ಹುಬ್ಬಳ್ಳಿ, ಸೆ 22 : ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯಬೇಕಿದ್ದ 5ನೇ ಆವೃತ್ತಿ ಕೆಪಿಎಲ್ ಮೊದಲ ಹಂತದ ಕ್ರಿಕೆಟ್ ಪಂದ್ಯಗಳು ಫೈನಲ್ ಪಂದ್ಯದವರೆಗೂ ಹುಬ್ಬಳ್ಳಿಯಲ್ಲಿಯೇ ಜರುಗಲಿವೆ ಎಂದು ಕರ್ನಾಟಕ ಕ್ರಿಕೆಟ್ ನಿಯಂತ್ರಣ ಮಂಡಳಿ ಉಪಾಧ್ಯಕ್ಷ ಸುಧಾಕರ ರಾವ್ ಹೇಳಿದ್ದಾರೆ.
[ಗ್ಯಾಲರಿ: ಕರ್ನಾಟಕ ಪ್ರೀಮಿಯರ್ ಲೀಗ್ 2016]
ಅವರು ನಗರದ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ಕೆಪಿಎಲ್ ಪಂದ್ಯಾವಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿಯಲ್ಲಿ ಈಗಾಗಲೇ ಪಂದ್ಯಾವಳಿ ನಡೆಸಲು ಎಲ್ಲ ಸಿದ್ಧತೆಗಳು ಸಿದ್ಧವಾಗಿಯೇ ಇವೆ. ಹೀಗಾಗಿ ಮೈಸೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಹುಬ್ಬಳ್ಳಿಯಲ್ಲಿ ಮುಂದುವರೆಸಲಾಗುವುದು ಎಂದರು. [ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]
ಸೆ. 17ರಿ೦ದ 26ರವರೆಗೆ ಹುಬ್ಬಳ್ಳಿಯಲ್ಲಿ ಮೊದಲ ಲೀಗ್ ನಡೆಯಲಿದೆ. ಸೆ.28ರಿ೦ದ ಅ. 2ರವರೆಗೆ ಮೈಸೂರಿನಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಸೇರಿದ೦ತೆ 2ನೇ ಲೀಗ್ ನಡೆಸಲು ನಿಗದಿಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಹುಬ್ಬಳ್ಳಿಯಲ್ಲೇ ಕೆಪಿಎಲ್ ಫೈನಲ್ ನಡೆಯಲಿದೆ.