ಆಫ್ ಸ್ಪಿನ್ನರ್ ರವಿಚಂದ್ರನ್ ಗಾಯಳುವಾಗಿದ್ದು
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದ ಸೋಲಿನ ಆಘಾತದ ಅನುಭವಿಸಲು ತಂಡದ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಗಾಯಳುವಾಗಿದ್ದು ಕಾರಣ. ವಿಕೆಟ್ ಪಡೆಯುವುದು, ರನ್ ನಿಯಂತ್ರಣ ಎಲ್ಲವೂ ಅಶ್ವಿನ್ ರಿಂದ ಸಾಧ್ಯವಿತ್ತು. ಇನ್ನೂ 5.2 ಅಶ್ವಿನ್ ಬೌಲ್ ಮಾಡಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 303/5 ಸ್ಕೋರ್ ಮಾಡಿತು. ಅಶ್ವಿನ್ ಅನುಪಸ್ಥಿತಿ ಮುಳುವಾಯಿತು ಎಂದು ಧೋನಿ ಕೂಡಾ ಹೇಳಿದರು.
ಆಯ್ಕೆ ಸಮರ್ಥಿಸಿಕೊಂಡ ರಹಾನೆ
ಸಿಕ್ಕ ಅವಕಾಶವನ್ನು ರಹಾನೆ ಚೆನ್ನಾಗಿ ಬಳಸಿಕೊಂಡು 82 ಎಸೆತಗಳನ್ನು ಎದುರಿಸಿ 60 ರನ್ಗಳ ಕೊಡುಗೆ ನೀಡಿದ್ದರು. ಆದರೆ ಕೊಹ್ಲಿ 18 ಎಸೆತಗಳಲ್ಲಿ 11 ರನ್ ಸೇರಿಸಿ ಔಟಾದರು. ಕೊಹ್ಲಿ ಪಂದ್ಯದ ಬಳಿಕ ಬದಲಾವಣೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ರೋಹಿತ್, ಶಿಖರ್ ಹಾಗೂ ಕೊಹ್ಲಿ ಮೊದಲ ಮೂರು ಸ್ಥಾನಕ್ಕೆ ಫಿಕ್ಸ್ ಆಗಿರುವುದರಿಂದ ರಹಾನೆ ಆಯ್ಕೆ ಗೊಂದಲ ಹೆಚ್ಚಾಗಿತ್ತು. ಅದರೆ, ರಹಾನೆ ಆಯ್ಕೆ ಮಾಡಿ ಧೋನಿ ಅಚ್ಚರಿ ಮೂಡಿಸಿದರು.
ಇಮ್ರಾನ್ ತಾಹೀರ್ ಡಬ್ಬಲ್ ವಿಕೆಟ್ ಓವರ್
ರನ್ ಚೇಸ್ ಮಾಡುವಾಗ ಭಾರತಕ್ಕೆ 24 ಎಸೆತಗಳಲ್ಲಿ 35ರನ್ ಬೇಕಿದ್ದ ಸಂದರ್ಭದಲ್ಲಿ ಭಾರತ ಸುಸ್ಥಿತಿಯಲ್ಲಿತ್ತು. ರೋಹಿತ್ 150ರನ್ ಗಳಿಸಿದ್ದರು. ಅದರೆ, 47ನೇ ಓವರ್ ನಲ್ಲಿ ಲೆಗ್ ಸ್ಪಿನ್ನರ್ ಇಮ್ರಾನ್ ಅವರು ಪಂದ್ಯದ ಗತಿ ಬದಲಾಯಿಸಿದರು. ಮೊದಲ ಎಸೆತದಲ್ಲಿ ರೋಹಿತ್ ಹಾಗೂ ಐದನೇ ಎಸೆತದಲ್ಲಿ ಸುರೇಶ್ ರೈನಾ ಅವರನ್ನು ಬಲಿ ಪಡೆದಿದ್ದು ಭಾರತಕ್ಕೆ ಮುಳುವಾಯಿತು.
ಎಬಿ ಡಿವಿಲೆಯರ್ಸ್ ಆರ್ಭಟ
ಏಕದಿನ ತಂಡದ ನಾಯಕ ಎಬಿ ಡಿವಿಲೆಯರ್ಸ್ ಅವರು 73 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿ 304 ಸ್ಕೋರ್ ಮಾಡುವಂತೆ ಆಯಿತು. ಸರಾಸರಿ 240ರನ್ ಸ್ಕೋರ್ ಮಾಡಬಹುದಾದ ಪಿಚ್ ನಲ್ಲಿ 300ರನ್ ಚೇಸ್ ಮಾಡುವುದು ಟೀಂ ಇಂಡಿಯಾಕ್ಕೆ ಕಷ್ಟವಾಯಿತು.
ಕೈ ಕೊಟ್ಟ ಧೋನಿ, ರಬಡಾ ಬೊಂಬಾಟ್ ಬೌಲಿಂಗ್
ಕೊನೆ 6 ಎಸೆತಗಳಲ್ಲಿ 11ರನ್ ಗಳಿಸಬೇಕಾಗಿದ್ದ ಸಂದರ್ಭದಲ್ಲಿ ಎಂಎಸ್ ಧೋನಿ ಅವರು ಯುವ ವೇಗಿಯ ಎಸೆತದ ಮರ್ಮ ಅರಿಯಲಾಗದೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಧೋನಿ ಆಟವನ್ನು ನೋಡಿ ಬೆಳೆದ ನಾನು ಅವರ ವಿಕೆಟ್ ಪಡೆದಿದ್ದು ಅದ್ಭುತ ಕ್ಷಣ ಎಂದು 20ವರ್ಷ ವಯಸ್ಸಿನ ಕಂಗಿಸೋ ರಬಡಾ ಹೇಳಿದ್ದ ಅಚ್ಚರಿಯೇನಿಲ್ಲ. ಕೊನೆ ಓವರ್ ನಲ್ಲಿ 5ರನ್ ಮಾತ್ರ ನೀಡಿದ ರಬಡಾ ದಕ್ಷಿಣ ಆಫ್ರಿಕಾಕ್ಕೆ 5 ರನ್ ಗಳ ಜಯ ತಂದಿತ್ತರು.