ನವದೆಹಲಿ, ಜೂನ್ 19: ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನದ ಜಯವನ್ನು ಆಚರಿಸಿದ ಕಾಶ್ಮೀರದ ಪ್ರತ್ಯೇಕತಾ ವಾದಿಗಳಿಗೆ ಕ್ರಿಕೆಟಿಗ ಗೌತಮ್ ಗಂಭೀರ್ ಛೀಮಾರಿ ಹಾಕಿದ್ದಾರೆ.
ಭಾನುವಾರ (ಜೂನ್ 18) ಲಂಡನ್ ನಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಡೆದಿತ್ತು. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡವು, ಭಾರತ ತಂಡವನ್ನು 180 ರನ್ ಗಳಿಂದ ಪರಾಭವಗೊಳಿಸಿ, ಕಪ್ ಗೆದ್ದುಕೊಂಡಿತ್ತು.
ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದೇಕೆ?
ಭಾರತ ತಂಡದ ಸೋಲು ಖಾತ್ರಿಯಾಗುತ್ತಲೇ ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಇನ್ನು, ಪಂದ್ಯ ಮುಗಿದ ಮೇಲಂತೂ ಇವರ ಸಂತೋಷ ಇಮ್ಮಡಿಯಾಗಿತ್ತು.
ಅಗಾಧವಾಗಿ ಬೆಳೆದಿದೆ ಕುಂಬ್ಳೆ- ಕೊಹ್ಲಿ ನಡುವಿನ ಭಿನ್ನಾಭಿಪ್ರಾಯ
ಈ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದರ ಜತೆಗೆ, ಕಾಶ್ಮೀರದ ಪ್ರತ್ಯೇಕತಾವಾದಿಯಾದ ಹುರಿಯತ್ ಕಾನ್ಫರೆನ್ಸ್ ಸಂಘಟನೆ ನಾಯಕ ಮಿರ್ ವೈಜ್ ಉಮರ್ ಫಾರೂಕ್ ಟ್ವೀಟ್ ಮಾಡಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಗೆದ್ದಿದ್ದು ಈಗಲೇ ರಂಜನ್ ಬಂದಂಥ ವಾತಾವರಣ ಸೃಷ್ಟಿಸಿದೆ. ಉತ್ತಮ ತಂಡ ಈ ದಿನವನ್ನಾಳಿದೆ. ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು.
Fireworks all around, feels like an early Eid here. Better team took the day. Congratulations team #Pakistan
— Mirwaiz Umar Farooq (@MirwaizKashmir) June 18, 2017
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಗಂಭೀರ್, ''ಮಿರ್ ವೈಜ್ ಉಮರ್ ಫಾರೂಕ್ ಅವರೇ, ನೀವ್ಯಾಕೆ ಗಡಿ ದಾಟಿ ಪಾಕಿಸ್ತಾನದೊಳಗೆ ಹೋಗಿ ಈ ಜಯವನ್ನು ಸಂಭ್ರಮಿಸಬಾರದು? ಅಲ್ಲಿ ನಿಮಗೆ ಇಲ್ಲಿ ಸಿಗುವುದಕ್ಕಿಂತ ಉತ್ತಮವಾದ ಪಟಾಕಿಗಳು (ಚೀನಾ ಬ್ರಾಂಡ್) ಸಿಗಬಹುದು. ನೀವು ಅಲ್ಲೇ ಈದ್ ಆಚರಿಸಿ. ನೀವೀಗಲೇ ನಿಮ್ಮ ಬಟ್ಟೆಬರೆ ಪ್ಯಾಕ್ ಮಾಡುವುದಾದರೆ ನಾನು ಸಹಾಯ ಮಾಡುವೆ'' ಎಂದು ಕಿಚಾಯಿಸಿದ್ದಾರೆ.
A suggestion @MirwaizKashmir why don't u cross the border? U will get better fireworks (Chinese?), Eid celebs there.I can help u wid packing
— Gautam Gambhir (@GautamGambhir) June 18, 2017