ಏನಿದು ಕರ್ವಾ ಚೌತ್ ಹಬ್ಬ?
ಉತ್ತರ ಭಾರತದಲ್ಲಿ ಬಹುತೇಕ ಎಲ್ಲಾ ಹಿಂದೂ ಸಂಪ್ರದಾಯಸ್ಥ ಮಹಿಳೆಯರು ತಮ್ಮ ಪತಿಯ ಏಳಿಗೆ, ಆಯುರ್ ಆಯುಷ್ಯಕ್ಕಾಗಿ ಒಂದು ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಉಪವಾಸವಿದ್ದು ರಾತ್ರಿ ಚಂದಿರನ ದರ್ಶನ ಪಡೆದು ಸಿಹಿಯನ್ನು ಪತಿಗೆ ತಿನ್ನಿಸಿ ನಂತರ ತಾವೂ ಊಟ ಮಾಡುತ್ತಾರೆ. ಟೀಂ ಇಂಡಿಯಾದಲ್ಲಿರುವ ಆಟಗಾರರ ಪತ್ನಿಯರು ಈ ವ್ರತ ಆಚರಿಸುವುದರಿಂದ ಪಂದ್ಯ ಮುಂದೂಡಲಾಗುತ್ತಿದೆ ಎಂಬ ಸುದ್ದಿಯಿದೆ.
|
ಮಹಿಳಾ ಕ್ರಿಕೆಟ್ ಪಂದ್ಯವಾಗಿದ್ದರೆ ಹೌದು ಎನ್ನಬಹುದಿತ್ತು
ಮೈದಾನಕ್ಕೆ ಕರ್ವಾ ಚೌತ್ ತಂದ ಬಿಸಿಸಿಐ, ಫನ್ನಿ ಟ್ವೀಟ್ಸ್: ಮಹಿಳಾ ಕ್ರಿಕೆಟ್ ಪಂದ್ಯವಾಗಿದ್ದರೆ, ಬಿಸಿಸಿಐ ಕ್ರಮ ಸರಿಯಾಗಿದೆ ಹೌದು ಎನ್ನಬಹುದಿತ್ತು. ಆದರೆ, ಇದು ಪ್ರಜ್ಞೆ ಇಲ್ಲದ ಕ್ರಮ.
|
ಏಕದಿನ ಪಂದ್ಯ ದಿನಾಂಕ ಬದಲು ಏಕೆ?
ಮೈದಾನಕ್ಕೆ ಕರ್ವಾ ಚೌತ್ ತಂದ ಬಿಸಿಸಿಐ, ಟ್ವೀಟ್ಸ್ : ಏಕದಿನ ಪಂದ್ಯ ದಿನಾಂಕ ಬದಲು ಏಕೆ? ಕರ್ವಾ ಚೌತ್ ಹಬ್ಬಕ್ಕಾಗಿ ಪಂದ್ಯದ ದಿನಾಂಕ ಬದಲಾಯಿಸಿದ್ದಾರೆಯೇ? ನಂಬಲು ಸಾಧ್ಯವಾಗುತ್ತಿಲ್ಲ.
|
ಟೀಂ ಇಂಡಿಯಾದಲ್ಲಿ ಎಲ್ಲರು ವಿವಾಹಸ್ಥರೇ?
ಓಹ್! ಕರ್ವಾ ಚೌತ್ ಗಾಗಿ ಪಂದ್ಯದ ದಿನ ಬದಲಾಯಿಸಿದ್ದಾರೆ ಎಂದರೆ, ಟೀಮ್ ಇಂಡಿಯಾದ ಎಲ್ಲರೂ ವಿವಾಹಸ್ಥರಾಗಿ ಬಿಟ್ಟಿದ್ದಾರೆ ಎಂದರ್ಥ. ಹೆಂಡತಿ ಮಾತು ಕೇಳದೆ ಇರಲು ಸಾಧ್ಯವೇ?
|
ಪಂದ್ಯ ಬದಲಾವಣೆ ಹಿಂದಿನ ರಹಸ್ಯ ಹೀಗಿದೆ
ಸರ್ ರವೀಂದ್ರ ಜಡೇಜ ಅವರ ಪತ್ನಿಗೆ ಇದು ಮೊದಲ ಕರ್ವಾ ಚೌತ್ ಹಬ್ಬ, ಹಾಗಾಗಿ ಬಿಸಿಸಿಐ ಪಂದ್ಯವನ್ನು ಮುಂದೂಡಿದೆ. ಜಡೇಜ ಪವರ್ ಬಗ್ಗೆ ಈಗಲಾದರೂ ತಿಳಿಯಿತೇ?
|
ಕ್ರಿಕೆಟರ್ಸ್ ಗಳ ಪತ್ನಿಗಳು ಹೀಗಿರುತ್ತಾರೆ
ಮೈದಾನಕ್ಕೆ ಕರ್ವಾ ಚೌತ್ ತಂದ ಬಿಸಿಸಿಐ, ಫನ್ನಿ ಟ್ವೀಟ್ಸ್ ಮುಂದುವರೆಯುತ್ತಲೇ ಇದೆ. ಕ್ರಿಕೆಟರ್ಸ್ ಗಳ ಪತ್ನಿಗಳು ಹೀಗಿರುತ್ತಾರೆ ಎಂಬ ವಿಡಿಯೋ
|
ಪಂದ್ಯ ಮುಂದೂಡುವುದನ್ನು ತಡೆಯಬಹುದಿತ್ತು
ಪಂದ್ಯ ಮುಂದೂಡುವುದನ್ನು ತಡೆಯಬಹುದಿತ್ತು ತಂಡದಲ್ಲಿ ಉನ್ಮುಕ್ತ್ 'ಚಂದ್' ಇದ್ದಿದ್ರೆ ಸಾಕಿತ್ತು. ಚಂದ್ರನ ದರ್ಶನವಾಗುತ್ತಿತ್ತು.