ಕಲಾಂ ಅವರು ಭಾರತಕ್ಕೆ ಸ್ಪೂರ್ತಿ
ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ, ವಿವಿಎಸ್ ಲಕ್ಷ್ಮಣ್, ಬಿಷನ್ ಸಿಂಗ್ ಬೇಡಿ, ಸುರೇಶ್ ರೈನಾ, ಆರ್ ಅಶ್ವಿನ್, ವಿನಯ್ ಕುಮಾರ್ ಸೇರಿದಂತೆ ಹಲವಾರು ಕ್ರಿಕೆಟರ್ಸ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
|
ಸಚಿನ್ ತೆಂಡೂಲ್ಕರ್ ಅವರಿಂದ ಟ್ವೀಟ್
ಸಚಿನ್ ತೆಂಡೂಲ್ಕರ್ ಅವರು ಟ್ವೀಟ್ ಮಾಡಿ, ರಾಷ್ಟ್ರಪತಿ, ವಿಜ್ಞಾನಿ, ಶ್ರೇಷ್ಠ ಮಾನವತಾವಾದಿ ಎಂದಿದ್ದಾರೆ.
|
ವಿರಾಟ್ ಕೊಹ್ಲಿಯಿಂದ ಟ್ವೀಟ್
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಟ್ವೀಟ್ ಮಾಡಿ ಕಲಾಂ ಅವರು ನಮಗೆಲ್ಲ ಮಾದರಿ ವ್ಯಕ್ತಿಯಾಗಿದ್ದರು ಎಂದಿದ್ದಾರೆ.
|
ಅನಿಲ್ ಕುಂಬ್ಳೆ ಅವರಿಂದ ಟ್ವೀಟ್
ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಅವರು ಟ್ವೀಟ್ ಮಾಡಿ, ದೇಶದ ಲಕ್ಷಾಂತರ ಮಂದಿಗೆ ನೀವು ಸ್ಪೂರ್ತಿಯಾಗಿದ್ದೀರಿ ಎಂದಿದ್ದಾರೆ.
|
ಕಲಾಂ ಅವರ ಕನಸು ನನಸು ಮಾಡೋಣ
ಕಲಾಂ ಅವರು ಕಂಡ ವಿಷನ್ 2020 ಕನಸು ನನಸು ಮಾಡೋಣ ಎಂದ ಸ್ಪಿನ್ನರ್ ಆರ್ ಅಶ್ವಿನ್.
|
ಮಗುವಿನಂಥ ಕುತೂಹಲ ಹೊಂದಿದ್ದ ವ್ಯಕ್ತಿ
ಕಲಾಂ ಅವರು ಮಗುವಿನಂಥ ಕುತೂಹಲ ಹೊಂದಿದ್ದ ವ್ಯಕ್ತಿಯಾಗಿದ್ದರು. ಯಶಸ್ಸಿನ ಸೂತ್ರ ಏನು ಎಂದು ಕೇಳಿದರೆ, hard work, hard work ಎಂದರು.
|
ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಟ್ವೀಟ್
ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಜ್ಞಾನವನ್ನು ಯುವ ಜನತೆಗೆ ಹಂಚಿದ ಮಹಾನ್ ಗುರು ಎಂದಿದ್ದಾರೆ.
|
ಕಲಾಂ ನಿಧನ, ತುಂಬಲಾರದ ನಷ್ಟ: ವಿನಯ್
ಕಲಾಂ ಅವರ ನಿಧನ, ತುಂಬಲಾರದ ನಷ್ಟ ಎಂದು ಕರ್ನಾಟಕದ ನಾಯಕ ವಿನಯ್ ಕುಮಾರ್ ಅವರು ಕಂಬನಿ ಮಿಡಿದಿದ್ದಾರೆ.
|
ಕಲಾಂ ಅವರ ಉಕ್ತಿಗಳ ಟ್ವೀಟ್
ಕಲಾಂ ಅವರ ಸ್ಪೂರ್ತಿದಾಯಕ ಉಕ್ತಿಯನ್ನೊಂದು ಟ್ವೀಟ್ ಮಾಡಿದ ಆಶೋಕ್ ಚೋಪ್ರಾ.
|
ಕನಸು ಕಾಣಿ ಎಂದ ಮಹಾನ್ ಗುರು
ಸದಾ ಕನಸು ಕಾಣಿ ಎಂದ ಮಹಾನ್ ಗುರು ಎಂದು ಬಣ್ಣಿಸಿದ ಮಾಜಿ ಕ್ರಿಕೆಟರ್ ಸಂಜಯ್ ಮಂಜೇಕ್ರರ್.
|
ಭಾರತದ ನಿಜವಾದ ರತ್ನವಾಗಿದ್ದ ಕಲಾಂ
ಭಾರತದ ನಿಜವಾದ ರತ್ನವಾಗಿದ್ದ ಕಲಾಂ ಅವರ ನಿಧನ ತುಂಬಲಾರದ ನಷ್ಟ ಎಂದ ಶ್ರೀಶಾಂತ್.