ಪ್ರತಿಭಟನೆ ನಿಲ್ಲಿಸಿ ಎಂದು ಕರೆ ನೀಡಿದ ಕ್ರಿಕೆಟರ್ಸ್
ಒಬಿಸಿ ವರ್ಗದಡಿ ಪರಿಗಣಿಸಿ ಮೀಸಲಾತಿ ನೀಡಬೇಕು ಎಂಬ ಜಾಟ್ ಸಮುದಾಯದವರ ಬೇಡಿಕೆಯನ್ನು ಒಪ್ಪಲಾಗಿದೆ ಎಂದು ಹರಿಯಾಣ ಸರ್ಕಾರ ಘೊಷಿಸಿದೆ. ಮನವಿಗೆ ಸ್ಪಂದಿಸಲಾಗುವುದು. ಪ್ರತಿಭಟನೆ ನಿಲ್ಲಿಸಿ ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಕೂಡಾ ಪ್ರತಿಭಟನಾನಿರತರಲ್ಲಿ ಮನವಿ ಮಾಡಿದ್ದಾರೆ. ಮುಂದಿನ ಅಸೆಂಬ್ಲಿಯಲ್ಲಿ ಈ ಬಗ್ಗೆ ವಿಧೇಯಕ ಮಂಡನೆಯಾಗಲಿದೆ. ಹಿಂಸಾಚಾರದಿಂದ ದೂರ ಉಳಿಯುವಂತೆ ತಮ್ಮ ಸಮುದಾಯದವರಿಗೆ ಕ್ರಿಕೆಟರ್ಸ್ ಮನವಿ ಮಾಡಿಕೊಂಡಿದ್ದಾರೆ.
ಶಾಂತಿಯುತವಾಗಿ ಹೋರಾಟ ಮಾಡಿ
ದೇಶದ ಎಲ್ಲಾ ವಿಭಾಗಗಳಲ್ಲಿ ಜಾಟ್ ಪಂಗಡ ಸೇವೆ ಸಲ್ಲಿಸುತ್ತಿದ್ದು ಶಾಂತಿಯುತವಾಗಿ ಹೋರಾಟ ಮಾಡಿ. ಪರಿಸ್ಥಿತಿ ಬಿಗಡಾಯಿಸಿರುವ ರೋಹ್ಟಕ್, ಜಿಂದ್, ಭಿವಾನಿ, ಝಾಜರ್ ಮತ್ತು ಹಿಸಾರ್ ಪ್ರದೇಶಗಳಲ್ಲಿ ಅಸ್ತವ್ಯಸ್ಥಗೊಂಡಿರುವ ಜನ ಜೀವನ ಸಹಜ ಸ್ಥಿತಿಗೆ ತರುವಂತೆ ಶ್ರಮಿಸಿ ಎಂದು ಕೋರಿದ್ದಾರೆ.
|
ಸೋದರರೇ ದೇಶಕ್ಕಾಗಿ ದುಡಿಯೋಣ
ಸೋದರರೇ ದೇಶಕ್ಕಾಗಿ ದುಡಿಯೋಣ, ದೇಶಕ್ಕೆ ನಮ್ಮ ಸಮುದಾಯ ಯೋಧರನ್ನು ಕ್ರಿಕೆಟರ್ಸ್ ಗಳನ್ನು ನೀಡಿದೆ. ಸಮಸ್ಯೆಯನ್ನು ಮಾತಿನ ಮೂಲಕ ಬಗೆಹರಿಸಿಕೊಳ್ಳಬಹುದು ಎಂದ ಸೆಹ್ವಾಗ್.
|
ನಾವು ರಕ್ಷಕರು, ಹಿಂಸಕರಲ್ಲ ಎಂದ ಯುವಿ
ಸಂವಿಧಾನಾತ್ಮಕ ರೀತಿಯಲ್ಲಿ ಸಮಸ್ಯೆಗೆ ಪರಿಹರಿಸಿಕೊಳ್ಳಬಹುದು. ನಾವು ರಕ್ಷಕರು, ಹಿಂಸಕರಲ್ಲ ಎಂದ ಯುವರಾಜ್ ಸಿಂಗ್.
|
ನಮ್ಮ ಕೋಪ, ಶಕ್ತಿ ಉತ್ತಮ ಹೋರಾಟಕ್ಕಿರಲಿ
ನಮ್ಮ ಕೋಪ, ಶಕ್ತಿ ಉತ್ತಮ ಹೋರಾಟಕ್ಕೆ ಮೀಸಲಾಗಿರಲಿ. ಮೀಸಲಾತಿ ಬಗ್ಗೆ ಸರ್ಕಾರದೊಡನೆ ಮಾತನಾಡುವ ಬೇರೆ ವಿಧಾನಗಳಿವೆ.
|
ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ
ಹರ್ಯಾಣ, ದೆಹಲಿ ಭಾಗದ ಸುಮಾರು 1000 ರೈಲುಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವೈಷ್ಣೋದೇವಿ ಯಾತ್ರಾರ್ಥಿಗಳಿಗೂ ಪ್ರತಿಭಟನೆ ಬಿಸಿ ತಟ್ಟಿದೆ.
|
ಎಕ್ಸ್ ಪ್ರೆಸ್ ವೇ, ಹೆದ್ದಾರಿ ಎಲ್ಲವೂ ಬಂದ್
ದೆಹಲಿ -ಲಕ್ನೋ ಎಕ್ಸ್ ಪ್ರೆಸ್ ವೇ, ರಾಷ್ಟ್ರೀಯ ಹೆದ್ದಾರಿ 8 ಎಲ್ಲವನ್ನು ಪ್ರತಿಭಟನಾಕಾರರು ಬಂದ್ ಮಾಡಿದ್ದಾರೆ.