ಮೈಸೂರು, ಸೆ. 21: ವೇಗಿ ವೈಶಾಕ್ ವಿಜಯಕುಮಾರ್, ಸ್ಪಿನ್ನರ್ ಕಾರ್ಯಪ್ಪ ಮಾರಕ ಬೌಲಿಂಗ್ ದಾಳಿ ಹಾಗೂ ರಾಬಿನ್ ಉತ್ತಪ್ಪ, ನಾಯಕ ಅಖಿಲ್ ಸಮಯೋಚಿತ ಆಟದ ನೆರವಿನಿಂದ ಬಿಜಾಪುರ ಬುಲ್ ತಂಡ 2015ರ ಕೆಪಿಎಲ್ ಚಾಂಪಿಯನ್ಸ್ ಆಗಿ ಕುಣಿದಾಡಿದೆ. ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಅಂತಿಮ ಹಣಾಹಣಿಯಲ್ಲಿ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಬಿಜಾಪುರ ಬುಲ್ಸ್ ತಂಡ 7 ವಿಕೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸಿತು.
ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ನಾಲ್ಕನೇ ಸೀಸನ್ ನ ಫೈನಲ್ ಪಂದ್ಯದ ಆರಂಭದಿಂದಲೂ ಬಿಜಾಪುರ ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿತು. ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಹುಬ್ಬಳ್ಳಿ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ಗಳಿಗೆ 114 ರನ್ ಮಾತ್ರ ಪೇರಿಸಿತು. ರನ್ ಚೇಸಿಂಗ್ ಗೆ ಇಳಿದ ಬಿಜಾಪುರ ತಂಡ ಬಿಜಾಪುರ ತಂಡ 17.1 ಓವರ್ಗಳಲ್ಲಿ 3 ವಿಕೆಟ್ಗೆ 115 ರನ್ ದಾಖಲಿಸಿ ವಿಜಯೋತ್ಸವ ಆಚರಿಸಿತು.
ಕೆಪಿಎಲ್ ಚಾಂಪಿಯನ್ ಗಳು:
2009ರ ಚಾಂಪಿಯನ್: ಬೆಂಗಳೂರು ಪ್ರಾವಿಡೆಂಟ್(ಗ್ರಾಮೀಣ)
2010: ಮಂಗಳೂರು ಯುನೈಟೆಡ್
2011 to 2013 - ಟೂರ್ನಿ ನಡೆದಿರಲಿಲ್ಲ.
2014 - ಮೈಸೂರು ವಾರಿಯರ್ಸ್
2015 - ಬಿಜಾಪುರ್ ಬುಲ್ಸ್
(ಒನ್ ಇಂಡಿಯಾ ಕನ್ನಡ)