ವಿಚ್ಛೇದನಕ್ಕೆ ಏನು ಕಾರಣ?
ವಿವಾಹ ವಿಚ್ಛೇದನಕ್ಕೆ ನನ್ನ ಪತಿ ಜೋರಾವರ್ ಸಿಂಗ್ ಕಾರಣರಲ್ಲ. ಯುವರಾಜ್ ಸಿಂಗ್ ಹಾಗೂ ಅವರ ತಾಯಿಯೇ ಕಾರಣ ಎಂದು ಪರೋಕ್ಷವಾಗಿ ಆರೋಪಿಸಿದರು. ಈಗ ಬಿಗ್ ಬಾಸ್ ಮನೆಯಲ್ಲಿ ಹೊಸ ಬದುಕು ಕಂಡುಕೊಳ್ಳಲು ಬಯಸಿದ್ದೇನೆ ಎಂದಿದ್ದಾರೆ.
ಸೆಲಿಬ್ರಿಟಿ ಸ್ಪರ್ಧಿ ಗೌರವ್ ಜತೆ ಚರ್ಚೆ
ಇದೇ ವಿಷಯವನ್ನು ಸೆಲಿಬ್ರಿಟಿ ಸ್ಪರ್ಧಿ ಗೌರವ್ ಜತೆ ಕೂಡಾ ಚರ್ಚಿಸಿದ್ದಾರೆ. ಮಾಲೀಕ ಹಾಗೂ ಸೇವಕ ಟಾಸ್ಕ್ ನಲ್ಲಿ ಅಕಾಂಕ್ಷಾ ಅವರ ಸೇವಕನಾಗಿ ಗೌರವ್ ಕಾರ್ಯ ನಿರ್ವಹಿಸುತ್ತಿದ್ದರು.
ಇನ್ನೂ ವಿವಾಹ ವಿಚ್ಛೇದನ ಸಿಕ್ಕಿಲ್ಲ
ಸಹ ಸ್ಪರ್ಧಿ ಗೌರವ್ ಜತೆ ಮಾತನಾಡುವ ಸಂದರ್ಭದಲ್ಲಿ ಆಕಾಂಕ್ಷಾ ಅವರ ಉಗುರಿನ ಬಣ್ಣವನ್ನು ಗೌರವ್ ತೆಗೆಯುತ್ತಿದ್ದರು. ತನ್ನ ಮದುವೆ, ಸಂಸಾರದ ಬಗ್ಗೆ ಆಕಾಂಕ್ಷಾ ಹೇಳಿಕೊಂಡರು. ವಿವಾಹ ವಿಚ್ಛೇದನ ಇನ್ನೂ ಸಿಕ್ಕಿಲ್ಲ. ಈ ಶೋನಲ್ಲಿ ನನ್ನ ನೋವನ್ನು ತೋಡಿಕೊಂಡಿದ್ದೇನೆ. ನನಗೆ ಒಳ್ಳೆ ಬದುಕು ಸಿಗುವ ನಿರೀಕ್ಷೆಯಿದೆ ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಯುವಿ ತಾಯಿ
ಈ ಬಗ್ಗೆ ಪ್ರತಿಕ್ರಿಯಿಸಿದ ಯುವರಾಜ್ ಸಿಂಗ್ ತಾಯಿ ಶಬನಮ್ ಸಿಂಗ್, ವಿಚ್ಛೇದನ ವಿಷಯ ಸದ್ಯ ಕೋರ್ಟಿನಲ್ಲಿದೆ. ಈ ವಿಷಯವಾಗಿ ಆಕೆ ಹೇಗೆ ಮಾತನಾಡಬಲ್ಲಳು. ನ್ಯಾಯಾಂಗ ನಿಂದನೆಯಾಗುವುದಿಲ್ಲವೇ. ನಮ್ಮನ್ನು ಹೇಳಲು ಸಾಕಷ್ಟು ವಿಷಯವಿದೆ. ಆದರೆ, ಕೆಸರೆರೆಚಾಟದಲ್ಲಿ ತೊಡಗಲು ನನಗಿಷ್ಟವಿಲ್ಲ. ಆಕೆ ಕೂಡಾ ಒಬ್ಬರ ಮಗಳು ಎಂಬುದನ್ನು ಮರೆಯದಿರಲಿ ಎಂದಿದ್ದಾರೆ.