ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಗೆ ವೇಗಿ ಭುವನೇಶ್ವರ್ ಕುಮಾರ್ ಮೊದಲ ಎಸತೆವೇ ಶಾಕ್ ನೀಡಿದ್ರು. ಆದ್ರೆ, ಕೆ.ಎಲ್ ರಾಹುಲ್, ವಾರ್ನರ್ ಕೊಟ್ಟ ಕ್ಯಾಚ್ ನ್ನ ಕೈಚೆಲ್ಲಿದ ಕಾರಣ ಭಾರತಕ್ಕೆ ನಿರಾಸೆ ಉಂಟಾಯಿತು.
ಆಸ್ಟ್ರೇಲಿಯಾ ಪರ ಆರಂಭಿಕನಾಗಿ ಬ್ಯಾಟಿಂಗ್ ಆರಂಭಿಸಿದ್ದ ಡೇವಿಡ್ ವಾರ್ನರ್, ಭುವನೇಶ್ವರ್ ಕುಮಾರ್ ಎಸೆದ ಮೊದಲ ಚೆಂಡನ್ನ ಸ್ಟ್ರೈಟ್ ಡ್ರೈವ್ ಮಾಡಿದ್ರು. ಆದ್ರೆ, ಬ್ಯಾಟ್ ಅಂಚಿಗೆ ತಾಗಿ ಚೆಂಡು ನೇರವಾಗಿ ಸ್ಲಿಪ್ ನಲ್ಲಿದ್ದ ರಾಹುಲ್ ಬಳಿ ಹೋಯ್ತು. ಈ ವೇಳೆ ರಾಹುಲ್ ಕ್ಯಾಚ್ ಹಿಡಿಯಲು ಪ್ರಯತ್ನ ಪಟ್ಟರಾದರೂ, ಅಂತಿಮ ಕ್ಷಣದಲ್ಲಿ ಕ್ಯಾಚ್ ಕೈ ಚೆಲ್ಲಿದರು. ಹೀಗಾಗಿ, ಕೊನೆಯ ಟೆಸ್ಟ್ ನ ಮೊದಲ ಎಸೆತವೇ ವಾರ್ನರ್ ಗೆ ಜೀವದಾನ ಸಿಕ್ಕಿದೆ.[ಕೊನೆಯ ಟೆಸ್ಟ್: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ]
ಧರ್ಮಶಾಲದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ನಲ್ಲಿ, ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸದ್ಯ, ಆರಂಭಿಕ ಮ್ಯಾಥ್ಯೂ ರೆನ್ಷ್ಯೂ ವಿಕೆಟ್ ಕಳೆದುಕೊಂಡಿರುವ ಆಸ್ಟ್ರೇಲಿಯಾ ಬ್ಯಾಟಿಂಗ್ ಮುಂದುವರೆಸಿದೆ.