ಚೆನ್ನೈ ಮಾ. 1 : ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಜಗಮೋಹನ್ ದಾಲ್ಮಿಯ ಮತ್ತೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಮಾರ್ಚ್ 2 ರಂದು ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಅಧಿಕೃತ ತೀರ್ಮಾನ ತೆಗೆದುಕೊಳ್ಳಲಾಗುವುದು.
ಎನ್.ಶ್ರೀನಿವಾಸನ್ ಅವರಿಗೆ ಸುಪ್ರೀಂ ಕೋರ್ಟ್ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕಟ್ ಮಂಡಳಿ ಮೇಲೆ ದಾಲ್ಮಿಯ ಹಿಡಿತ ಪಡೆದುಕೊಳ್ಳುವುದು ನಿಶ್ಚಯವಾಗಿದೆ.[2016ರಲ್ಲಿ ಭಾರತದಲ್ಲೇ ವಿಶ್ವ ಟಿ20 ಟೂರ್ನಿ]
ಬಿಸಿಸಿಐ ಗೆ ಸಂಬಂಧಿಸದ ಹಣಕಾಸು ವ್ಯವಹಾರದಲ್ಲಿ ದಾಲ್ಮಿಯಾ ಅವ್ಯವಹಾರ ನಡೆಸಿದ್ದಾರೆ ಎಂಬ ಆಧಾರದಲ್ಲಿ ದಾಲ್ಮಿಯಾ ಅಧಿಕಾರ ಕಳೆದುಕೊಂಡಿದ್ದರು. ಆದರೆ ನಂತರ ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ತೀರ್ಮಾನ ನೀಡಿತ್ತು.