ಮೈದಾನದಲ್ಲಿ ನೀರಿನ ರಾಡಿ
ಗೌತಮ್ ಹೀಗೆ ಮೆಚ್ಚುಗೆ ವ್ಯಕ್ತಪಡಿಸಲೂ ಒಂದು ಕಾರಣವಿದೆ. ಏಕೆಂದರೆ, ಪಂದ್ಯದಲ್ಲಿ ಮೊದಲು ಸನ್ ರೈಸರ್ಸ್ ಬ್ಯಾಟಿಂಗ್ ಮಾಡಿತ್ತು. ಅವರ ಇನಿಂಗ್ಸ್ ಮುಗಿದು ಕೋಲ್ಕತಾ ಇನಿಂಗ್ಸ್ ಶುರುವಾಗಿ ಕೆಲ ಹೊತ್ತಿಗೇ ಮಳೆ ಆರಂಭವಾಗಿತ್ತು. ಸುಮಾರು ಮೂರು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇಡೀ ಮೈದಾನ ನೀರಿನ ರಾಡಿಯಿಂದ ಆವರಿಸಿತು.
ಶುರುವಾಯ್ತು ಆಟ
ಆದರೆ, ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ವ್ಯವಸ್ಥೆಯಿಂದಾಗಿ ಮಳೆ ನಿಂತ ನಂತರ ಸುಮಾರು 20ರಿಂದ 30 ನಿಮಿಷದೊಳಗೆ ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಯಿತು.
ಅಚ್ಚುಕಟ್ಟಾದ ವ್ಯವಸ್ಥೆ
ಮೈದಾನದ ಹುಲ್ಲು ಹಾಸಿನ ಕೆಳಗೆ ಅಳವಡಿಸಲಾಗಿರುವ ಪೈಪುಗಳಿಂದಾಗಿ, ಇಡೀ ಕ್ರೀಡಾಂಗಣದ ನೀರನ್ನು ಹೀರಿಕೊಂಡು ಕ್ರೀಡಾಂಗಣದಿಂದ ಹೊರಹಾಕುವ ವಿಶಿಷ್ಟವಾದ ಸೌಲಭ್ಯ ಈ ಚಿನ್ನಸ್ವಾಮಿ ಕ್ರೀಡಾಂಗಣದ್ದಾಗಿದೆ. ಭಾರತದಲ್ಲಿ ಕ್ರಿಕೆಟ್ ಕ್ರೀಡಾಂಗಣವೊಂದಕ್ಕೆ ಇಂಥ ವ್ಯವಸ್ಥೆ ಅಳವಡಿಸಿರುವುದು ಇಲ್ಲೇ ಮೊದಲು.
ಈ ಕಾರಣದಿಂದಾಗಿಯೇ ಬುಧವಾರ ನಡೆದ ಕೋಲ್ಕತಾ ಮತ್ತು ಸನ್ ರೈಸರ್ಸ್ ನಡುವಿನ ಪಂದ್ಯವು ರದ್ದಾಗುವುದನ್ನು ತಡೆದು ಮಳೆ ನಿಂತ ಪಂದ್ಯವನ್ನು ಪುನರಾರಂಭಿಸಲಾಯಿತು.
ರದ್ದಾಗಿದ್ದರೆ ಕೋಲ್ಕತಾಕ್ಕೆ ಹಿನ್ನಡೆ ಆಗುತ್ತಿತ್ತು
ಈ ಪಂದ್ಯವೇನಾದರೂ ಬೇರೆ ಕ್ರೀಡಾಂಗಣದಲ್ಲಿ ನಡೆದು, ಅಲ್ಲಿ ಹೀಗೆಯೇ ಮೂರು ಗಂಟೆಗಳ ಕಾಲ ಮಳೆ ಸುರಿದಿದ್ದರೆ ಪಂದ್ಯವು ರದ್ದಾಗುವ ಅವಕಾಶವೇ ಹೆಚ್ಚಿರುತ್ತಿತ್ತು. ಹಾಗೆ ಪಂದ್ಯ ರದ್ದಾಗಿದ್ದರೆ, ಸನ್ ರೈಸರ್ಸ್ ತಂಡವು ಅಂಕಗಳಿಕೆಯಲ್ಲಿ ಏರಿಕೆ ಕಂಡು, ಕೋಲ್ಕತವನ್ನು ಹಿಂದಿಕ್ಕಿ ಫೈನಲ್ ಗೆ ಕಾಲಿಡುತ್ತಿತ್ತು.
ಗಂಭೀರ್ ಮನಸ್ಸಿನಲ್ಲಿ ಕೃತಜ್ಞತೆ ಮೂಡಿಸಿತು
ಅಂಥದ್ದೊಂದು ಸೋಲು ಅನುಭವಿಸುವುದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ವ್ಯವಸ್ಥೆ ತಪ್ಪಿಸಿದ್ದಕ್ಕೆ ಗೌತಮ್ ಗಂಭೀರ್ ಅವರು ಸಹಜವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.