶದಲ್ಲಿ ನಡೆಯುವ ಏಷ್ಯಾಕಪ್ ಟಿ-20 ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಎಡಗಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿರುವ ಮಹಮ್ಮದ್ ಶಮಿ ಅವರು, ಏಷ್ಯಾಕಪ್ ಮತ್ತು ಟಿ-20 ವಿಶ್ವ ಕಪ್ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದ್ದರಿಂದ ಅವರನ್ನು ಎರಡೂ ಸರಣಿಗಳಿಗೆ ಆಯ್ಕೆ ಮಾಡಲಾಗಿತ್ತು. [ಫೆ.21ರಂದು ಬಾಂಗ್ಲಾದೇಶಕ್ಕೆ ಟೀಮ್ ಇಂಡಿಯಾ ಪಯಣ]
ಆದರೆ, ಅವರು ಚೇತರಿಸಿಕೊಳ್ಳದಕ ಕಾರಣ ಏಷ್ಯಾಕಪ್ ಟಿ-20 ಟೂರ್ನಿಯಿಂದ ಕೈಬಿಡಲಾಗಿದೆ. ಶಮಿ ಅವರ ಬದಲು ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಟೂರ್ನಿಯಲ್ಲಿಯೂ ಆಡುವ ಅವಕಾಶವನ್ನು ಶಮಿ ಕಳೆದುಕೊಂಡಿದ್ದರು. [ಕ್ರಿಕೆಟರ್ ರಾಬಿನ್, ಟೆನಿಸ್ ಆಟಗಾರ್ತಿ ಶೀತಲ್ ಮದುವೆ]
ಫೆಬ್ರವರಿ ಫೆ.24 ಏಷ್ಯಾಕಪ್ ಟಿ-20 ಸರಣಿ ಬಾಂಗ್ಲಾದೇಶದಲ್ಲಿ ನಡೆಯಲಿದೆ. ಫೆ.21ರ ಭಾನುವಾರ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಬಾಂಗ್ಲಾಕ್ಕೆ ಪ್ರಯಾಣ ಬೆಳೆಸಲಿದೆ. [ಏಷ್ಯಾಕಪ್ 2016 ಸೆಣಸಾಟಕ್ಕೆ ಸಿದ್ಧವಾದ ತಂಡಗಳು]
ಭಾರತ ತಂಡದಲ್ಲಿ ಯಾರಿದ್ದಾರೆ? : ಮಹೇಂದ್ರ ಸಿಂಗ್ ಧೋನಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಅಜಿಂಕ್ಯಾ ರಹನೆ, ರವೀಂದ್ರ ಜಡೇಜಾ, ಹರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಆಶೀಶ್ ನೆಹ್ರಾ, ಭುವನೇಶ್ವರ್ ಕುಮಾರ್, ಪವನ್ ನೇಗಿ