ನವದೆಹಲಿ, ಮಾರ್ಚ್ 24: ಪ್ರೊಫೆಸರ್ ಡಿಬಿ ದೇವಧರ್ ಟ್ರೋಫಿ 2017ಕ್ಕಾಗಿ ಭಾರತ 'ಬ್ಲೂ' ತಂಡದಲ್ಲಿ ಭಾರಿ ಬದಲಾವಣೆಯಾಗಿದೆ. ಗಾಯಾಳುವಾಗಿರುವ ನಾಯಕ ರೋಹಿತ್ ಶರ್ಮ ಅವರು ಇನ್ನೂ ಗುಣಮುಖರಾಗದ ಕಾರಣ, ಅವರ ಸ್ಥಾನವನ್ನು ಹರ್ಭಜನ್ ಸಿಂಗ್ ತುಂಬುತ್ತಿದ್ದಾರೆ.
ಇತ್ತೀಚೆಗೆ ಇಂಡಿಯಾ 'ಬ್ಲೂ; ಹಾಗೂ ಭಾರತ 'ರೆಡ್' ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆದಾರರು ಪ್ರಕಟಿಸಿಸಿತ್ತು.. ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಗೆದ್ದ ತಮಿಳುನಾಡಿನ ವಿರುದ್ಧ ಈ ಎರಡು ತಂಡಗಳು ಸೆಣಸಲಿವೆ. ವೈಜಾಗ್ ನಲ್ಲಿ ಮಾರ್ಚ್ 25 ರಿಂದ 29ರ ತನಕ ಪಂದ್ಯಾವಳಿ ನಡೆಯಲಿದೆ.
ಹಿರಿಯ ಆಟಗಾರರಾದ ಇಂಡಿಯಾ 'ರೆಡ್' ತಂಡಕ್ಕೆ ಪಾರ್ಥೀವ್ ಪಟೇಲ್ ಕ್ಯಾಪ್ಟನ್ ಆಗಿದ್ದರೆ, ಇಂಡಿಯಾ ಬ್ಲೂ ಗೆ ಹರ್ಭಜನ್ ಸಿಂಗ್ ನಾಯಕರಾಗಿದ್ದಾರೆ. ಬ್ಲೂ ತಂಡದ ಪ್ರಮುಖ ಆಟಗಾರಾದ ರೋಹಿತ್ ಶರ್ಮ (ಕಾಲು ನೋವು) ಹಾಗೂ ರೆಡ್ ತಂಡದಿಂದ ಕೇದಾರ್ ಜಾಧವ್ (ಹೊಟ್ಟೆ ನೋವು) ತಂಡದಿಂದ ಹೊರ ನಡೆದಿದ್ದು, ಬದಲಿ ಆಟಗಾರರನ್ನು ಸೂಚಿಸಲಾಗಿದೆ.
ಇಂಡಿಯಾ 'ಬ್ಲೂ' : ರೋಹಿತ್ ಶರ್ಮ (ನಾಯಕ), ಮನ್ದೀಪ್ ಸಿಂಗ್, ಶ್ರೇಯಸ್ ಐಯರ್, ಅಂಬಟಿ ರಾಯುಡು, ಮನೋಜ್ ತಿವಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಹರ್ಭಜನ್ ಸಿಂಗ್, ಕೃನಾಲ್ ಪಾಂಡ್ಯ, ಶಬಾಜ್ ನದೀಂ, ಸಿದ್ದಾರ್ಥ್ ಕೌಲ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಪಂಕಜ್ ರಾವ್.