ಬೆಂಗಳೂರು, ಮೇ 03: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಮತ್ತೊಮ್ಮೆ ಸೋಲು ಕಂಡಿದೆ. ಐಪಿಎಲ್ 9ರಲ್ಲಿ ಆರ್ ಸಿಬಿಗೆ ಸೋಲು ಹೊಸತೇನಲ್ಲ. ಆದರೆ, ಗೆಲ್ಲುವ ಪಂದ್ಯವನ್ನು ಕಳೆದುಕೊಳ್ಳುವುದು ಹೇಗೆ ಎಂಬುದನ್ನು ಆರ್ ಸಿಬಿ ಬೌಲಿಂಗ್ ಪಡೆ ತೋರಿಸಿಕೊಟ್ಟಿದೆ.
ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಪಡೆ 7 ವಿಕೆಟ್ಗೆ 185 ರನ್ ಪೇರಿಸಿತು. ಈ ಗುರಿಯನ್ನು ಗೌತಮ್ ಗಂಭೀರ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 19.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 189ರನ್ ಗಳಿಸಿ ಜಯಭೇರಿ ಬಾರಿಸಿತು. []
ಕೆಕೆಆರ್ ಪರ ಯೂಸುಫ್ ಪಠಾಣ್ ಲಯಕ್ಕೆ ಮರಳಿ 29 ಎಸೆತಗಳಲ್ಲಿ ಅಜೇಯ 60 ರನ್ ಚೆಚ್ಚಿದರು. 6 ಬೌಂಡರಿ, 3 ಸಿಕ್ಸರ್ ಬಾರಿಸಿ ಗೆಲುವಿನ ರೂವಾರಿಯಾದರು. ಯೂಸುಫ್ ಗೆ ಸಾಥ್ ನೀಡಿ 24ಎಸೆತಗಳಲ್ಲಿ 39ರನ್ (1x4, 4x6) ಗಳಿಸಿದ ಆಂಡ್ರೆ ರಸೆಲ್ ಅವರು ಯೂಸುಫ್ ಗೆ ಸಾಥ್ ನೀಡಿದರು. [ಚಿನ್ನಸ್ವಾಮಿ ಸ್ಟೇಡಿಯಂ : ಗೆದ್ದಿದ್ದು ಪ್ರೇಕ್ಷಕರು ಹಾಗೂ ವೈಫೈ]
ತಿರುವು ನೀಡಿದ ಯೂಸುಫ್ ಹಾಗೂ ರಸೆಲ್ ಜೊತೆಯಾಟ: 10 ಓವರ್ ಗಳ ಅಂತ್ಯಕ್ಕೆ 69 ರನ್ಗೆ 4 ವಿಕೆಟ್ ಕಳೆದುಕೊಂಡು ಕೆಕೆಆರ್ ಸೋಲಿನ ಸುಳಿಗೆ ಸಿಲುಕಿತ್ತು. ಗೆಲ್ಲಲು 59 ಎಸೆತಗಳಲ್ಲಿ 117ರನ್ ಅವಶ್ಯಕತೆ ಇದ್ದಾಗ ಆಸರೆಯಾದ ರಸೆಲ್-ಯೂಸುಫ್ 44 ಎಸೆತಗಳಲ್ಲಿ 96 ರನ್ ಕಸಿದರು. ರಸೆಲ್ 13 ರನ್ಗಳಿಸಿದ್ದ ವೇಳೆ ವಿಕೆಟ್ ಕೀಪರ್ ರಾಹುಲ್ರಿಂದ ಜೀವದಾನ ಪಡೆದರು.[ವಿಡಿಯೋ ನೋಡಿ : ರಾಯುಡು-ಹರ್ಭಜನ್ ಕಿತ್ತಾಟ]
ಇದಕ್ಕೂ ಮುನ್ನ ಕನ್ನಡಿಗ ಕೆಎಲ್ ರಾಹುಲ್ 52 ರನ್(32 ಎಸೆತ, 6X4, 2X6) ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದರು ಹಾಗೂ ನಾಯಕ ವಿರಾಟ್ ಕೊಹ್ಲಿ52 ರನ್(44 ಎಸೆತ, 4X4) ಉತ್ತಮ ಪ್ರದರ್ಶನ ನೀಡಿದರು. ಕೊನೆ ಹಂತದಲ್ಲಿ ಶೇನ್ ವ್ಯಾಟ್ಸನ್ 34 ರನ್(21 ಎಸೆತ,5 X4, 1 X6) ಹಾಗೂ ಸಚಿನ್ ಬೇಬಿ 16ರನ್( 8ಎಸೆತ, 2 X4, 1X6) 16 ಎಸೆತಗಳಲ್ಲಿ 38 ರನ್ಗಳ ಜತೆಯಾಟ ಉತ್ತಮ ಮೊತ್ತ ಕಲೆ ಹಾಕಲು ನೆರವಾಯಿತು.